ಗುತ್ತಿಗೆ ಪದ್ದತಿ ಬದಲು ನೇರವೇತನಕ್ಕೆ ಹೊರಗುತ್ತಿಗೆ ನೌಕರರ ಸಂಘ ಆಗ್ರಹ

ದಾವಣಗೆರೆ:ರಾಜ್ಯದ ವಿವಿಧ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿಗಳಲ್ಲಿ ಹೊರಗುತ್ತಿಗೆ ಆಧಾರಮೇಲೆ ತ್ಯಾಜ್ಯ ಸಾಗಿಸುವ ವಾಹನ ಚಾಲಕರು , ವಾಟರ್ಮನ್ , ಡೆಟಾ ಆಪರೇಟರ್ , ಯುಜಿಡಿ ಕಾರ್ಮಿಕರು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ಧತಿ ಬದಲು ನೇರವೇತನಕ್ಕೆ ಒಳಪಡಿಸುವಂತೆ .ಕರ್ನಾಟಕ ರಾಜ್ಯ ಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ಆಗ್ರಹಿಸಿದೆ
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂಜಿ ನಾಗನಗೌಡ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರು ಅತ್ಯಂತ ಕಡು ಬಡತನಕ್ಕೆ ಸೇರಿದವರಾಗಿದು .
ಸಕಾಲಕ್ಕೆ ಕನಿಷ್ಟ ವೇತನವೂ ಕೈಗೆ ಸಿಗದೆ ಗುತ್ತಿಗೆ ಹೆಸರಿನ ಸರಕಾರಿ ಜೀತಗಾರಿಕೆಯಲ್ಲಿ ಗುತ್ತಿಗೆ ಏಜೆನ್ಸಿಗಳ ಶೋಷಣೆಗೆ ಒಳಗಾಗುತ್ತಿದ್ದಾರೆ. .
ಕಳೆದ 2017 ರಲ್ಲಿ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ಬಾಯಂಗೊಳಿಸಿದ ಸರಕಾರ ಪೌರಕಾರ್ಮಿಕ ರೊಂದಿಗೆ ಕೆಲಸ ನಿರ್ವಹಿಸುವ ಈ ನೌಕರರನ್ನು ಈವರೆಗೂ ಸರ್ಕಾರ ಗಮನಿಸುತ್ತಿಲ್ಲ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲಕ್ಕೆ ವೇತನ ನೀಡದಿರುವುದು.
ಕನಿಷ್ಟ ವೇತನ ಭವಿಷ್ಯ ನಿಧಿ ನೀಡದೆ ಗುತ್ತಿಗೆ ಏಜೆನ್ಸಿಗಳು ವಂಚಿಸುತಿವೆ . ಈ ಬಗ್ಗೆ ಪ್ರಶ್ನಿಸುವ ಕೆಲಸಗಾರರಿಗೆ ಕಿರುಕುಳ ನೀಡಿ ಕೆಲಸದಿಂದ ಕೈಬಿಡಲಾಗುತ್ತಿದೆ .
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಯಾವುದೇ ಕಾರ್ಮಿಕ ಹಕ್ಕುಗಳನ್ನು ನಿರಾಕರಿಸಿ ಜೀತಗಾರರಂತೆ ದುಡಿಸಿಕೊಳ್ಳಲಾಗುತ್ತಿದ್ದು ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ಪುರಸಭೆಯ ಹೊರಗುತ್ತಿಗೆ ವಾಹನ ಚಾಲಕನನ್ನು ತಡರಾತ್ರಿ ಶವವನ್ನು ಸಾಗಿಸಲು ಆದೇಶ ಮಾಡಿದ್ದಾರೆ ಶವ ಸಾಗಿಸಿ ಬರುವಾಗ ಮಾರ್ಗಮಧ್ಯೆ ಅಫಘಾತಕ್ಕೀಡಾಗಿ ಹೊರಗುತ್ತಿಗೆ ವಾಹನ ಚಾಲಕ ಸಾವನ್ನಪ್ಪಿದ್ದು
ಪುರಸಭೆ ಅಧಿಕಾರಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡಿಲ್ಲ
ದಾವಣಗೆರೆ ನಗರಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಮುಖಂಡ ದುಗ್ಗೇಶ್ ರನ್ನು ಕನಿಷ್ಟ ನೋಟಿಸ್ ಸಹ ನೀಡದೆ ಕೆಲಸದಿಂದ ಕಿತ್ತುಹಾಕಲಾಗಿದು,
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೂಡಲೆ ಈ ದೌರ್ಜನ್ಯ ನಿಲ್ಲಬೇಕು.ಹೊರಗುತ್ತಿಗೆ ನೌಕರರಿಗೆ ನೇರ ವೇತನ ಜಾರಿಗೊಳಿಸಬೇಕು.ಬಾಕಿ ಇರುವ ಪೌರಕಾರ್ಮಿಕರ ಹುದ್ದೆಗಳ ಎರಡನೇ ಹಂತದ ನೇಮಕಾತಿಗೆ ಚಾಲನೆ ನೀಡಬೇಕು .
ನೇರ ವೇತನ ಜಾರಿಯಿಂದಾಗಿ ಸರಕಾರ ಅನಗತ್ಯ ನೀಡುವ ಶೇ l8 ರಷ್ಟು ಜಿಎಸ್ ಟಿ ಹಣ ಹಾಗೂ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ 5 ರಷ್ಟು ಸೇವಾಶುಲ್ಕ ಸೇರಿ ಶೇ 25 ರಷ್ಟು ಹಣ ಉಳಿತಾಯವಾಗುತ್ತದೆ ಎಂದರು.
ರಾಜ್ಯ ಸರಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಇದೊಂದು ಚುನಾವಣಾ ಅಜೆಂಡಾವಾಗಿ ರೂಪುಗೊಳ್ಳಲಿದೆ ಎಂದು ಎಚ್ಚರಿಸಿದರು
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್,ದಲಿತ ಸಂಘರ್ಷ ಸಮಿತಿಹರಿಹರ ಪಿಜೆ ಮಹಾಂತೇಶ್,ವಿಜಯಮ್ಮ,ದುರ್ಗೇಶ್ ಇನ್ನಿತರರಿದ್ದರು