ಒಂದೇ ಫ್ಲೆಕ್ಸ್ನಲ್ಲಿ ಹಾಲಿ ಮಾಜಿ ಶಾಸಕರು: ಕೈ – ಕಮಲ ಒಂದಾಗಿದ್ಯಾಕೆ..? ಲಾಕ್ ಡೌನ್ ಉಲ್ಲಂಘನೆ ಇವರ ವ್ಯಾಪ್ತಿಗೆ ಬರೋದಿಲ್ಲವಾ

ಗರುಡವಾಯ್ಸ್ EXCLUSIVE
ದಾವಣಗೆರೆ: ಒಂದೇ ಫ್ಲೆಕ್ಸ್ನಲ್ಲಿ ಹಾಲಿ ಶಾಸಕ, ಮಾಜಿ ಶಾಸಕ ಒಂದಾಗಿರುವ ಘಟನೆ ನಡೆದಿದೆ. ಹರಿಹರದ ಹಾಲಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್ ಒಂದಾಗಿದ್ದಾರೆ!.
ಹೌದು ಇಂದು ಭಾನುವಾರ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶೇರಾಪುರದಲ್ಲಿ ಕೆ ಹೆಚ್ ಬಿ ವತಿಯಿಂದ ನಿರ್ಮಿಸಲಾಗಿರುವ ಕಾಮಗಾರಿ ವೀಕ್ಷಿಸಲು ವಸತಿ ಸಚಿವ ವಿ. ಸೋಮಣ್ಣ ಬಂದಿದ್ದರು. ಸಚಿವರ ಸ್ವಾಗತಕ್ಕಾಗಿ, ದಾವಣಗೆರೆ ನಗರ ಪ್ರವೇಶದ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಹಾಕಲಾಗಿರುವ ಫ್ಲೆಕ್ಸ್ನಲ್ಲಿ ಕೈ-ಕಮಲ ನಾಯಕರು ಒಂದಾಗಿದ್ದಾರೆ.
ಬಿ ಜೆ ಪಿಯ ನಾಯಕರಿರುವ ಫ್ಲೆಕ್ಸ್ ನಲ್ಲಿ, ಹರಿಹರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಈ ಪ್ಲೇಕ್ಸ್ ನಲ್ಲಿರುವ ಪೋಟೊ ನೋಡಿದ್ರೆ ಆಪರೇಷನ್ ಕಮಲಕ್ಕೆ ಬಲಿಯಾದ್ರಾ ಅಂತಾ ಯೋಚನೆ ಮಾಡಬೇಕಾಗುತ್ತೆ, ಅದೇನೇ ಇದ್ದರೂ ಕೈ ಕಮಲ, ಹಾಲಿ ಮಾಜಿ, ಶಾಸಕರು ಸ್ವಾಗತ ಬಯಸುವ ಫ್ಲೆಕ್ಸ್ ನಲ್ಲಾದರೂ ಒಂದಾಗಿದ್ದಾರೆ.
ಇಂದು ಮುಂಜಾನೆ ಬೆಂಗಳೂರು ನಿಂದ ಹರಿಹರಕ್ಕೆ ಬರುವ ಮಾರ್ಗದ NH-4 ಬೈಪಾಸ್ ದಾವಣಗೆರೆ ಹರಿಹರ ಮಾರ್ಗದಲ್ಲಿ ಸಚಿವ ಸೋಮಣ್ಣನವರಿಗೆ ಸ್ವಾಗತಕೋರುವ ಫ್ಲೆಕ್ಸ್ಗಳು ರಾರಾಜಿಸಿವೆ.
ಇತ್ತೀಚೆಗೆ ಹರಿಹರದ ಕೆಲವು ಕಾರ್ಯಕ್ರಮದ ವೇದಿಕೆಯಲ್ಲಿ ಪರಸ್ಪರರ ವಿರುದ್ಧ ಆರೋಪಗಳ ಸುರಿಮಳೆ ಸುರಿಸುತ್ತಿದ್ದ ಹಾಲಿ ಮಾಜಿ ಶಾಸಕರು ಇಂದು ಇಬ್ಬರೂ ಫ್ಲೆಕ್ಸ್ನಲ್ಲಿ ಒಂದಾಂಗಿ ಸ್ವಾಗತ ಕೋರಿದ್ದೇ ವಿಶೇಷವಾಗಿತ್ತು.
ಲಾಕ್ಡೌನ್ ಸಂದರ್ಭದಲ್ಲಿ ಫ್ಲೆಕ್ಸ್ ಪ್ರಿಂಟಿಂಗ್ಗೆ ಅವಕಾಶ ಇದೆಯಾ ? ಸ್ವಾಗತ ಫ್ಲೆಕ್ಸ್ ಪ್ರಿಂಟ್ ಮಾಡಿಸಿದ್ದು ಯಾರು ? ಅಧಿಕಾರಿಗಳ ಕಣ್ಣಿಗೆ ಫ್ಲೆಕ್ಸ್ಗಳು ಕಾಣಲಿಲ್ಲವಾ ?
ಸಚಿವರು, ಶಾಸಕರು, ಅಧಿಕಾರದಲ್ಲಿರುವ ವ್ಯಕ್ತಿಗಳಿಗೆ ಲಾಕ್ಡೌನ್ ಕಾನೂನಿನ ಉಲ್ಲಂಘನೆ ಯಾಗುವುದಿಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗೋದಿಲ್ಲ. ಒಟ್ಟಾರೆ ಅಧಿಕಾರಿಗಳ ಜಾಣ ಕುರುಡುತನದ ಪರಮಾವಧಿಗೆ ಇದೊಂದು ಉತ್ತಮ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.