ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯರಿಗೆ 50 ಸಾವಿರವಲ್ಲ 1 ಲಕ್ಷ ರೂ ಹಣದ ಆಮಿಷವೊಡ್ಡಿದರೂ, ಬಿಜೆಪಿ ಅಭ್ಯರ್ಥಿ ಗೆಲುವು – ಸಂಸದ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ: ಕಾಂಗ್ರೆಸ್ನವರು ಪಂಚಾಯತ್ ಸದಸ್ಯರಿಗೆ ೫೦ ಸಾವಿರವಲ್ಲ ೧ ಲಕ್ಷ ರೂ., ಹಣದ ಆಮಿಷವೊಡ್ಡಿದರೂ ಸಹ ನಮ್ಮ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಸಂಸದ ಜಿ.ಎಂ. ಸಿದ್ದೇಶ್ವರ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಮಹಾ ನಗರ ಪಾಲಿಕೆ ಸದಸ್ಯರ ಮತ್ತು ಶಾಸಕರ ಮತಗಳ ಬೆಂಬಲವಿರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.
ಬಿಜೆಪಿ ಶಿಸ್ತಿನ ಪಕ್ಷವಾಗಿರುವುದರಿಂದ ನಮ್ಮ ಪಕ್ಷದವರು ಶಿಸ್ತಿನ ಸಿಪಾಯಿಗಳು. ನಮ್ಮವರಿಂದ ಮತ ನೀಡಲು ಯಾವುದೇ ಡಿಮ್ಯಾಂಡ್ ಇಲ್ಲ. ಪಕ್ಷದಿಂದ ನಿಲ್ಲಿಸಿದ ಅಭ್ಯರ್ಥಿ ಪರ ಮತ ನೀಡುತ್ತಾರೆ ಎಂದು ಸಮರ್ಥಿಸಿಕೊಂಡರು.