ಪೋಲೀಸರ ರಕ್ಷಣೆಗಾಗಿ ಪೋಲಿಸರಿಂದಲೇ ಬಂತು ಸಖತ್ ಐಡಿಯಾ,ಉಸಿರಾಟದ ತೊಂದರೆ ನಿಯಂತ್ರಿಸುವ ಐಡಿಯಾದಿಂದ ಫುಲ್ ಫೀದಾ ಆಗಿದ್ದಾರೆ ಆರಕ್ಷಕರು,

( ಹೆಚ್ ಎಂ ಪಿ ಕುಮಾರ್ – 9740365719 )
ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೊಂಕು ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ.ಸರ್ಕಾರ ಲಾಕ್ ಡೌನ್ ಮಾಡುವ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದರೆ,ಜನರು ತಮಗೇ ಕೊರೊನಾ ಬಗ್ಗೆ ಭಯವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೊಂದು ಕಡೆ ಜಿಲ್ಲಾಡಳಿತ ಕೂಡ ಜಾಗೃತಿ ಮೂಡಿಸುತ್ತಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೆಲ್ಲಾ ಕಂಟ್ರೋಲ್ ಮಾಡೋದೆ ನಮ್ಮಪೊಲಿಸ್ ಅವರಿಗೂ ಕೂಡ ಕೊವಿಡ್ ಬರುತ್ತೆ ಎಂಬುದು ಜನಕ್ಕೆ ಗೊತ್ತಿಲ್ಲ ಅನ್ಸುತ್ತೆ. ಪೋಲಿಸ್ ನವರು ಪ್ರತಿದಿನ ಕರ್ತವ್ಯದಲ್ಲಿದ್ದಾಗ ಭಯದಿಂದಲೆ ಮನೆಗೆ ವಾಪಸ್ ಹೋಗ್ತಾರೆ,ಇವರೆಲ್ಲರ ವರ ಭಯವನ್ನ ಕಮ್ಮಿ ಮಾಡಲು ದಾವಣಗೆರೆ ಪೋಲಿಸ್ ನವರು ಹೊಸ ಐಡಿಯಾ ಮಾಡಿದ್ದಾರೆ ಇದರಿಂದ ಪ್ರತಿನಿತ್ಯ ಪೋಲೀಸ್ ನವರಿಗೆ ಕೊಂಚ ನೆಮ್ಮದಿ ತಂದಿದೆ
ಪ್ರಶರ್ ಕುಕ್ಕರ್ ನಿಂದ ಪೋಲಿಸರಿಗೆ ಹಬೆ…
ವೈದ್ಯರು ಪ್ರತಿಯೊಬ್ಬರಿಗೂ ತಮ್ಮ ಜೀವನಕ್ರಮದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ವ್ಯಾಯಾಮವನ್ನು ಮಾಡುವಂತೆ ಸೂಚಿಸಿದ್ದಾರೆ. ವ್ಯಾಯಾಮದ ಮಹತ್ವದ ಕಡೆ ಸತ್ವ ಅರಿತ ಕೆಲವರು ಮನೆಯಲ್ಲೇ ಪ್ರಾಣಾಯಾಮ ಸೇರಿದಂತೆ ಯೋಗ, ವರ್ಕೌಟ್ ಮಾಡುತ್ತಿದ್ದಾರೆ. ಆಹಾರದಲ್ಲೂ ಜಾಗೃತಿ ವಹಿಸಿದ್ದಾರೆ. ಆದರೆ ದಾವಣಗೆರೆ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ವಿನೂತನ ಐಡಿಯಾ ಮಾಡಿದ್ದಾರೆ. ಈ ನಗರದ ಎಲ್ಲಾ ಪೋಲಿಸರಿಗಾಗಿ ಡಿ ಎ ಆರ್ ಗ್ರೌಂಡ್ ನಲ್ಲಿ ಒಮ್ಮೆಗೆ 5 ಜನ ಕೂತುಕೊಂಡು ಹಬೆಯನ್ನ ತೆಗೆದುಕೊಳ್ಳುವ ವ್ಯವಸ್ತೆ ಮಾಡಿದ್ದಾರೆ.ಪ್ರೆಶರ್ ಕುಕ್ಕರ್ ನಿಂದ ಪೈಪ್ ಕನೆಕ್ಷನ್ ಕೊಟ್ಟು 5 ಕಡೆ
ಪ್ರತ್ಯೇಕವಾಗಿ ಪೈಪ್ ಗಳನ್ನ ಅಳವಡಿಸಿಕೊಂಡಿದ್ದಾರೆ. ಪ್ರೆಶರ್ ಕುಕ್ಕರ್ ನಿಂದ ಬರುವ ಬಿಸಿ ಬಿಸಿ ಹಬೆ ಸೀದಾ ಐದು ಜನರಿಗೆ ತಲುಪುತ್ತೆ, ಇದರಿಂದ ಕೊರೊನಾ ಸೊಂಕಿನಿಂದ ರಕ್ಷಣೆ ಪಡೆಯಲು ಹಾಗೂ ಉಸಿರಾಟದ ಸಮಸ್ಯೆಯನ್ನ ನೀಗಿಸುವ ಸಾಧನವಾಗಿ ಮಾಡಿಕೊಂಡಿದ್ದಾರೆ. ಇದರ ಹೊರತಾಗಿ ಕೋವಿಡ್ ತಡೆಗಟ್ಟಲು ಪ್ರಾಣಾಯಾಮ, ಕಷಾಯ, ಜಿಂಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಪ್ರೆಶರ್ ಕುಕ್ಕರ್ ನಿಂದ ಹಬೆ ತಯಾರಿ ಹೇಗೆ ಗೊತ್ತಾ…?
