ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ವರ್ಮಾ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 27 ಜನ ಬಂಧನ

ದಾವಣಗೆರೆ: ದಿನಾಂಕ:-31-05-2024 ರಂದು ಮಾನ್ಯ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರಿಗೆ ಆರ್.ಎಂ.ಸಿ ಠಾಣಾ ಸರಹದ್ದಿನ ಮೋತಿ ನಗರ ಬಾಡಾಕ್ರಾಸ್ನಲ್ಲಿರುವ ಉಡುಪಿ ಹೋಟೆಲ್ ಮೇಲ್ಭಾಗದಲ್ಲಿರುವ ವರ್ಮ ರಿಕ್ರಿಯೇಷನ್ ಅಸೋಷಿಯೇಷನ್ ಕ್ಲಬ್ ನಲ್ಲಿ ಇತರೆ ಸದಸ್ಯರೊಂದಿಗೆ ಹಣವನ್ನು ಪಣವಾಗಿ ಇಟ್ಟು ಅಂದರ್ ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ, ಡಿ.ಸಿ.ಆರ್.ಬಿ ಸಿಬ್ಬಂದಿಗಳು ಹಾಗೂ ಸಿ.ಪಿ.ಐ ಗಾಂಧಿನಗರ ವೃತ್ತ ರವರಿಗೆ ಸದರಿ ಅಂದರ್ ಬಾಹರ್ ಇಸ್ಪಿಟ್ ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದು, ಅದರಂತೆ ನಗರ ಡಿವೈಎಸ್ಪಿ ಶ್ರೀ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ಸದರಿ ತಂಡವು ವರ್ಮ ಕ್ಲಬ್ ನಲ್ಲಿ ಬೈಲಾ ದಲ್ಲಿ ನೀಡಿರುವಂತೆ ಷರತ್ತುಗಳು ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿ ಇತರೆ ಸದಸ್ಯರುಗಳನ್ನು ಉಪಯೋಗಿಸಿಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ದಾಳಿ ಮಾಡಿ, ಜೂಜಾಟದಲ್ಲಿ ತೊಡಗಿದ್ದ 27 ವ್ಯಕ್ತಿಗಳನ್ನು ದಸ್ತಗಿರಿ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದ ಆರೋಪಿತರಿಂದ ಜೂಜಾಟದಲ್ಲಿ ತೊಡಗಿಸಿದ್ದ ರೂ 58,560/- ಹಾಗೂ ಇತರೆ ವಸ್ತುಗಳನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ.
ಈ ಬಗ್ಗೆ ಆರ್.ಎಂ.ಸಿ ಠಾಣಾ ಸಿ.ಆರ್ ನಂ 53/2024 ಕಲಂ 79,80 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಮೇಲ್ಕಂಡ ದಾಳಿಯಲ್ಲಿ ಭಾಗವಹಿಸಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಾದ ಸಿಪಿಐ ಶ್ರೀ ನಹೀಂ ಅಹಮದ್, ಆರ್ಎಂಸಿ ಯಾರ್ಡ್ ಠಾಣೆಯ ಪಿಎಸ್ಐ ಸಚಿನ್ ಬಿರಾದರ, ಡಿಸಿಆರ್ಬಿ ಘಟಕದ ಸಿಬ್ಬಂದಿಗಳಾದ ಮಜೀದ್, ಆಂಜನೇಯ, ರಮೇಶ್ ನಾಯ್ಕ್, ರಾಘವೇಂದ್ರ, ಬಾಲಾಜಿ ಹಾಗೂ ಆರ್ಎಂಸಿ ಯಾರ್ಡ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ರಮೇಶ್, ರಾಜಪ್ಪ, ಕರಿಬಸಪ್ಪ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು & ಶ್ರೀ ಮಂಜುನಾಥ ಜಿ ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.