ಅಭಿವೃದ್ಧಿಯಾಗಿರುವ ಕೆಟಿಜೆ ನಗರ ವಾರ್ಡ್ ಮತ್ತೆ ಸ್ಲಂ ಆಗಿ ಪರಿವರ್ತನೆ.!? ಸರ್ಕಾರದ ನಡೆಗೆ ಆಕ್ರೋಶ.!!!

IMG-20221117-WA0026

ದಾವಣಗೆರೆ: ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷದ ನಾಯಕರುಗಳು ಅಭಿವೃದ್ಧಿ ಪಥದತ್ತಸಾಗಿ, ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದು ರಾಜ್ಯದಲ್ಲಿ ಉತ್ತಮ ನಗರವೆಂಬ ಹಿರಿಮೆ ಪಡೆದ ದಾವಣಗೆರೆ ನಗರವನ್ನು ಸ್ಲಂ ಹಾಕಿ ಪರಿವರ್ತಿಸಲು ಹೊರಟಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಹರೀಶ್ ಬಸಾಪುರ ಹೇಳಿದ್ದಾರೆ.

ಸರ್ಕಾರಗಳು ಸ್ಲಂ ಗಳನ್ನು ಮೇಲ್ ದರ್ಜೆಗೇರಿಸಿ ಉತ್ತಮ ಬಡಾವಣೆಗಳನ್ನಾಗಿ ಪರಿವರ್ತಿಸಬೇಕಾದ ಕಾರ್ಯ ಮಾಡಬೇಕು ಆದರೆ ಉತ್ತಮ ಬಡಾವಣೆಗಳನ್ನೇ ಸ್ಲಂಗಳಾಗಿ ಪರಿವರ್ತಿಸಲು ಹೊರಟಿರುವುದಕ್ಕೆ ನಗರದ 26 ನೇ ವಾರ್ಡ್ ಕೆಟಿಜೆ ನಗರ ಸಾಕ್ಷಿಯಾಗಿದೆ.

ಸುಮಾರು 2500 ಮನೆಗಳನ್ನು ಹೊಂದಿರುವ ವ್ಯವಸ್ಥಿತ ರಸ್ತೆ, ಬೀದಿ ದೀಪ, ಒಳಚರಂಡಿ, ಡ್ರೈನೇಜ್ ಒಳಗೊಂಡಂತೆ ಮೂಲಭೂತ ಸೌಕರ್ಯ ಹೊಂದಿರುವ 26 ನೇ ವಾರ್ಡ್ ಕೆಟಿಜೆ ನಗರವನ್ನು ಸ್ಲಂ ಆಗಿ ಪರಿವರ್ತಿಸಲು ಹೊರಟಿರುವ ವಿಷಯ ಕೇಳಿ ಸ್ಥಳೀಯ ನಾಗರೀಕರು ಆಕ್ರೋಶಗೊಂಡಿದ್ದಾರೆ.

ಕೇವಲ 25 ರಿಂದ 30 ಮನೆಯ ಮಾಲೀಕರಿಗೆ ಸ್ಲಂ ಬೋರ್ಡ್ ಮೂಲಕ ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿ, ಪೂರ್ಣ ಏರಿಯಾ ವನ್ನೇ ಸ್ಲಂ ಎಂದು ತೀರ್ಮಾನಿಸಲು ಹೊರಟಿರುವುದು ರಾಜ್ಯ ಸರ್ಕಾರ ರಾಜ್ಯವನ್ನು ಅಭಿವೃದ್ಧಿಪಡಿಸುತ್ತಿದೆಯೋ ಅಥವಾ ಅಭಿವೃದ್ಧಿ ಹೊಂದಿದ ಸ್ಥಳವನ್ನು ಸ್ಲಂ ಆಗಿ ಪರಿವರ್ತಿಸಲು ಹೊರಟಿದೆಯೋ ಎಂಬ ಪ್ರಶ್ನೆಗೆ ಕಾರಣವಾಗಿದೆ.

ಮನೆ ಇಲ್ಲದಂತಹ ಬಡವರಿಗೆ ಮನೆ ನೀಡಲೆಂದು ಸ್ಲಂ ಬೋರ್ಡಿನಿಂದ ಮನೆ ಕಟ್ಟಿಸಿ ಕೊಡಲಾಗುತ್ತಿದ್ದು, 7-8 ತಿಂಗಳುಗಳೆ ಕಳೆದರೂ ನಗರದ ಅನೇಕ ಕಡೆಗಳಲ್ಲಿ ಮನೆಗಳನ್ನು ಅರ್ಧ ಕಟ್ಟಿ ಮನೆ ಮಾಲೀಕರನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ.

