ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ದಿಂದ ಶಾಸಕ ನೆಹರು ಸಿ ಒಲೇಕರ್ ಗೆ ಸಚಿವ ಸ್ಥಾನಕ್ಕೆ ಅಗ್ರಹ

IMG-20210728-WA0010

ದಾವಣಗೆರೆ: ಹಾವೇರಿ ಶಾಸಕ ನೆಹರು ಸಿ ಓಲೇಕರರಿಗೆ ಸಚಿವ ಸ್ಥಾನ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಎಸ್.ಶೇಖರಪ್ಪ, ರಾಜ್ಯದಲ್ಲಿ ಆಡಳಿತಕ್ಕೆ ಬಂದ ಯಾವುದೇ ಸರ್ಕಾರಗಳು ಈವರೆಗೆ ಸಚಿವ ಸ್ಥಾನ ನೀಡಿಲ್ಲ‌ ಕಾರಣ ಈ ಬಾರಿಯಾದರೂ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಛಲವಾದಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ನಮ್ಮ ಸಮಾಜದ ವತಿಯಿಂದ ಬಿಜೆಪಿ ಪಕ್ಷದಿಂದ ರಾಜ್ಯದಲ್ಲಿ 3 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾವೇರಿ ಶಾಸಕ ನೆಹರು ಓಲೇಕರ್, ಮೂಡಿಗೆರೆ ಶಾಸಕ
ಎಂ.ಪಿ.ಕುಮಾರಸ್ವಾಮಿ, ನಂಜನಗೂಡು ಶಾಸಕ
ಹರ್ಷವರ್ಧನ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ದೊರೆತಿಲ್ಲ. ನಮ್ಮನ್ನು ಇನ್ನೂ ನಿರ್ಲಕ್ಷಿಸಬೇಡಿ. ಈ ನಿರ್ಲಕ್ಷ್ಯ ಬಿಜೆಪಿಗೆ ತಿರುಗುಬಾಣ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಆರ್ ಎಸ್ ಎಸ್ ಮೂಲದಿಂದ ಬಂದಂತಹ ನಿಷ್ಠಾವಂತ ಕಾರ್ಯಕರ್ತ ನೆಹರು ಓಲೇಕಾರ ಅವರಿಗೆ ಈ ಬಾರಿ ಸಚಿವಸ್ಥಾನ ನೀಡಬೇಕು. ಇಲ್ಲವಾದರೆ ರಾಜ್ಯದಲ್ಲಿನ 80 ಲಕ್ಷ ಜನ ಪರ್ಯಾಯ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಬಿಜೆಪಿ ವರಿಷ್ಠರು ಅವಕಾಶ ನೀಡಬಾರದು. ಕೇಂದ್ರದ ವರಿಷ್ಠರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಷಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಲ್ಲಿ ಒತ್ತಾಯಿಸುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಛಲವಾದಿ ಸಮಾಜವು ಪರಿಶಿಷ್ಟ ಜಾತಿಗೆ ಸೇರಿದ್ದು,ಸಮಾಜವು ಬಿಜೆಪಿ ಪಕ್ಷಕ್ಕೆ ಕಳೆದೆರಡು ಚುನಾವಣೆಯಿಂದ ಅತಿ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿ , ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಪಕ್ಷವು 2 ಬಾರಿ ಅಧಿಕಾರಕ್ಕೆ ಬಂದರೂ ನಮ್ಮ ಸಮಾಜ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನವನ್ನು ಕೊಟ್ಟಿರುವುದಿಲ್ಲ. ಕಾರಣ ಸಮಾಜಕ್ಕೆ ಅನ್ಯಾಯ ಮಾದಡೇ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ನಮ್ಮ ಜನಾಂಗದ ಖೋಟಾದಡಿಯಲ್ಲಿ ನೆಹರು ಓಲೇಕರರಿಗೆ ನೂತನವಾಗಿ ರಚನೆಯಾಗುವ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಕೊಟ್ಟು , ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಜಯಪ್ಪ, ಹೆಚ್.ಕೆ.ಚನ್ನಪ್ಪ, ಶಿವಪ್ಪ, ಮಧುಸೂದನ್, ಫಕೀರಪ್ಪ, ರಾಮಣ್ಣ, ನವೀನ ಕುಮಾರ್, ಹಾಲೇಶ್, ಹನುಮಂತಪ್ಪ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!