ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಕೊರೆದು ಕಳ್ಳತನ ಮಾಡುತ್ತಿದ ಅಂತರಾಜ್ಯ ಕಳ್ಳನ ಬಂಧನ

ದಾವಣಗೆರೆ : ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಕೊರೆದು ಕಳ್ಳತನ ಮಾಡುತ್ತಿದ ಅಂತರಾಜ್ಯ ಕಳ್ಳನ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ಬಗ್ಗೆ ಇಲ್ಲಿನ ಶಾಂತಿನಗರದ ರಿಂಗ್ ರಸ್ತೆಯಲ್ಲಿರುವ ವಿಶ್ವಾಸ್ ಸ್ಟೀಲ್ ಅಂಗಡಿಯಲ್ಲಿ ಫೇ. 23 ರಂದು ರಾತ್ರಿ 7.30ಕ್ಕೆ ಅಂಗಡಿ ಮಾಲೀಕ ಶಂಕರ್ ಎಂಬುವವರು ಅಂಗಡಿ ವ್ಯವಹಾರ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದು, ಮರು ದಿನ ಬೆಳಿಗ್ಗೆ 9ಕ್ಕೆ ಎಂದಿನಂತೆ ಅಂಗಡಿಯ ಸೆಟ್ರಸ್ ಓಪನ್ ಮಾಡಿ ನೋಡಿದರೆ ಅಂಗಡಿಯ ಛಾವಣಿಯ ಶೀಟ್ ಅನ್ನು ಯಾರೋ ಕಳ್ಳರು ಹರಿದು ಒಳ ಪ್ರವೇಶಿಸಿ ಅಂಗಡಿ ಕ್ಯಾಶ್ ಕೌಂಟರ್ ನಲ್ಲಿದ್ದ 3,000/-ರೂ ನಗದು ಹಣ ಮತ್ತು ಅಂಗಡಿಗೆ ಅಳವಡಿಸಿದ್ದ 10,000/-ರೂ ಬೆಲೆ ಬಾಳುವ ಸಿಸಿಟಿವಿ ಡಿ.ವಿ.ಆರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಳ್ಳನನ್ನು ಪತ್ತೆ ಮಾಡಿ ಕೊಡಿ ಎಂದು ಶಂಕರ್ ನೀಡಿದ ದೂರಿನ ಮೇರೆಗೆ ವಿದ್ಯಾ ನಗರ ಪೊಲೀಸರು ಕ್ರಮಕೈಗೊಂಡು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಪ್ರಕರಣದಲ್ಲಿ ಆರೋಪಿತರನ್ನು ಮತ್ತು ಮಾಲನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಡಿಸಿಆರ್ಬಿ ವಿಭಾಗದ ಡಿವೈಎಸ್ ಬಿ. ಎಸ್. ಬಸವರಾಜ್,ಪಿ ಹೆಚ್. ಗುರುಬಸವರಾಜ ಇವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಅಜ್ಜಪ್ಪ ಎಸ್ ಐ, ಪಿಎಸ್ಐ, ವಿದ್ಯಾನಗರ ಠಾಣೆ, ಡಿಸಿಐಬಿ ಸಿಬ್ಬಂದಿ ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿ, ಸದರಿ ತಂಡವು ಪ್ರಕರಣದ ಆರೋಪಿತನಾದ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಅಂಬಾದಾಸ್ ತುಳಸಿರಾಮ್ ಲಸ್ಕರೆ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣ, ಬಡಾವಣೆ ಠಾಣೆಯ 1 ಪ್ರಕರಣ, ಹರಿಹರ ಟೌನ್ ಠಾಣೆಯ 01 ಪ್ರಕರಣ, ಗಾಂಧಿನಗರ ಠಾಣೆಯ 1 ಪ್ರಕರಣ, ಮಲೇಬೆನ್ನೂರು ಠಾಣೆಯ 01 ಪ್ರಕರಣ, ಚನ್ನಗಿರಿ ಠಾಣೆಯ 1 ಪ್ರಕರಣ, ನ್ಯಾಮತಿ ಠಾಣೆಯ 01 ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿರುತ್ತವೆ,
ಸದರಿ ಪ್ರಕರಣಗಳಲ್ಲಿ ಕಳ್ಳತನ ಮಾಡಿದ 8 ಸಾವಿರ ರೂ. ನಗದು ಹಣ, 15 ಸಾವಿರ ರೂ ಬೆಲೆಯ ಐಫೋನ್, 71 ಸಾವಿರ ರೂ. ಬೆಲೆಯ ಹೆಚ್.ಪಿ ಲ್ಯಾಪ್ಟಾಪ್, 30 ಸಾವಿರ ರೂ ಬೆಲೆ ಬಾಳುವ 2 ಸಿಸಿ ಟಿವಿ ಡಿವಿಆರ್ ಅನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ, ಆರೋಪಿತರು ಕಳ್ಳತನವಾದ ಹೆಚ್ಚಿನ ಹಣವನ್ನು ಸ್ವಂತಕ್ಕೆ ಖರ್ಚು ಮಾಡಿಕೊಂಡಿರುವ ಬಗ್ಗೆ ತಿಳಿದಿದ್ದು, ತನಿಖೆ ಮುಂದುವರೆದಿರುತ್ತದೆ.
ಆರೋಪಿತನ್ನು & ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ಡಿಸಿಐಬಿ ವಿಭಾಗದ ಡಿವೈಎಸ್ಪಿ ಬಿ.ಎಸ್ ಬಸವರಾಜ ನಾಯ್ಕ, ಕೆ.ಟಿ.ಜೆ ನಗರ ವೃತ್ತದ ಸಿಪಿಐ ಹೆಚ್. ಗುರುಬಸವರಾಜ, ವಿದ್ಯಾನಗರ ಠಾಣೆಯ ಪಿಎಸ್ಐ ಅಜ್ಜಪ್ಪ, ಪಿಎಸ್ಐ ಮಂಜುನಾಥ ಕಲ್ಲದೇವರು, ಡಿಸಿಆರ್ಬಿ ಸಿಬ್ಬಂದಿಯಾದ ಕೆ.ಟಿ.ಆಂಜನೇಯ, ನಟರಾಜ ರಮೇಶನಾಯ್ಕ, ಬಾಲರಾಜ್ ಸಿ.ಎಸ್ ಹಾಗೂ ವಿದ್ಯಾನಗರ, ಠಾಣೆಯ ಎಎಸ್ಐ ತಿಪ್ಪೇಸ್ವಾಮಿ, ಸಿಬ್ಬಂದಿಯಾದ ಆನಂದ ಮುಂದಲ ಮನೆ, ಯೋಗೇಶ್ ನಾಯ್ಕ, ಆನಂದ, ಚಂದ್ರಪ್ಪ ಅಕ್ತರ್, ನಾಗರಾಜ, ಶಾಂತರಾಜ್, ರಾಘವೇಂದ್ರ, ಉಮೇಶ ಬಿಸನಾಳರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ.