ಮೊಬೈಲ್ ಟಾರ್ಚರ್ ಬೆಳಕಿನಿಂದ ಕೆಲಸ ಮಾಡಿದ ದಾವಣಗೆರೆ ತಹಸೀಲ್ದಾರ್ ಕಚೇರಿ ಸಿಬ್ಬಂದಿ

WhatsApp Image 2022-07-11 at 6.59.23 PM

ದಾವಣಗೆರೆ: ವಿದ್ಯುತ್ ನಮ್ಮ ದೈನಂದಿನ ಬದುಕಿನಲ್ಲಿ ಎಷ್ಟು ಅವಶ್ಕಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಸರ್ಕಾರಿ‌‌ ಕಚೇರಿಗಳು ಇಂದು ಸಂಪೂರ್ಣ ಗಣಕೀಕರಣಗೊಂಡ ಮೇಲೆ ವಿದ್ಯುತ್ ಇಲ್ಲದೆ ಸಾರ್ವಜನಿಕರ ಕೆಲಸ ನಡೆಯುವುದೇ ಇಲ್ಲ ಎನ್ನುವಂತ ವಾತಾವರಣ ಇದೆ.

ಇದಕ್ಕೆ ಪುಷ್ಟಿ ಎನ್ನುವಂತೆ ದಾವಣಗೆರೆ ತಹಶಿಲ್ದಾರ್ ಕಚೇರಿಯಲ್ಲಿಂದು ಇಡೀ‌ದಿನ ವಿದ್ಯುತ್ ಇಲ್ಲದೆ ನೌಕರರು ಪರದಾಡಿದ ಪ್ರಸಂಗ ವರದಿಯಾಗಿದೆ.ಯಲ್ಲದೇ ಕಚೇರಿಯಲ್ಲಿ ಸಂಪೂರ್ಣ ಕತ್ತಲೆ ಆವರಿಸಿತ್ತು.

ವಿದ್ಯುತ್ ಮಾರ್ಗಗಳ ದುರಸ್ತಿ ಹಿನ್ನೆಲೆಯಲ್ಲಿ ಇಂದು ಇಡೀ ದಿನ ತಹಶಿಲ್ದಾರ‌ ಕಚೇರಿ ಸುತ್ತ ಮುತ್ತ ಪೂರೈಕೆ‌ ಸ್ಥಗಿತವಾಗಿತ್ತು.ಸಿಬ್ಬಂದಿ ಕಚೇರಿಗೆ ಬಂದು ಕಂಪ್ಯೂಟರ್ ಆನ್ ಮಾಡಿದ ಕೆಲ ಹೊತ್ತಿನಲ್ಲಿಯೆ ಅವು ಬಂದ್ ಆದವು. ಒಂದಷ್ಟು ಹೆಚ್ಚು ಬ್ಯಾಕಪ್ ವುಳ್ಳ ಕಂಪ್ಯೂಟರ್ ಗಳು ಕೆಲಸ ಮಾಡಿದವು.ಈ ವೇಳೆ ಸಿಬ್ಬಂದಿಗಳು ಕಾಗದ ಪತ್ರಗಳನ್ನು ‌ನೋಡಲು ಮೊಬೈಲ್ ಟಾರ್ಚ್ ಬಳಸಬೇಕಾಯಿತು.

ಎಂದಿನಂತೆ ಪಹಣಿ ಸೇರಿದಂತೆ ಹತ್ತಾರು ಬಗೆಯ ಸರ್ಕಾರಿ ‌ದಾಖಲಾತಿಗಾಗಿ‌ ಬಂದಿದ್ದ ರೈತರು ಬಂದ ದಾರಿಗೆ ಸುಂಕ‌ವಿಲ್ಲದಂತೆ ವಾಪಾಸಾದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!