ದಾವಣಗೆರೆ ಜಿಲ್ಲೆಯಲ್ಲೂ ನಾಳೆಯಿಂದ ಮೂರು ದಿನ ಸಂಪೂರ್ಣ ಲಾಕ್ ಡೌನ್: ಸಚಿವ ಬೈರತಿ ಬಸವರಾಜ್

BIG BREAKING LOCK DOWN
ದಾವಣಗೆರೆ ಜಿಲ್ಲೆಯಾದ್ಯಂತ ಲಾಕ್ ಡೌನ್ ಕಠಿಣಗೊಳಿಸಲಾಗಿದ್ದು, ಮೇ.21 ಬೆಳಗ್ಗೆ 6 ರಿಂದ ಮೇ.24 ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ

ದಾವಣಗೆರೆ ಜಿಲ್ಲೆಯಾದ್ಯಂತ ಲಾಕ್ ಡೌನ್ ಕಠಿಣಗೊಳಿಸಲಾಗಿದ್ದು, ಮೇ.21 ಬೆಳಗ್ಗೆ 6 ರಿಂದ ಮೇ.24 ಬೆಳಿಗ್ಗೆ
6 ರವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಭಸವರಾಜ್ ಘೋಷಣೆ ಮಾಡಿದ್ದಾರೆ.
ಪೆಟ್ರೋಲ್, ಹಾಲು, ವೈದ್ಯಕೀಯ ಸೇವೆ
ಹೊರತುಪಡಿಸಿ ಉಳಿದ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ
ಮಾತನಾಡಿದ ಅವರು, ಈಗಾಗಲೇ ಲಾಕ್ ಡೌನ್ ನಿಯಮಗಳು
ಜಾರಿಯಲ್ಲಿದ್ದರೂ ಬೆ. 6ರಿಂದ ಸಂಜೆ 6 ರವರೆಗೆ ಜನಸಂದಣಿ
ಸೇರಿರುವ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ
ಕೋವಿಡ್ ಚೈನ್ ಮುರಿಯುವ ಉದ್ದೇಶದಿಂದ ಜಿಲ್ಲಾಡಳಿತವು
ಲಾಕ್ ಡೌನ್ ನಿಮಗಳನ್ನು ಇನ್ನೂ ಕಠಿಣಗೊಳಿಸಲು
ಮುಂದಾಗಿದೆ ಎಂದು ತಿಳಿಸಿದರು.
ಅಂಗಡಿಗಳಲ್ಲಿ ದಿನಸಿ, ತರಕಾರಿ ಹಾಗೂ ಇನ್ನಿತರೆ ಅಗತ್ಯ
ವಸ್ತುಗಳ ಮಾರಾಟಕ್ಕೆ ಈಗ ಬೆಳಿಗ್ಗೆ 6 ರಿಂದ 10ರವರೆಗೆ
ಅವಕಾಶವಿರುತ್ತದೆ..ಉಳಿದ ಮೂರು ದಿನಗಳ ಕಾಲ
ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೋಟೆಲ್ ನಿಂದ ಆಹಾರ ಪಾರ್ಸೆಲ್ ತರುವುದು ಈಗ
ಜಾರಿಯಿರುವಂತೆ ಮುಂದುವರೆಯಲಿದೆ.