ದಾವಣಗೆರೆಯಲ್ಲಿ ಸೊಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಮಾಡಲೇಬೇಕು,ಸಂಸದ ಸೇರಿದಂತೆ ಎಲ್ಲಾ ಶಾಸಕರಿಂದ ಆಗ್ರಹ

ದಾವಣಗೆರೆ: ದಾವಣಗೆರೆಯಲ್ಲಿ ಸೋಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಮಾಡಲೇಬೇಕು, ಲಾಕ್ ಡೌನ್ ಮಾಡಬೇಕು ಎಂದು ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಭಸವರಾಜ್ ಗೆ ಸಭೆಯಲ್ಲಿ ಆಗ್ರಹಿಸಿದ್ದಾರೆ.
ಜನತಾ ಲಾಕ್ ಡೌನ್ ಸರಿಯಾದ ರಿತೀಯಲ್ಲಿ ನಡಿತಿಲ್ಲಾ ಆದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಉವಂತೆ ಸಿಎಂ ಗೆ ಶಿಪಾರಸ್ ಮಾಡುವಂತೆ ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲಿನಿಂದ ಮನವಿ ಮಾಡಿಕೊಂಡರು. ಸೋಂಕು ಪ್ರಮಾಣ, ಸಾವು ನೋವು ಕಡಿಮೆಯಾಗಬೇಕಂದ್ರೆ ಲಾಕ್ ಡೌನ್ ಮಾಡಬೇಕು. ಲಾಕ್ ಡೌನ್ ಮಾಡದಿದ್ದರೇ ಸಾವು ನೋವು ಜಾಸ್ತಿಯಾಗುತ್ತದೆ. ಚೈನ್ ಲಿಂಗ್ ಮುರಿಯಬೇಕು ಅಂದ್ರೆ ಲಾಕ್ ಡೌನ್ ಮಾಡಬೇಕು ಎಂದಿದ್ದಾರೆ.
ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾಡಳಿತದ ಆವರಣದಲ್ಲಿ ಇರುವ ತುಂಗಭದ್ರಾ ಸಭಾಂಗಣದಲ್ಲಿ ಕೊರೊನಾ ಸೊಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆ ನಡೆಯಿತು.
ದಾವಣಗೆರೆ ಸಂಸದರಾದ ಶ್ರೀ ಜಿ.ಎಮ್. ಸಿದ್ದೇಶ್ವರ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್. ಎ.ರವೀಂದ್ರನಾಥ, ಪ್ರೂ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಸೇರಿದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.