ದಾವಣಗೆರೆ ಸಾಹುಕಾರ್ ಕುಟುಂಬದಿಂದ ಮುಂದುವರೆದ 4 ನೇ ದಿನದ ಉಚಿತ ಲಸಿಕಾ ಅಭಿಯಾನ

4 th day shamivashankarappa family free vaccinationanuru sh

ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮವೂ ಇಂದು ಸಹ ಮುಂದುವರೆದಿದ್ದು, ನಾಗರೀಕರು ಉಚಿತ ಲಸಿಕೆಯನ್ನು ಪಡೆದರು.

ಇಂದು ದಾವಣಗೆರೆ ನಗರದ ಡಾ|| ಬಾಬು ಜಗಜೀವನರಾಂ ಸಮುದಾಯ ಭವನ, ಹೊರಟ್ಟಿ ದುರ್ಗಾಂಬಿಕಾ ಭವನ ಮತ್ತು ಭಾರತ್ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ವಿವಿಧ ವಾರ್ಡ್‍ಗಳ ನಾಗರೀಕರಿಗೆ ಅನುಕೂಲವಾಗುವಂತೆ ಲಸಿಕೆ ನೀಡಲಾಯಿತು. ವಾರ್ಡ್ ನಂಬರ್ 1,5,20 ಮತ್ತು 45ನೇ ವಾರ್ಡ್‍ನ ನಾಗರೀಕರು ಲಸಿಕೆ ಪಡೆದರು.

ಸ್ವತಹ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಲಸಿಕೆ ನೀಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ನಂತರ ಲಸಿಕೆ ಪಡೆದ ನಾಗರೀಕರ ಯೋಗಕ್ಷೇಮವನ್ನು ವಿಚಾರಿಸಿದರು.

ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಸೂಚನೆ ಮೇರೆಗೆ ದಾವಣಗೆರೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿವರ್ಗದವರು ಲಸಿಕಾ ಶಿಬಿರ ನಡೆಸಿಕೊಟ್ಟರು.

ಮೂರು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದ ನಾಗರೀಕರಿಗೆ ನೀರು ಮತ್ತು ಬಿಸ್ಕತ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಜಿ.ಡಿ.ಪ್ರಕಾಶ್, ಉದಯ್ ಕುಮಾರ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಶ್ರೀಮತಿ ಮೀನಾಕ್ಷಿ ಜಗದೀಶ್, ವಿನಾಯಕ ಪೈಲ್ವಾನ್, ಮುಖಂಡರುಗಳಾದ ಎಸ್.ಮಲ್ಲಿಕಾರ್ಜುನ್, ಬಿ.ಎಂ.ಈಶ್ವರ್, ಟಿ.ರಮೇಶ್, ಬಿ.ಎಂ.ರಾಮಸ್ವಾಮಿ, ಪ್ರವೀಣ್, ರಾಕೇಶ್, ವೆಂಕಟೇಶನಾಯ್ಕ, ಸೊಸೈಟಿ ವೆಂಕಟೇಶ ನಾಯ್ಕ, ಅಲೆಕ್ಸಾಂಡರ್ (ಜಾನ್), ಅನ್ನಪೂರ್ಣಮ್ಮ, ಹರೀಶ್ ಕೆ.ಎಲ್ ಬಸಾಪುರ, ಕೃಷ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!