ದಾವಣಗೆರೆ : ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ! ಬೆಳೆವಿಮೆ ನೋಂದಾವಣೆಗೆ ಕೊನೆ ದಿನ ಯಾವಾಗ ಗೊತ್ತಾ ?
ದಾವಣಗೆರೆ : ಜಿಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ/ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು.
ಬೆಳೆಸಾಲ ಪಡೆದ ರೈತರನ್ನು ಬೆಳೆಸಾಲ ಮಂಜೂರು ಮಾಡುವಾಗ, ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು, ಬೆಳೆ ಸಾಲ ಪಡೆಯದ ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ / ಖಾತೆ ಪುಸ್ತಕ/ಪಾಸ್ ಪುಸ್ತಕ/ ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆಯನ್ನು ನೀಡಿ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಕಂತನ್ನು ಪಾವತಿಸಿ ನೋಂದಾಯಿಸಲು ವಿನಂತಿಸಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಅಧಿಸೂಚನೆಗೊಂಡ ಬೆಳೆಗಳ ವಿವರ:
ಚನ್ನಗಿರಿ ತಾಲ್ಲೂಕು: ಮುಸುಕಿನ ಜೋಳ (ಮ.ಆ) ಈರುಳ್ಳಿ (ಮ.ಆ), ಎಳ್ಳು (ಮ.ಆ), ಜೋಳ (ಮ.ಆ), ನೆಲಗಡಲೆ (ಶೇಂಗಾ)(ಮ.ಆ), ಭತ್ತ (ನೀ), ರಾಗಿ (ಮ.ಆ), ಹತ್ತಿ (ಮ.ಆ),
ಜಗಳೂರು ತಾಲೂಕು: ಮುಸುಕಿನ ಜೋಳ (ಮ.ಆ), ಈರುಳ್ಳಿ (ನೀ.), ಈರುಳ್ಳಿ (ಮ.ಆ.), ಎಳ್ಳು (ಮ.ಆ), ಜೋಳ (ನೀ.), ಜೋಳ (ಮ.ಆ.), ಟೊಮ್ಯಾಟೋ, ತೊಗರಿ (ಮ.ಆ), ನವಣೆ (ಮ.ಆ), ನೆಲಗಡಲೆ (ಶೇಂಗಾ)(ನೀ.), ನೆಲಗಡಲೆ (ಶೇಂಗಾ)(ಮ.ಆ.), ಮುಸುಕಿನ ಜೋಳ (ನೀ), ರಾಗಿ (ನೀ), ರಾಗಿ (ಮ.ಆ.), ಸಜ್ಜೆ (ಮ.ಆ), ಸೂರ್ಯಕಾಂತಿ (ನೀ), ಸೂರ್ಯಕಾಂತಿ (ಮ.ಆ), ಹತ್ತಿ (ನೀ), ಹತ್ತಿ (ಮ.ಆ), ಹುರುಳಿ (ಮ.ಆ), ಹೆಸರು (ಮ.ಆ),
ದಾವಣಗೆರೆ ತಾಲೂಕು: ಮುಸುಕಿನ ಜೋಳ (ಮ.ಆ), ಜೋಳ(ನೀ), ಜೋಳ (ಮ.ಆ), ಟೊಮ್ಯಾಟೋ, ತೊಗರಿ (ಮ.ಆ), ಭತ್ತ (ನೀ), ಮುಸುಕಿನಜೋಳ (ನೀ), ರಾಗಿ (ನೀ), ರಾಗಿ (ಮ.ಆ), ಹತ್ತಿ (ಮ.ಆ),
ನ್ಯಾಮತಿ ತಾಲೂಕು : ಮುಸುಕಿನ ಜೋಳ (ಮ.ಆ), ಈರುಳ್ಳಿ (ಮ.ಆ), ಜೋಳ (ಮ.ಆ), ಟೊಮ್ಯಾಟೋ, ತೊಗರಿ (ಮ.ಆ), ನೆಲಗಡಲೆ (ಶೇಂಗಾ) (ಮ.ಆ), ಭತ್ತ (ನೀ), ಮುಸುಕಿನಜೋಳ (ನೀ), ರಾಗಿ (ಮ.ಆ), ಸೂರ್ಯಕಾಂತಿ (ಮ.ಆ),
ಹರಿಹರ ತಾಲೂಕು : ಭತ್ತ (ನೀ), ಮುಸುಕಿನ ಜೋಳ(ಮ.ಆ), ಜೋಳ(ನೀ), ಜೋಳ (ಮ.ಆ), ಮುಸುಕಿನಜೋಳ (ನೀ), ಹತ್ತಿ (ಮ.ಆ).,
ಹೊನ್ನಾಳಿ ತಾಲೂಕು : ಮುಸುಕಿನ ಜೋಳ (ಮ.ಆ), ಈರುಳ್ಳಿ (ಮ.ಆ), ಜೋಳ (ಮ.ಆ), ತೊಗರಿ (ಮ.ಆ), ನೆಲಗಡಲೆ (ಶೇಂಗಾ) (ಮ.ಆ), ಭತ್ತ (ನೀ), ಮುಸುಕಿನಜೋಳ (ನೀ), ರಾಗಿ (ಮ.ಆ), ಸೂರ್ಯಕಾಂತಿ (ಮ.ಆ),
ರೈತರು ಬೆಳೆವಿಮೆಗೆ ನೋಂದಣಿ ಮಾಡಲು ಕೊನೆ ದಿನಾಂಕ :
ಹೆಸರು (ಮಳೆ ಆಶ್ರಿತ), ಹತ್ತಿ (ಮಳೆ ಆಶ್ರಿತ), ಹತ್ತಿ (ನೀರಾವರಿ), ಈರುಳ್ಳಿ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ), ಎಳ್ಳು (ಮಳೆ ಆಶ್ರಿತ), ಟೊಮಟೋ. –15.07.2022
ಮುಸುಕಿನ ಜೋಳ (ನೀರಾವರಿ), ಭತ್ತ (ನೀರಾವರಿ), ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ರಾಗಿ (ಮಳೆ ಆಶ್ರಿತ), ರಾಗಿ (ನೀರಾವರಿ) ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ಶೇಂಗಾ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ).– 31.07.2022
ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ) – 16.08.2022
garudavoice21@gmail.com 9740365719