ಇಲ್ಲಿ ಹೊಸದಾಗಿ ಎರಡು ಕುಕ್ಕರ್ ಹಾಗೂ ಸ್ಟವ್ ತರಲಾಗಿದೆ,ಪ್ರೆಶರ್ ಕುಕ್ಕರ್ನಲ್ಲಿ ಮೊದಲು ನೀರನ್ನು ತುಂಬಿಸಿ ಬಿಸಿ ಮಾಡಲಾಗುತ್ತೆ, ನಂತರ ಆ ಬಿಸಿ ನೀರಿಗೆ ಆಯುಷ ಇಲಾಖೆ ಕೊಟ್ಟಿರುವ ” ಆರಖ್ ಅಜೀಬ್ ” ಅಯುರ್ವೇದದ ಲಿಕ್ಷಿಡ್ ಅನ್ನು ಕುಕ್ಕರ್ ನಲ್ಲಿ ಹಾಕಲಾಗುತ್ತೆ, ಇದರ ಜೊತೆಗೆ ಕೆಲ ಗಿಡಮೂಲಿಕೆಗಳು, ಬೇವಿನ ಎಲೆಗಳು, ತುಳಸಿ, ನೀಲಗಿರಿ ಎಲೆಗಳನ್ನು ಸೇರಿಸಲಾಗುತ್ತೆ, ನಂತರ ಅವೆಲ್ಲವವೂ ನೀರಿನಲ್ಲಿ ಕುದಿಸಿದಾಗ ಕುಕ್ಕರ್ ನಿಂದ ಹೊರ ಬರುವ ಹಬೆಯನ್ನು ಪೊಲೀಸರು ಟ್ಯೂಬ್ ಮೂಲಕ ತೆಗೆದುಕೊಳ್ಳುತ್ತಿದ್ದಾರೆ,
ಕುಕ್ಕರ್ ಗೆ ಪೈಪ್ ಅನ್ನ ಅಳವಡಿಸಿಕೊಂಡು ಒಮ್ಮೆಗೆ 5 ಜನರು ಹಬೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಮುಂಜಾನೆ ಡ್ಯೂಟಿಗೆ ಹೋಗುವ ಮುನ್ನ 5 ನಿಮಿಷ ನಂತರ ಸಂಜೆಯ ವೇಳೆ ಕರ್ತವ್ಯ ಮೂಗಿಸಿಕೊಂಡು ಬಂದಾಗ 5 ನಿಮಿಷ ಹಬೆ ತೆಗೆದುಕೊಳ್ಳುತ್ತಾರೆ. ಸ್ಟೀಲ್ ಪ್ರೆಶರ್ ಕುಕ್ಕರ್ ನಿಂದ ಇನ್ ಹೇಲಿಂಗ್ ಗಾಗಿ ಒಟ್ಟು 50 ಮೀಟರ್ ಪೈಪ್ ಮತ್ತು ಎರಡು ಜೋಡಿ ಅಲ್ಯೂಮಿನಿಯಂ ಪೈಪ್ ಗಳನ್ನ ಅಳವಡಿಸಕೊಳ್ಳಲಾಗಿದೆ, ಒಂದು ಸಮಯದಲ್ಲಿ ಐವರು ಪೊಲೀಸ್ ಅಧಿಕಾರಿಗಳಿಗೆ ಉಸಿರಾಡಲು ಸಹಾಯ ಮಾಡುತ್ತದೆ, ಎಂದು ಡಿ ಎ ಆರ್ ಡಿ ವೈ ಎಸ್ ಪಿ ಪ್ರಕಾಶ ಹಾಗೂ ಇನ್ಸಪೆಕ್ಟರ್ ಕಿರಣ ಗರುಡವಾಯ್ಸ್ ಗೆ ಮಾಹಿತಿ ನೀಡಿದ್ದಾರೆ.
