ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಅಮೇರಿಕಾದ ಸೇವಾ ಇಂಟರ್ ನ್ಯಾಷನಲ್ ಸೇವಾ ಸಂಸ್ಥೆ ಯಿಂದ ಕರೋನಾ ಸೇವೆಗೆ ವಿಶೇಷ ಕೊಡುಗೆ

ದಾವಣಗೆರೆ: ಸಿಟಿ ಸೆಂಟ್ರಲ್ ಆಸ್ಪತ್ರೆ ಯು ಕಳೆದ ಎರಡು ದಶಕಗಳಿಂದ ದಾವಣಗೆರೆ ಹಾಗೂ ಮಧ್ಯ ಕರ್ನಾಟಕದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ಕರೋನಾ ಸಾಂಕ್ರಾಮಿಕ ರೋಗ ಚಿಕಿತ್ಸೆ ನೀಡುವಲ್ಲಿ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ ಹಾಗೂ ಜಿಲ್ಲಾ ಡಳಿತದ ಸಹಕಾರದೊಂದಿಗೆ ಐ. ಸಿ. ಯು ಚಿಕಿತ್ಸೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ಆಸ್ಪತ್ರೆ ಯಾವುದೇ ಪ್ರಚಾರ ಬಯಸದೇ ತನ್ನ ಉತ್ತಮ ಸೇವಾ ಮನೋಭಾವ ಉಳ್ಳ ವೈದ್ಯರು, ಸಿಬ್ಬಂದಿ ವರ್ಗ, ಶುಶ್ರೂಷಕ ವರ್ಗಜೊತೆಸೇರಿ ಉತ್ತಮಕಾರ್ಯನಿರ್ವಹಣೆಯಲ್ಲಿ ಹೆಸರು ಪಡೆದಿದೆ. ಇದನ್ನು ಅಮೇರಿಕಾದ ಸೇವಾ ಇಂಟರ್ ನ್ಯಾಷನಲ್ ಸಂಸ್ಥೆ ಪರಿಗಣಿಸಿ ಐದು ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ ನೀಡಿದೆ.
ಹಾಗೇ ಇದೇ ಸಂದರ್ಭದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಧರ್ಮ ಚಕ್ರ ಟ್ರಸ್ಟ್ ವತಿಯಿಂದ ಕಳೆದ ಮೂರು ವರ್ಷಗಳಿಂದ ನಡೆಸಿದ ಸಮಾಜ ಮುಖಿ ಕಾರ್ಯ ಗುರುತಿಸಿ ಇದೇ ಅಮೇರಿಕಾ ಸೇವಾ ಸಂಸ್ಥೆ ಸಿಟಿ ಸೆಂಟ್ರಲ್ ಆಸ್ಪತ್ರೆ ಸಹಯೋಗದೊಂದಿಗೆ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಿಸಲು ( ದಿನಕ್ಕೆ 120 ಸಿಲಿಂಡರ್ ಸಂಗ್ರಹಿಸುವ ಸಾಮರ್ಥ್ಯ) ಆರ್ಥಿಕ ಸಹಾಯ ನೀಡಲು ಒಪ್ಪಿಗೆ ನೀಡಿದೆ.
ದಿನಾಂಕ: 09/06/2021 ರಂದು ಸಂಜೆ ನಡೆದ ಸರಳ ಸಮಾರಂಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ ಬಿಳಗಿ, ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಶ್ರೀ ಹನುಮಂತರಾಯಪ್ಪ , RSS ಪ್ರಮುಖರಾದ ಶ್ರೀ ಉಮಾಪತಿ ಯವರ ಸಮಕ್ಷಮದಲ್ಲಿ 5 OXYGEN CONCENTRATOR ಗಳುಲೋಕಾರ್ಪಣಗೊಂಡವು.
ಇಂತಹ ಸಮಾಜ ಮುಖಿ ಸೇವೆಯ ಕೀರ್ತಿಗೆ ಆಸ್ಪತ್ರೆಯ ಪ್ರತಿಯೊಬ್ಬ ಸದಸ್ಯರೂ ಅರ್ಹತೆಗೆ ಭಾಜನರು. ನಮ್ಮ ಸೇವೆಯನ್ನು ಪಡೆದ ಎಲ್ಲಾ ನಾಗರಿಕರಿಗೂ ಧನ್ಯವಾದಗಳು ಸೇವಾ ಭಾರತಿ ಹಾಗೂ ಸೇವಾ ಇಂಟರ್ ನ್ಯಾಷನಲ್ ಅಮೆರಿಕ ಸಂಸ್ಥೆಗೆ ಆಸ್ಪತ್ರೆವತಿಯಿಂದ ಹೃದಯ ಪೂರ್ವಕ ನಮನ ಹಾಗೂ ಕೃತಜ್ಞತಾಪೂರ್ವಕ ಧನ್ಯವಾದಗಳು.