Astrology: ನಿತ್ಯ ಭವಿಷ್ಯ, ಇಂದು ಈ ರಾಶಿಯವರು ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ, ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ.

ದಾವಣಗೆರೆ: ” ನಿತ್ಯ ದ್ವಾದಶ ರಾಶಿ ಭವಿಷ್ಯ ” ” 10/ 07/ 2021 ಶನಿವಾರ “
|| श्री गुरुभ्यो नमः ||
|| श्री गणेशाय नम: ||
ॐ शक्ति युक्तो गणपतिः
भक्तत्राण परायणः |
विद्यार्थिभ्यो मुदां देव
विद्यां बुद्धिं प्रयच्छतु ||
~~~~~
ವಾಗೀಶಾದ್ಯಾಃ ಸುಮನಸಃ
ಸರ್ವಾರ್ಥಾನಾಮುಪಕ್ರಮೇ |
ಯಂ ನತ್ವಾ ಕೃತಕೃತ್ಯಾಃ ಸ್ಯುಃ
ತಂ ನಮಾಮಿ ಗಜಾನನಂ ||
_________
ಕಾರ್ಯಂ ಮೇ ಸಿದ್ಧಿಮಾಯಾಂತು
ಪ್ರಸನ್ನೇ ತ್ವಯಿ ಧಾತರಿ |
ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ ||
|| सिद्धि बुद्धि शक्ति गणपतये नमः ||
<<<<<<<<<<>>>>>>>>>
” ಮೇಷ ರಾಶಿ “
ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬ ಉಂಟಾಗುವ ಸಾಧ್ಯತೆ
ಇದ್ದು, ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ವೃಥಾ ತಿರುಗಾಟ ಉಂಟಾಗಬಹುದು ಆದರೂ ಕೀರ್ತಿದಾಯಕ ಫಲವಿದೆ.
ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ.
ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.
” ವೃಷಭ ರಾಶಿ ”
ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಬಂಧುಮಿತ್ರರ
ಭೇಟಿ, ಮನೆಯಲ್ಲಿ ಮಂಗಲಕಾರ್ಯ ಜರುಗುವ ಯೋಗವಿದೆ. ಕೋರ್ಟ್ನಲ್ಲಿರುವ ವ್ಯಾಜ್ಯಗಳು ಕೊನೆಗೊಳ್ಳುವವು ಕೃಷಿಕರಿಗೆ
ಉತ್ತಮ ದಿನವಿದು ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ.
ಭಕ್ತಿಯಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.
” ಮಿಥುನ ರಾಶಿ ”
ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗವಿದೆ.
ಒಳ್ಳೆಯ ಸ್ವಭಾವ ಇರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ. ಆಸಕ್ತಿಗೆ
ತಕ್ಕಂತೆ ಅವಕಾಶಗಳು ದೊರಕುವವು.
ಭಕ್ತಿಯಿಂದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.
” ಕಟಕ ರಾಶಿ ”
ಆರೋಗ್ಯಕ್ಕೆ ಸಂಬಂಧಿಸಿದ ವಿಪತ್ತಿನಿಂದ ಪಾರಾಗುವಿರಿ.
ಕಷ್ಟದ ಸಮಯದಲ್ಲಿಯೂ ಸಂಯಮ ಕಳೆದುಕೊಳ್ಳದೇ ಮುಂದುವರೆಯುವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ಆರ್ಥಿಕಬಲ
ಕುಗ್ಗುವ ಸಂಭವವಿದೆ ಹಾಗಾಗಿ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ.
ಭಕ್ತಿಯಿಂದ ನವಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು
” ಸಿಂಹ ರಾಶಿ ”
ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವುದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಯಗಳು ಪರಿಹಾರವಾಗುವವು, ಮನೆಯಲ್ಲಿ ನೆಮ್ಮದಿಯ ವಾತಾವರಣ ಮೂಡಲಿದೆ
ಭಕ್ತಿಯಿಂದ ಶ್ರೀ ಉಗ್ರನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು
” ಕನ್ಯಾ ರಾಶಿ ”
ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ಉಂಟುಮಾಡಬಹುದು. ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೇಯ ಉಂಟಾಗಬಹುದು.
ಮಿತಿ ಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರುವುದಿಲ್ಲ,
ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು
” ತುಲಾ ರಾಶಿ ”
ಕುಟುಂಬದಲ್ಲಿ ಮನಸ್ತಾಪ ಕಂಡುಬರುವುದು. ಗೌಪ್ಯ ವ್ಯವಹಾರಗಳನ್ನು ಸರಿದೂಗಿಸಲು ಸಾಧ್ಯವಾಗದೇ ಪರಿತಪಿಸುವಂತಾಗಬಹುದು.