ಹಬೆ ತೆಗೆದುಕೊಳ್ಳುವ ಐಡಿಯಾದ ಹಿಂದಿರುವ ತಲೆ ಯಾರದ್ದು ಗೊತ್ತಾ..?
ಕೆಲ ದಿನಗಳ ಹಿಂದೆ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಕೆಲವು ಹಳ್ಳಿಗಳು ಸಾಂಕ್ರಾಮಿಕ ರೋಗವನ್ನು ಎದುರಿಸಲು ತಮ್ಮದೇ ಆದ ಮಾರ್ಗವನ್ನು ರೂಪಿಸಿವೆ. ಹಳ್ಳಿಗಳಲ್ಲಿ ‘ಆಯುರ್ವೇದ’ (ಗಿಡಮೂಲಿಕೆ) ಮಿಶ್ರಣದ ಕನ್ಕಾಕ್ಷನ್ ಉಸಿರಾಡುವಿಕೆಯೂ ಇದ್ದು, ಇದು ಒಂದು ರೀತಿಯ ರೋಗನಿರೋಧಕವಾಗಿದೆ. ಮೆಹ್ಸಾನಾ ಜಿಲ್ಲೆಯ ಪ್ರಧಾನ ಕಚೇರಿಯಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ತಾರೆತಿ ಗ್ರಾಮದಲ್ಲಿ, ಆಯುರ್ವೇದ ಸಮಾವೇಶದ ಉಗಿಯನ್ನು ಪ್ರತಿದಿನ ಉಸಿರಾಡಲು ಸುಮಾರು 20-30 ಜನರು ಹಳ್ಳಿಯ ಸರಪಂಚ್ ಪಿನಾ ಪಟೇಲ್ ಅವರ ನಿವಾಸದ ಹೊರಗೆ ಸರತಿ ಸಾಲಿನಲ್ಲಿ ಇಂದಿಗೂ ನಿಂತಿದ್ದಾರೆ. ಇದನ್ನ ಮನಗಂಡ ದಾವಣಗೆರೆ ಎಸ್ ಪಿ ಹನುಮಂತರಾಯ, ನಮ್ಮ ಜಿಲ್ಲೆಯ ಪೋಲಿಸರಿಗೂ ಕೂಡ ಇದೇ ರೀತಿ ಊಸಿರಾಟದ ಸಮಸ್ಯೆ ಬರಬಹುದು ಅದ್ದರಿಂದ ಹಬೆ ತೆಗೆದುಕೊಳ್ಳಲು ತಯಾರಿ ಮಾಡಿ ಎಂದು ಸೂಚನೆ ನೀಡಿದ್ದೆ ತಡ ನಮ್ಮ ದಾವಣಗೆರೆ ಪೋಲಿಸ್ ಒಂದೇ ದಿನದಲ್ಲಿ ಪ್ರಶರ್ ಕುಕ್ಕರ್ ನಿಂದ ಹಬೆ ತೆಗೆದುಕೊಳ್ಳುವ ವಿನೂತನ ಸಾಧನವನ್ನ ತಯಾರಿಸಿ ಬಿಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯದಲ್ಲಿ ಇದೇ ರೀತಿ ಕೆಲ ಕಡೆ ಪ್ರಾಯೋಗಿಕವಾಗಿ ಪ್ರಶರ್ ಕುಕ್ಕರ್ ನಿಂದ ಹಬೆ ತೆಗೆದುಕೊಳ್ಳುವ ಕಾರ್ಯದಿಂದ ಯಶಸ್ವಿಯಾಗಿದ್ದಾರೆ, ಇದರಿಂದ ಪೋಲಿಸರಿಗೆ ಉಸಿರಾಟದ ತೊಂದರೆ ಇರುವವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
Click to Watch Below Video…