ದಾವಣಗೆರೆ: ಹಣ ದೋಚಲು ಹೋದ ಕಳ್ಳ ಬಿದ್ದು ಹೆಣವಾದ!

ದಾವಣಗೆರೆ: ಹಣ ದೋಚಲು ಹೋಗಿದ್ದ ಕಳ್ಳ ಬಿದ್ದು ಹೆಣವಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಕೆಟಿಜೆ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಲು ಹೋಗಿದ್ದ ಮೂವರು ಕಳ್ಳರ ಪೈಕಿ ಒಬ್ಬ ಓಡುವ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
ನಡೆದ ಘಟನೆ ಏನು?
ಕೆಟಿಜೆ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡುವ ಸಲುವಾಗಿ ಮೂವರು ಕಳ್ಳರು ಮೊದಲೇ ಹೊಂಚು ಹಾಕಿದ್ದಾರೆ. ರಾತ್ರಿ ಮೂರು ಗಂಟೆಗೆ ನಸುಕಿನ ವೇಳೆ ಮನೆಯೊಳಗೆ ಹೋದ ಕಳ್ಳರು ನಿರೀಕ್ಷೆ ಇಟ್ಟುಕೊಂಡು ಹೋಗಿದ್ದ ಹಣ, ಒಡವೆಯನ್ನು ಹುಡುಕುತ್ತಿರುವ ಸಮಯದಲ್ಲಿ ಮನೆ ಮಾಲೀಕರಿಗೆ ಎಚ್ಚರವಾಗಿದೆ. ಎಚ್ಚರವಾದ ಮಾಲೀಕ ಕೂಗಿದ್ದಾನೆ. ಇದನ್ನು ಗಮನಿಸಿದ್ದ ಮೂವರು ಕಳ್ಳರು ಒಮ್ಮೆಲೆ ಓಡಲು ಆರಂಭಿಸಿದ್ದಾರೆ. ಅದರಲ್ಲಿ ಒಬ್ಬ ಆಕಸ್ಮಾತಾಗಿ ಮಹಡಿ ಮೇಲಿಂದ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಹಣ ಕದಿಯಲು ಹೋಗಿ ಸಾವನ್ನಪ್ಪಿದ ವ್ಯಕ್ತಿಯನ್ನು ಪರಸಪ್ಪ ಎಂದು ಗುರುತಿಸಲಾಗಿದ್ದು, ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
garudavoice21@gmail.com 9740365719