ಆಸಕ್ತಿ ಆಪತ್ತು ತರುವ ಸಂಭವವಿದೆ. ಮಹತ್ವದ ನಿರ್ಧಾರಗಳಿಗೆ ಇದು ಸೂಕ್ತಕಾಲವಲ್ಲ. ಹಣಹೂಡಿಕೆ ಈಗ ಬೇಡ.
ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು
” ವೃಶ್ಚಿಕ ರಾಶಿ “
ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ.
ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು
” ಧನು ರಾಶಿ ”
ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ, ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ.
ಭಕ್ತಿಯಿಂದ ಶ್ರೀ ಕೇದಾರನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.
” ಮಕರ ರಾಶಿ ”
ವ್ಯಥಾ ಚಿಂತೆ, ತಪ್ಪು ಕಲ್ಪನೆ, ನಿಷ್ಟುರ ಮಾತುಗಳನ್ನು ಕೇಳುವ ಸಂಭವ ಎದುರಾಗಬಹುದು, ಜನ್ಮಸ್ಥ ಶುಕ್ರ ಇರುವುದರಿಂದ ಆರ್ಥಿಕ ಸುಭದ್ರತೆ ಇರುವುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷದ ವಾತಾವರಣ ಮೂಡಲಿದೆ ಗೋಸೇವೆಯಿಂದ ಕಷ್ಟಪರಿಹಾರ.
ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.
” ಕುಂಭ ರಾಶಿ ”
ಅನಾವಶ್ಯಕ ತಿರುಗಾಟ ಎದುರಾಗಬಹುದು ನೌಕರಿಯಲ್ಲಿ ಕಿರಿಕಿರಿಯಿಂದ ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಕಾಡಬಹುದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ.
ಭಕ್ತಿಯಿಂದ ಶ್ರೀ ಶನೈಶ್ಚರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.
” ಮೀನ ರಾಶಿ ”
ಆಕರ್ಷಕ ನಿರ್ಧಾರಗಳಿಂದ ಮನ್ನಣೆ ಯೋಗವಿದೆ ಯಜಮಾನನಿಗೆ ಬಲವಂತದಲ್ಲಿ ಜವಾಬ್ದಾರಿ ನಿರ್ವಹಣೆ ಹೆಗಲೇರಬಹುದು. ವೈಯಕ್ತಿಕ ಬದುಕಿನತ್ತ ಗಮನಹರಿಸಲು ವ್ಯವಧಾನ ಅಗತ್ಯ, ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಕುರಿತು ಯೋಜನೆ ರೂಪಿಸುವಿರಿ.
ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.
IIಶ್ರೀ ಗುರುಭ್ಯೋನಮಃII
🌺 ಶುಭೋದಯ🌺
ಶ್ರೀ ಗುರು ಕಾರುಣ್ಯ ಸರ್ವರಿಗಾಗಲಿ
====================
ದಿನಾಂಕ 10-7-2021 ರಂದು ☸️ ಶನಿವಾರ☸️ ಇಂದಿನ ಪಂಚಾಂಗ📖
ಶ್ರೀ ಮನೃಪ ಶಾಲೀವಾಹನಶಕೆ
೧೯೪೩ ನೇ ಶ್ರೀ ಪ್ಲವನಾಮ
ಸಂವತ್ಸರದ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ
ಶುಕ್ಲ ಪಕ್ಷ, ಪಾಡ್ಯಮಿ ತಿಥಿ ದಿನ ಪೂರ್ತಿ
ನಂತರ ಬಿದಿಗೆ ತಿಥಿ……
*********
✳️ ಇಂದಿನ ನಕ್ಷತ್ರ✳️
ಪುನರ್ವಸು ನಕ್ಷತ್ರ ರಾತ್ರಿ 12-32 ರ ವರೆಗೆ
ನಂತರ ಪುಷ್ಯ ನಕ್ಷತ್ರ…..
