ಜಿಲ್ಲಾ ಕಾಂಗ್ರೆಸ್‍ನಿಂದ ವ್ಯಾಕ್ಸೀನ್ ಪಡೆಯುವ ನಾಗರೀಕರಿಗೆ ಆಹಾರ ಮತ್ತು ನೀರು ವಿತರಣೆ

congress Davanagere food
ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ನಗರದ ಸೂಪರ್ ಮಾರುಕಟ್ಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಪಡೆಯುತ್ತಿರುವ ನಾಗರೀಕರಿಗೆ ಆಹಾರ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ನಾಗರೀಕರಿಗೆ ಆಹಾರ ಪೊಟ್ಟಣ ಮತ್ತು ನೀರು ಬಾಟಲಿಗಳನ್ನು ವಿತರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷದಿಂದಾಗಿ ನಾಗರೀಕರು ಬೀದಿಗೆ ಬಂದು ವ್ಯಾಕ್ಸೀನ್ ಪಡೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವಾರ್ಡ್, ಬೂತ್ ಮಟ್ಟದಲ್ಲಿ ವ್ಯಾಕ್ಸೀನ್ ನೀಡಿದ್ದರೆ ನಾಗರೀಕರಿಗೆ ತೊಂದರೆ ಆಗುತ್ತಿರಲಿಲ್ಲ. 70-80 ವಯಸ್ಸಿನ ವೃದ್ಧರು ಸರತಿ ಸಾಲಿನಲ್ಲಿ ಬೆಳಗಿನ ಜಾವ 4-30 ಗಂಟೆಯಿಂದ ನಿಂತು ವ್ಯಾಕ್ಸೀನ್ ಪಡೆಯುವಂತಾಗಿರುವುದು ದುರಂತ. ಒಂದು ಕೇಂದ್ರದಲ್ಲಿ ಕೇವಲ 100-150 ಜನರಿಗೆ ಮಾತ್ರ ವ್ಯಾಕ್ಸೀನ್ ನೀಡುತ್ತಿದ್ದು, 300ಕ್ಕೂ ಹೆಚ್ಚು ನಾಗರೀಕರು ಸರತಿ ಸಾಲಿನಲ್ಲಿ ನಿಂತಿದ್ದು, ಜಿಲ್ಲಾಡಳಿತವೂ ಸಹ ನಿರ್ಲಕ್ಷ್ಯ ವಹಿಸಿರುವ ಕಾರಣ ನಾಗರೀಕರು ವ್ಯಥೆ ಪಡುವಂತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕರಾದ ಎ.ನಾಗರಾಜ್, ಮುಖಂಡರುಗಳಾದ ಯುವರಾಜ್, ಶಿವು ಶೆಟ್ಟಿ ಮತ್ತಿತರರಿದ್ದರು.20210514_102614.jpg20210514_102601.jpg20210514_102603.jpg

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!