ಕೊರೋನಾ ವಾರಿಯರ್, ಹಿಂದೂ ಪರ ಹೋರಾಟಗಾರ ಶಿವಪ್ರಸಾದ ಕುರುಡಿಮಠ ಇನ್ನಿಲ್ಲ.

ದಾವಣಗೆರೆ: ಹತ್ತು ಜನ ಬಂದರೂ ಎದುರಿಸಿ ನಿಲ್ಲುವ, ಅನ್ಯಾಯದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ ಶಿವು(ಶಿವಪ್ರಸಾದ ಕುರುಡಿಮಠ) ಕೊರೋನಾಗೆ ಚಿಕಿತ್ಸೆ ಪಡೆದು, ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನಾ ದಿನವೇ ಹೃದಯಾಘಾತದಿಂದ ಅಗಲಿರುವುದು ತುಂಬಾ ನೋವು ತಂದಿದೆ.
ಕೊರೋನಾ ಬಂದಿತ್ತು ಗುಣಮುಖರಾಗಿ ಇವತ್ತು ಡಿಸ್ಚಾರ್ಜ್ ಇತ್ತು, ಆದ್ರೆ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ರು, ಇಂತಹ ಸಣ್ಣ ವಯಸ್ಸಿನಲ್ಲಿ ಸಾವು ಯಾರಿಗೂ ಬರದಿರಲಿ. ಧೈರ್ಯವಾಗಿರಿ, ನಿಮ್ಮ ಧೈರ್ಯವೇ ನಿಮ್ಮನ್ನು ಕಾಪಾಡೋದು, ಈ ಸಾವನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಎಷ್ಟೋ ಆಸೆ ಕನಸು ಹೊತ್ತಿದ್ದವ ಶಿವು, ಇನ್ನಿಲ್ಲ ಅಂದ್ರೆ ನೊಂಬೋಕೆ ಆಗ್ತಿಲ್ಲ.
ಕಳೆದ ಲಾಕ್ ಡೌನ್ ಅವದಿಯಲ್ಲಿ ಪ್ರತಿ ದಿನವೂ ಎಲ್ಲರಿಗೂ ಪುಡ್ ಕಿಟ್ ಎಲ್ಲಾದರೂ ಹಂಚಬೇಕಾ, ಯಾರಾದರೂ ಇದ್ದರೆ ಹೇಳಿ ಅಣ್ಣ ಅಂತಾ ಕಾಲ್ ಮಾಡಿ ಕೇಳಿ, ಹೇಳಿದ ಕೆಲವೇ ಗಂಟೆಗೆ ಅಲ್ಲಿ ಸ್ನೇಹಿತರೊಂದಿಗೆ ತೆರಳಿ ಕಿಟ್ ಹಂಚುತ್ತಿದ್ದ ಮಾನವೀಯ ಕಳಕಳಿಯ ಹುಡುಗ ಶಿವು.
ತಾನು ನಂಬಿರುವ ಸಿದ್ದಾಂತಕ್ಕೆ ಬದ್ದನಾಗಿ ರಾಜಿ ರಹಿತ ಹೋರಾಟ ಮಾಡುತ್ತಿದ್ದ ಶಿವು ಭವಿಷ್ಯದ ನಾಯಕನಾಗುವ ಅರ್ಹತೆ ಈಗಲೇ ತೋರಿಸುತ್ತಿದ್ದ.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಕಿಚ್ಚು ಮೈಗೂಡಿಸಿಕೊಂಡಿದ್ದ ಶಿವಪ್ರಸಾದ ಕುರುಡಿಮಠ ಅಗಲಿಕೆ ತೀವ್ರ ಆಘಾತ, ನೋವು ತಂದಿದೆ.
ಸಾವಿಗೆ ಕರುಣೆಯೇ ಇಲ್ಲವೇ? ಬಾಳಿ ಬೆಳಗಬೇಕಿದ್ದ ಇಂತಹವರು, ಕುಟುಂಬಕ್ಕೆ ಆಸರೆಯಾದ ಜೀವಗಳು, ಮನೆಗಳ ಹಿರಿಯ ಜೀವಗಳು, ಜೀವನಪೂರ್ತಿ ಕಷ್ಟಪಟ್ಟು ಇಳಿ ವಯಸ್ಸಲ್ಲಿ ನೆಮ್ಮದಿ, ಖುಷಿ ಕಾಣಲಿದ್ದ ಜೀವಗಳನ್ನೇ ಕೊರೋನಾ ಬಲಿ ಪಡೆಯುತ್ತಿದೆ. ದಯವಿಟ್ಟು ಪ್ರತಿಯೊಬ್ಬರೂ ಜಾಗೃತರಾಗಿರಿ. ಮನೆಯಲ್ಲೇ ಇರಿ, ಸುರಕ್ಚಿತವಾಗಿರಿ
🙏🏻 ಶಿವು ಆತ್ಮಕ್ಕೆ ಸದ್ಗತಿ ದೊರೆಯಲಿ 🙏🏻
ಮಾಧ್ಯಮ ಮಿತ್ರರು..