ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ದುಡಿದವರಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ: ದಾವಣಗೆರೆ ಜಿಲ್ಲಾ ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಾವಣಗೆರೆ ಸಮೀಪದ ಐತಿಹಾಸಿಕ ಹಿನ್ನಲೆಯ ಎಲೆಬೇತೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳಿಗೆ ಪೂರಕವಾಗಿ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ವೈಭವಯುತವಾಗಿ ನಡೆದಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಸಿರಿಗೆರೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಮಹಾಮಂಟಪದ ಮಾಜಿ ಪ್ರಧಾನರು ಬಸವನಾಳ್ ಬಸವರಾಜಪ್ಪ ವೇದಿಕೆಯಲ್ಲಿ ಮಾರ್ಚ್ ೨೬ ಮತ್ತು ೨೭ ರಂದು ನಡೆದ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಜಿಲ್ಲೆಯ ಹಿರಿಯ ಮಹಿಳಾ ಸಾಹಿತಿ ಜಿ.ಎಸ್.ಸುಶೀಲಾದೇವಿ ಆರ್.ರಾವ್ ಅವರು ವಹಿಸಿಕೊಂಡಿದ್ದರು. ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲೆಬೇತೂರು ಗ್ರಾಮದ ಹಿರಿಯರು, ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರಕಾರಿ ಇಲಾಖೆಗಳು, ವಿಶೇಷವಾಗಿ ಯುವಜನತೆ, ಮಹಿಳೆಯರು, ಮಕ್ಕಳಿಗೆ, ಎಲೆಬೇತೂರಿನ ಸುತ್ತಮುತ್ತಲಿನ ಗ್ರಾಮದ ನಾಗರಿಕರಿಗೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಬಿ.ವಾಮದೇವಪ್ಪ ಅವರು ಅತ್ಯಂತ ಕೃತಜ್ಞತಾಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸಮ್ಮೇಳನದ ವಿವಿಧ ಗೋಷ್ಠಿಗಳು, ಕವಿಗೋಷ್ಠಿ, ವಿಶೇಷ ಉಪನ್ಯಾಸ ಮಾಲಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ವಾಂಸರು, ಕವಿಗಳು, ಸಾಹಿತ್ಯಿಕ ದಿಗ್ಗಜರು, ಬರಹಗಾರರು ಹಾಗೂ ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರುಗನ್ನು ತಂದುಕೊಟ್ಟ ಕಲಾವಿದರಿಗೂ, ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕಲಾವಿದರಿಗೂ, ಶಾಲಾ ಮಕ್ಕಳಿಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧನ್ಯವಾದಗಳನ್ನು ಸಲ್ಲಿಸುತ್ತದೆ.
ಹಾಗೂ ಸಮ್ಮೇಳನಕ್ಕೆ ಅಂದವಾದ ವೇದಿಕೆ, ಮಹಾಮಂಟಪಕ್ಕೆ ಶಾಮಿಯಾನ ವ್ಯವಸ್ಥೆಯನ್ನು ಮಾಡಿದ, ಬೆಳಕಿನ ವ್ಯವಸ್ಥೆ-ಧ್ವನಿವರ್ಧಕವನ್ನು ಒದಗಿಸಿದ ಹಾಗೂ ಎರಡು ದಿನಗಳ ಕಾಲ ಸಾಹಿತ್ಯಾಭಿಮಾನಿಗಳಿಗೆ ಅತ್ಯಂತ ಶುಚಿ-ರುಚಿಯಾದ ಭೋಜನ ವ್ಯವಸ್ಥೆ ಮಾಡಿದಂತಹ ಎಲ್ಲರಿಗೂ ಹಾಗೂ ಸಹಕರಿಸಿದ ಆರಕ್ಷಕ ಸಿಬ್ಬಂದಿಗಳಿಗೂ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೂ, ಸಮ್ಮೇಳನದ ಮಾಹಿತಿಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಿದ ಮಾಧ್ಯಮ ಬಂಧುಗಳಿಗೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಸಮ್ಮೇಳನದ ಯಶಸ್ಸಿಗೆ ದುಡಿದ ಪ್ರತಿಯೊಬ್ಬರಿಗೂ ಹಾಗೂ ದಾವಣಗೆರೆ ಜಿಲ್ಲಾ ಕಸಾಪ ದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗೂ ಎಲ್ಲಾ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಮತ್ತು ಸಹಕರಿಸಿದ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪನವರು ಅವರೆಲ್ಲರ ಸಹಕಾರ, ಸಹಯೋಗವನ್ನು ಸ್ಮರಿಸುತ್ತ ಎಲ್ಲರಿಗೂ ಅತ್ಯಂತ ಗೌರವಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಧನ್ಯವಾದಗಳೊಂದಿಗ
ಬಿ.ವಾಮದೇವಪ್ಪ
ಅಧ್ಯಕ್ಷರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ದಾವಣಗೆರೆ.
ಮೊ: ೯೪೪೮೮೧೨೭೦೪