ದಾವಣಗೆರೆಯ ಕೆಟಿಜೆ ನಗರದಲ್ಲಿ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಲು ಚಾಲನೆ

ರಾಜ್ಯ ಸರ್ಕಾರ ಬಡವರಿಗೆ 3.5 ಚದಿರು ಅಳತೆಯಲ್ಲಿ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಿಸಿಕೊಡಲು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ಎಸ್ಸಿ ಎಸ್ಟಿ ಫಲಾನುಭವಿಗಳು 65,600 ಹಾಗೂ ಸಾಮಾನ್ಯ ಫಲಾನುಭವಿಗಳು 98,900 ಗಳನ್ನು 3 ಕಂತುಗಳಲ್ಲಿ ಡಿಡಿ ಮುಖಾಂತರ ಪಾವತಿಸಬೇಕಾಗಿದೆ. ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂ, ರಾಜ್ಯ ಸರ್ಕಾರ 2 ಲಕ್ಷ ರೂ ಒಟ್ಟು 3.5 ಲಕ್ಷ ರೂ ಹಣ ಮಂಜೂರು ಮಾಡಲಿದ್ದು, ಇನ್ನುಳಿದ ಹಣವನ್ನು ಬ್ಯಾಂಕ್ ಮುಖಾಂತರ ಸಾಲದ ರೂಪದಲ್ಲಿ ನೀಡಲಾಗುವುದು ಹಾಗೂ ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ, ರಾಜ್ಯ ಸರ್ಕಾರದಿಂದ 1.2 ಲಕ್ಷ ರೂ ಒಟ್ಟು 2.7 ಲಕ್ಷ ರೂ ಹಣ ಮಂಜೂರು ಮಾಡಲಿದ್ದು ಇನ್ನುಳಿದ ಹಣವನ್ನು ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ನೀಡಲಾಗುವುದು, ಗುತ್ತಿಗೆದಾರರಿಗೆ ಒಂದು ಮನೆ ಕಟ್ಟಲು 7 ಲಕ್ಷ ರೂಗಳನ್ನು ಸರ್ಕಾರ ನಿಗದಿ ಮಾಡಿದೆ.

ಮನೆ ನಿರ್ಮಾಣಕ್ಕೆ ಚಾಲನೆ ನೀಡಲು ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಬರುತ್ತಾರೆ ಎಂದು ಯಾರೂ ಬರದೇ ಹಾಗೆಯೇ ಉದ್ಘಾಟನೆ ಮಾಡಲಾಗಿದೆ. ಈ ಬಗ್ಗೆ ಗರುಡವಾಯ್ಸ್ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಮಾಹಿತಿ ಕೇಳಲು ಸಂಪರ್ಕ ಮಾಡಲಾಯಿತು ಆದರೆ ಅವರ ಪ್ರತಿಕ್ರಿಯೆ ದೊರಕಲಿಲ್ಲ.

ನಗರದ ಅನೇಕ ಕಡೆ ಮನೆ ಕಟ್ಟಲಾಗುತ್ತಿದ್ದು ಐದಾರು ತಿಂಗಳುಗಳೆ ಕಳೆದರೂ ಕೇವಲ ಗೋಡೆ ಕಟ್ಟಿ ಹೋದ ಗುತ್ತಿಗೆದಾರರು, ಅತ್ತ ಸುಳಿಯದೆ ಇರುವುದರಿಂದ ನೊಂದ ಬಡ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇದರ ಸಂಬಂಧಪಟ್ಟಂತೆ ಗುತ್ತಿಗೆದಾರರಿಗೆ ಸಂಪರ್ಕಿಸಿದರೆ ಫಲಾನುಭವಿಗಳು ತಮ್ಮ ಭಾಗದ ಹಣವನ್ನು ಡಿಡಿ ಮುಖಾಂತರ ಸ್ಲಂ ಬೋರ್ಡ್ ಗೆ ನೀಡಿದ್ದು, ಸರ್ಕಾರದಿಂದ ಇದುವರೆಗೆ ನಮಗೆ ಯಾವುದೇ ರೀತಿಯ ಹಣ ಬಂದಿರುವುದಿಲ್ಲ ಹಾಗೂ ಫಲಾನುಭವಿಗಳು ಬ್ಯಾಂಕಿಗೆ ನೀಡಬೇಕಾದ ದಾಖಲಾತಿಗಳನ್ನು ನೀಡಿದ್ದರು ಸಹ ಸರ್ಕಾರ ಸಂಬಂಧಪಟ್ಟ ಬ್ಯಾಂಕ್ಗಳ ಜೊತೆ ಚರ್ಚಿಸಿ ಸಾಲ ಮಂಜೂರಾತಿ ಮಾಡುವಲ್ಲಿ ವಿಫಲವಾಗಿದೆ ಎಂದು ದೂರುತ್ತಿದೆ.

ಈಗಾಗಲೇ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಿಸಿಕೊಂಡ ನಾಗರೀಕರು ಕಳಪೆ ಕಾಮಗಾರಿಯಿಂದ ಬೇಸರಗೊಂಡು ತಾವು ಯಾಕದರೂ ಇರುವ ಮನೆ ಕೆಡವಿ ಸ್ಲಂ ಬೋರ್ಡ್ ಮನೆ ಕಟ್ಟಿಸಿಕೊಂಡು ಸಾಲಗಾರರದೇವೋ ಎಂಬ ನೋವಿನಲ್ಲಿದ್ದರೆ ಇನ್ನೊಂದು ಕಡೆ ಉತ್ತಮ ಬಡಾವಣೆ ಯಲ್ಲಿ ವಾಸವಾಗಿದ್ದರೂ ಸಹ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಿಸಿ ಕೊಡುತ್ತಾರೆ ಎಂಬ ಆಸೆಯಿಂದ ತಾವು ವಾಸಿಸುವ ಸ್ಥಳವನ್ನು ಸ್ಲಂ ಆಗಿ ಪರಿವರ್ತಿಸಲು ಅವಕಾಶ ನೀಡುತ್ತಿರುವ ಮುಗ್ಧ ಜನರನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

*ಕೆ.ಎಲ್.ಹರೀಶ್ ಬಸಾಪುರ.*

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!