Media Award: ಜಿಲ್ಲಾ ವರದಿಗಾರರ ಕೂಟದಿಂದ ಐದು ಪತ್ರಕರ್ತರನ್ನ ‘ಮಾಧ್ಯಮ ಪ್ರಶಸ್ತಿ’ ಗೆ ಆಯ್ಕೆ

ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿವರ್ಷ ಮಾಧ್ಯಮ ದಿನಾಚರಣೆ ಅಂಗವಾಗಿ ಕೊಡಮಾಡಲಾಗುವ ‘ಮಾಧ್ಯಮ ಪ್ರಶಸ್ತಿ’ಗೆ ಐವರನ್ನು ಆಯ್ಕೆ ಮಾಡಲಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜನತಾವಾಣಿ ಉಪ ಸಂಪಾದಕ ಇ.ಎಂ. ಮಂಜುನಾಥ್, ಸಂಯುಕ್ತ ಕರ್ನಾಟಕದ ಉಪ ಸಂಪಾದಕ ಎ.ಎನ್. ನಿಂಗಪ್ಪ, ನಗರವಾಣಿ ವರದಿಗಾರ ಸುರೇಶ್ ಕೋಲ್ಕುಂಟೆ, ಸಂಜೆವಾಣಿ ಸ್ಥಾನಿಕ ಸಂಪಾದಕ ಬಿ.ಎಂ. ಶಿವಕುಮಾರ್ ಮತ್ತು ಟಿವಿ9 ವೀಡಿಯೋ ಜರ್ನಲಿಸ್ಟ್ ಜಿ.ಎನ್. ರಾಮಪ್ಪ ಆಯ್ಕೆಯಾಗಿದ್ದಾರೆ. ಮಾಧ್ಯಮ ದಿನಾಚರಣೆ ವೇಳೆ ಈ ಐವರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ತಿಳಿಸಿದ್ದಾರೆ.