ರೆಡ್ ಕ್ರಾಸ್ ಸಂಸ್ಥೆಯಿ0ದ ಖೈದಿಗಳಿಗೆ ಆರೋಗ್ಯ ಸ್ವಾಸ್ಥ್ಯ ಕಿಟ್ (Hygiene Kit) ವಿತರಣೆ

redcross

ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯ ವತಿಯಿಂದ ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳಿಗೆ ಮಾಸ್ಕ್, ಔಷಧಿಗಳುಳ್ಳ ಆರೋಗ್ಯ ಸ್ವಾಸ್ಥ್ಯ ಕಿಟ್‌ಗಳನ್ನು ವಿತರಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಡಾ. ಎ. ಎಂ. ಶಿವಕುಮಾರ್ ಮತ್ತು ಜಿಲ್ಲಾ ಕಾರಾಗೃಹದ ಅಧಿಕ್ಷಕರಾದ ಶ್ರೀಮತಿ ಭಾಗೀರಥಿ ಅವರ ನೇತೃತ್ವದಲ್ಲಿ ಆರೋಗ್ಯ ಸ್ವಾಸ್ಥ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ಗೌಡ್ರ ಚನ್ನಬಸಪ್ಪ, ಪ್ರದಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಡಾ. ಗಿರೀಶ್, ನಿರ್ದೇಶಕರುಗಳಾದ ಇನಾಯತ್‌ವುಲ್ಲಾ, ಆನಂದಜ್ಯೋತಿ, ರವಿಕುಮಾರ್, ಡಿ.ಎನ್. ಶಿವಾನಂದ, ಶ್ರೀಕಾಂತ ಬಗರೆ, ನರೇಂದ್ರಪ್ರಕಾಶ್, ಡಾ. ಧನಂಜಯಮೂರ್ತಿ, ಕರಿಬಸಪ್ಪ, ಜಗನ್, ಬಾಲಚಂದ್ರ, ರಾಮಚಂದ್ರ ಶೆಟ್ಟರ್, ಪುರುಷೋತ್ತಮ, ಕೊಟ್ರೇಶ್, ರವೀಂದ್ರನಾಥ, ಶಿವಕುಮಾರ್, ಗಿರೀಶ್, ವಿನಾಯಕ, ಜೈಲರ್ ವೆರ್ಣೇಕರ, ವಿ.ಪಿ. ರಾಥೋಡ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!