*********
ವ್ಯಾಗಾತ ನಾಮ ಯೋಗ
ಕಿಮಸ್ತುಘ್ನ ನಾಮ ಕರಣ
*********
ರಾಹುಕಾಲ
ಬೆಳಿಗ್ಗೆ 9 ರಿಂದ 10-30 ರ ವರೆಗೆ
*********
ಯಮಗಂಡಕಾಲ
ಮಧ್ಯಾಹ್ನ 1-30 ರಿಂದ 3 ರ ವರೆಗೆ
*********
ಈ ದಿನ ಶುಭಸಮಯ
ಬೆಳಿಗ್ಗೆ 7 ರಿಂದ 9 ರ ವರೆಗೆ
10-30 ರಿಂದ 1-30 ರ ವರೆಗೆ
ಮಧ್ಯಾಹ್ನ 3 ರಿಂದ ಸಂಜೆ 6 ರ ವರೆಗೆ
*********
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ
ಸೂರ್ಯೋದಯ5-57ಕ್ಕೆ
ಸೂರ್ಯಾಸ್ತ 6-58 ಕ್ಕೆ
*********
ಇಂದಿನ ಮಳೆ
ಪುನರ್ವಸು ಮಳೆ 2 ನೇಪಾದ
—————————————-
ಗಾದೆಯ ಭೋದೆ
————————-
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ
====================
🕉️ ಓಂಕಾರನುಡಿ🕉️.
✍️
*********
🌺 ಧರ್ಮದ ಮಹತ್ವ ಧರ್ಮದ ಆಧಾರದಲ್ಲಿ ಬದುಕನ್ನ ಕಟ್ಟಿಕೊಂಡ ಮನುಜಂಗೆ ಸಿಗುವುದೇನೆಂಬುದನ್ನು ಸುಭಾಷಿತ ಹೇಳಿದೆ.
ಧರ್ಮಾದರ್ಥಃ ಪ್ರಭವತೇ
ಧರ್ಮಾತ್ ಪ್ರಭವತೇ ಸುಖಂ
ಧರ್ಮೆಣಲಭತೇ ಸರ್ವಂ
ಧರ್ಮಸಾರ ಮಿದಂಜಗತ್
ಸದಾ ಧರ್ಮದ ಆಧಾರದಲ್ಲಿ ಬದುಕನ್ನ ಕಟ್ಟಿಕೊಂಡ ಮನುಜ ನಿತ್ಯಜೀವನದಲ್ಲಿ ಸಂತೃಪ್ತ ಭಾವ ದಿಂದ ಇರಬೇಕಾದರೆ ಆತ ಮೈಗೂಡಿಸಿಕೊಂಡ ಧರ್ಮದಿಂದ ಲೇ ಎಲ್ಲಾ ತೆರನಾದ ಹಣ ಸಂಪತ್ತನ್ನು ಪಡೆಯುತ್ತಾನೆ.
ಧರ್ಮದಿಂದಲೇ ಎಲ್ಲಾ ಸುಖವನ್ನು ಪಡೆಯುತ್ತಾನೆ. ತಾನು ಅನುಸಂಧಾನ ಮಾಡಿಕೊಂಡ ಧರ್ಮ ದಿಂದಲೇ, ಏನೆಲ್ಲಾ ಆಸೆ ಆಕಾಂಕ್ಷೆ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನೂ ಈ ಜಗತ್ತು ನಿಂತಿರುವುದೇ ಧರ್ಮದ ತಳಹದಿಯ ಮೇಲೆ. ಎಂಬುದನ್ನು ಧರ್ಮದ ಮಹತ್ವ ಕುರಿತು ಸುಭಾಷಿತ ಹೇಳಿದೆ.
ಧರ್ಮೋರಕ್ಷತಿ ರಕ್ಷಿತಃ🌺
********
🌺 ಗುರು ಕಾರುಣ್ಯ ದ🌺
ಶುಭಾಶೀರ್ವಾಣಿ
*********
ಸರ್ವೇ ಜನಾಃ ಸುಖಿನೋ ಭವಂತುII
ಸಮಸ್ತ ಸನ್ಮಂಗಲಾನಿಭವಂತುII
ಸಕಲ ಇಷ್ಟಾರ್ಥ ಸಿದ್ಧಿ ರಸ್ತುII
ಧರ್ಮಾಭಿವೃಧ್ಧಿರಸ್ತುII
ಸದಾಚಾರ ಸಂವೃದ್ದಿರಸ್ತುII
ಮನೋಭೀಷ್ಟ ವಾಂಛಿತಫಲ…
ಸಿದ್ದಿರಸ್ತುII
ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾ ಪ್ರಸಾದ ಸದಾ ಸಿದ್ದಿರಸ್ತು
🌺✋🌺
====================
🌺🌹 ಶುಭಮಸ್ತು 🌺🌹
ಭದ್ರಂ-ಶುಭಂ -ಮಂಗಲಂ
+++++-++++++++++++++
ಇಂದ
ಪುರವರ್ಗ ಹಿರೇಮಠ ಶ್ರೀ ಕ್ಷೇತ್ರ
ಆವರಗೊಳ್ಳ, ದಾವಣಗೆರೆ
++++++++++++++++++++