ದಾವಣಗೆರೆ: ಮೇ.27ಕ್ಕೆ ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಕಾರ್ಯಗಾರ

ದಾವಣಗೆರೆ: ಮೇ.27ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಸಭಾಂಗಣದಲ್ಲಿ ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿ0ದ ಜಿಎಸ್ಟಿ ಮತ್ತು ಆದಾಯ ತೆರಿಗೆ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ತೆರಿಗೆ ಸಲಹೆಗಾರರಿಗೆ, ಲೆಕ್ಕ ಬರಹಗಾರರಿಗೆ ಮತ್ತು ವ್ಯಾಪಾರಸ್ಥರು & ಕೈಗಾರಿಕೋಧ್ಯಮಿಗಳಿಗೆ ಮುರಳಿಕೃಷ್ಣ, ಹೆಚ್ಚುವರಿ ಆಯುಕ್ತರು (ಈ-ಆಡಿಟ್), ವಾಣಿಜ್ಯ ತೆರಿಗೆ ಕಾರ್ಯಾಲಯ, ಬೆಂಗಳೂರು. ಮತ್ತು ಸಿ.ಎ. ಸಂದೀಪ್ ಬೆಂಗಳೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಗಾರ ನಡೆಸಿಕೊಡಲಿದ್ದಾರೆ. ಅತಿಥಿಗಳಾಗಿ ವಿಶ್ವನಾಥ, ಜಂಟಿ ಆಯುಕ್ತರು (ಆಡಳಿತ) ದಾವಣಗೆರೆ, ಆರ್.ಬಿ ಪಾಟೀಲ್, ಜಂಟಿ ಆಯುಕ್ತರು (ಮೇಲ್ಮನವಿ) ದಾವಣಗೆರೆ, ಅಥಣಿ ವೀರಣ್ಣ ಸನ್ನದು ಲೆಕ್ಕ ಪರಿಶೋಧಕರು, ದಾವಣಗೆರೆ. ಮತ್ತು ಎಸ್.ಎನ್ ನಂಜು0ಡ ಪ್ರಸಾದ್, ಅಧ್ಯಕ್ಷರು, KSTPA, ಹುಬ್ಬಳ್ಳಿ ಬೆಂಗಳೂರು ಆಗಮಿಸುವರು.
ಸದರಿ ಜಿ.ಎಸ್.ಟಿ & ಆದಾಯ ತೆರಿಗೆ ಕಾರ್ಯಗಾರದಲ್ಲಿ 2022-23ರ ಜಿಎಸ್ಟಿಯ ಹೊಸ ಕಾಯ್ದೆಗಳು & ವ್ಯಾಪಾರಸ್ಥರ ವಾರ್ಷಿಕ ವಹಿವಾಟು ರೂ.20 ಕೋಟಿ ಆದಾಗ e-Invoicing ಮಾಡುವುದರ ಬಗ್ಗೆ. Composition GSTR-4 ಮಾಡುವುದರ ಬಗ್ಗೆ ಹಾಗೂ 2022-23ರ ಆದಾಯ ತೆರಿಗೆಯ ಹೊಸ ಕಾಯ್ದೆಗಳು, TDS & New ITR Forms ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಮತ್ತು ಕಾರ್ಯದರ್ಶಿ ಡಿ.ಎಂ. ರೇವಣಸಿದ್ದಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719