ದಾವಣಗೆರೆ ಅಗ್ನಿಶಾಮಕರಿಗೆ ( Fireman ) ಸಾಹಸ ಕ್ರೀಡೆ ಕಾರ್ಯಗಾರ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಅಗ್ನಿ ಶಾಮಕ ದಳ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ( Fireman ) ಅಗ್ನಿಶಾಮಕರಿಗೆ ಸಾಹಸ ಕ್ರೀಡೆಗಳ ಬಗ್ಗೆ ಕಾರ್ಯಗಾರವನ್ನು ಗೃಹ ರಕ್ಷಕ ತರಬೇತಿ ಕೇಂದ್ರ ದೇವರ ಬೆಳಕೇರಿಯಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕದ ಆಯ್ದ ಜಿಲ್ಲೆಗಳಿಂದ ಅಗ್ನಿಶಾಮಕರಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಇವರಿಗೆ ಸಾಹಸ ಕ್ರೀಡೆಗಳ ಬಗ್ಗೆ ಪ್ರಾಯೋಗಿಕವಾಗಿ ಕಾರ್ಯಗಾರ ಮತ್ತು ಉಪನ್ಯಾಸವನ್ನು ಸಾಹಸ ಕ್ರೀಡಾ ತರಬೇತಿದಾರಾದ ಎನ್. ಕೆ. ಕೊಟ್ರೇಶ್ ನಡೆಸಿಕೊಟ್ಟರು ಅಗ್ನಿಶಾಮಕರು ವಿಪತ್ತುಗಳನ್ನು ಎದುರಿಸುವಾಗ ಈ ಸಾಹಸ ಕ್ರೀಡಾ ಚಟುವಟಿಕೆಗಳ ಮೂಲಕ ಅತಿ ಬೇಗ ಜನರನ್ನು ಯಾವ ರೀತಿ ರಕ್ಷಿಸ ಬಹುದು. ಮತ್ತು ನಮ್ಮನ್ನು ನಾವು ಯಾವ ರೀತಿ ಕಾಪಾಡಿಕೊಳ್ಳವ ವಿಧಾನಗಳ ಬಗ್ಗೆ. ಸಾಹಸ ಕ್ರೀಡೆಗಳಲ್ಲಿ ಇರುವ ವಿಭಾಗಗಳು. ಅನೇಕ ವಿಷಯಗಳನ್ನು ಒಳಗೊಂಡಂತೆ ಸಾಹಸ ಕ್ರೀಡೆಗಳ ಬಗ್ಗೆ ಉಪನ್ಯಾಸವನ್ನು ನೀಡಲಾಯಿತು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಜಿಲ್ಲಾ ಪ್ರಭಾರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯಾದ ಕೆ. ಎಂ. ಪುಟ್ಟಸ್ವಾಮಿ ಅವರು ಈ ಸಾಹಸ ಕ್ರೀಡೆಗಳ ಬಗ್ಗೆ ಮಾಹಿತಿ ಮತ್ತು ತರಬೇತಿಯನ್ನು ಪಡೆದರೆ ಅಗ್ನಿಶಾಮಕರಿಗೆ ತುಂಬಾ ಉಪಯುಕ್ತವಾಗುತ್ತದೆ. ಎಂತಹ ಪರಿಸ್ಥಿತಿಯಲ್ಲೂ ನೀವು ಸಮಸ್ಯೆಯನ್ನು ಎದುರಿಸುವ ಧೈರ್ಯ, ನಿಮಗಿರುತ್ತದೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಸಹಕರಿಸಿದಂತ ದಾವಣಗೆರೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಅವಿನಾಶ್. ಚನ್ನಗಿರಿ ಠಾಣಾಧಿಕಾರಿ ಸಂತೋಷ್. ತರಬೇತಿದಾರ ವಾಳಾದ್ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಅಧ್ಯಕ್ಷರಾದ ಕೊಂಡಜ್ಜಿ ರಾಜಶೇಖರ್ ಉಪಸ್ಥಿತರಿದ್ದರು. .
ಎನ್. ಕೆ ಕೊಟ್ರೇಶ್.
ಸಾಹಸ ಕ್ರೀಡಾ ತರಬೇತುದಾರರು. ದಾವಣಗೆರೆ.