ಪೋಷಕರಿಗೆ ಪರಿಹಾರ ಧನದ ಚೆಕ್ ವಿತರಣೆ

ದಾವಣಗೆರೆ : ದಾವಣಗೆರೆ ತಾಲೂಕಿನ ಅವರಗೊಳ್ಳ ಮೊರಾರ್ಜಿ ದೇಸಾಯಿ ವಸತಿಯುತ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕು. ಚಂದನ.ಸಿ ಹೃದಯಘಾತದಿಂದ ಮೃತಪಟ್ಟಿದ್ದು, ಪರಿಹಾರದ ಮೊತ್ತ 2.50 ಲಕ್ಷ ರೂಗಳನ್ನು ವಿದ್ಯಾರ್ಥಿನಿಯ ತಂದೆಯಾದ ಚಂದ್ರಪ್ಪ ಅವರಿಗೆ ಮಾನ್ಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಚೆಕ್ ಮೂಲಕ ವಿತರಿಸಿದರು.