ಮುಳುಗುವ ಹಡಗಿಗೆ ಡಿಕೆಶಿ ಕ್ಯಾಪ್ಟನ್! ಡಿಜಿಪಿ ರವೀಂದ್ರನಾಥ್ ರಾಜೀನಾಮೆ ವಿಚಾರವಾಗಿ ಎಂ.ಪಿ ರೇಣುಕಾಚಾರ್ಯ ಹೇಳಿಕೆ

ದಾವಣಗೆರೆ : ಕಾಂಗ್ರೆಸ್ ಎನ್ನುವ ಮುಳುಗುವ ಹಡಗಿಗೆ ಡಿ.ಕೆ ಶಿವಕುಮಾರ್ D. K. Shivakumar, ಕ್ಯಾಪ್ಟನ್ Captain, ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ MP Renuka Acharya, ಲೇವಡಿ ಮಾಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ DGP, ರವೀಂದ್ರನಾಥ್ Rabindranath,ರಾಜೀನಾಮೆ ವಿಚಾರವಾಗಿ ಹೊನ್ನಾಳಿಯಲ್ಲಿ ಮಾತನಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ MP Renuka Acharya, ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಡಿ.ಕೆ ಶಿವಕುಮಾರ್ D. K. Shivakumar, ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಡಾ|| ರವೀಂದ್ರನಾಥ್ Rabindranath, ಅವರ ರಾಜೀನಾಮೆಗೆ ನಾನು ಕಾರಣ ಅಲ್ಲ. ನಾನು ಯಾವುದೇ ನಕಲಿ ಜಾತಿ ಪ್ರಮಾಣಪತ್ರ ಪಡೆದಿಲ್ಲ. ಡಿ.ಕೆ ಶಿವಕುಮಾರ್ ಅವರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇವರ ಆರೋಪಕ್ಕೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರೇ ತಕ್ಕ ಉತ್ತರ ನೀಡಿದ್ದಾರೆ ಎಂದಿದ್ದಾರೆ.
ಬಿಜೆಪಿ ಸಚಿವರ ಮೇಲೆ ಡಿ.ಕೆ ಶಿವಕುಮಾರ್ ನಿರಂತರ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಡಿಕೆ ಶಿವಕುಮಾರ್ D. K. Shivakumar, ಹಾಗೂ ಸಿದ್ದರಾಮಯ್ಯನವರ ನಡುವೆ ಸಿಎಂ ಆಗಬೇಕೆಂಬ ವಿಚಾರಕ್ಕೆ ಶೀತಲ ಸಮರ ನಡೆಯುತ್ತಿದೆ. ಮುಖ್ಯಮಂತ್ರಿ ಆಗುತ್ತೇನೆಂದು ಡಿ.ಕೆ ಶಿವಕುಮಾರ್ D. K. Shivakumar, ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಎಬಿಸಿಡಿ ಎಂದು ಗುಂಪುಗಳಿವೆ ಆದರೆ ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. 2023ರ ಚುನಾವಣೆಯಲ್ಲಿ ನಾವೆಲ್ಲ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ಮುಳುಗುವುದು ಖಚಿತ. ಮುಳುಗುವ ಹಡಗಿಗೆ ಡಿ.ಕೆ ಶಿವಕುಮಾರ್ ಕ್ಯಾಪ್ಟನ್ ಎಂದು ಲೇವಡಿ ಮಾಡಿದ್ದಾರೆ.