Congress: ತುಮಕೂರಿನಲ್ಲಿ ದಾವಣಗೆರೆ ಕೈ ನಾಯಕರ ಸಭೆ*

IMG-20210725-WA0033

ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜಿವಾಲ್ ಅವರು ತುಮಕೂರು ನಗರದಲ್ಲಿ ಐದು ಜಿಲ್ಲೆಗಳ ವಿಭಾಗಿಯ ಮಟ್ಟದ ಕಾಂಗ್ರೆಸ್ ನಾಯಕರುಗಳ ಸಭೆಯನ್ನು ಕರೆದಿದ್ದರು.

ಪ್ರತ್ಯೇಕವಾಗಿ ಸಮಯ ನಿಗದಿ ಮಾಡಿ ಒಂದೊಂದು ಜಿಲ್ಲೆಯ ಸಭೆಯನ್ನು ನಡೆಸಿದ ಅವರು , ಆಯಾಯ ಜಿಲ್ಲೆಗಳ ಪಕ್ಷ ಸಂಘಟನೆ , ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಡಾ.ಶಾಮನೂರು ‌ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾದ ಹೆಚ್.ಬಿ.ಮಂಜಪ್ಪ , ಜಿಲ್ಲೆಯ ಹರಿಹರ ಶಾಸಕರಾದ ಎಸ್.ರಾಮಪ್ಪ , ಮಾಜಿ ಶಾಸಕರುಗಳಾದ ವಡ್ನಾಳ ರಾಜಣ್ಣ , ಹೊನ್ನಾಳಿ ‌ಶಾಂತನಗೌಡ್ರು , ಮಾಯಕೊಂಡ ಕ್ಷೇತ್ರದ ಅಭ್ಯರ್ಥಿಯಾಗಿದಂತ ಕೆ.ಎಸ್.ಬಸವಂತಪ್ಪ ನವರನೊಳಗೊಂಡಂತೆ ಜಿಲ್ಲಾ ಕಾಂಗ್ರೆಸ್ ‌ಸಮಿತಿಯ ಎಲ್ಲಾ‌ ಮುಂಚೂಣಿ ‌ಘಟಕ, ವಿಭಾಗ , ಸೆಲ್ ಗಳ ಅದ್ಯಕ್ಷರುಗಳು ಸಭೆಯಲ್ಲಿ ‌ಭಾಗವಹಿಸಿ ಜಿಲ್ಲೆಯಲ್ಲಿ‌ ಕಾಂಗ್ರೆಸ್ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಗೋವಿಂದ್ ಹಾಲೇಕಲ್ಲ್ ‌ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!