ಒಣಎಲೆಗಳ ಸುಡಬೇಡಿ ಬಂಧುಗಳೇ  ಕೊರಡಿಗೆ ಕಡ್ಡಿ ಗೀರಬೇಡಿ ಬಾಂಧವರೇ ಯಾವ ಜೀವಿ ಬದುಕುತಿಹುದೋ ಅದರೊಳಗೆ  ಬಾಳಲಿ ಬಿಡಿ ತಮ್ಮಷ್ಟಕೆ ಸುಮ್ಮಗೆ !!

ಒಣಎಲೆಗಳ ಸುಡಬೇಡಿ ಬಂಧುಗಳೇ  ಕೊರಡಿಗೆ ಕಡ್ಡಿ ಗೀರಬೇಡಿ ಬಾಂಧವರೇ ಯಾವ ಜೀವಿ ಬದುಕುತಿಹುದೋ ಅದರೊಳಗೆ  ಬಾಳಲಿ ಬಿಡಿ ತಮ್ಮಷ್ಟಕೆ ಸುಮ್ಮಗೆ !!

ದಾವಣಗೆರೆ : ಹಕ್ಕಿಗೂಡಿಗೆ ಬೇಕು ಒಣಎಲೆ  ಚಿಟ್ಟೆ ದುಂಬಿ ಮೊಟ್ಟೆ ನೋಡು ಕೊರಡಲ್ಲೇ  ಎಲೆಯ ಕೊರಡ ಸುಡುವ ಗೀಳು ಏತಕೆ  ನೆಲೆಯನುಳಿಸಿ ಬದುಕಬಿಡು ಆ ಜೀವಕೆ!!

ತರಗೆಲೆಯಲಿ ಹರಿವ ಇರುವೆ ಶತಪಾದಿಯೂ  ಕಡ್ಡಿಕೊರಡ ಪುಡಿಗಟ್ಟುವ ಗೆದ್ದಲೂ ಮಣ್ಣ ಒಳಗೆ ಬಿಲವ ತೊಡೋ ಇಲಿಗಳೂ ಬಿಲಕೆ ಇಳಿದು ಇಣುಕಿ ನೋಡೋ ಹಲ್ಲಿಗಳೂ !!

ಒಣಹುಲ್ಲನ್ನು , ಎಲೆಗಳನ್ನು, ಗರಿಗಳನ್ನು ಅವಲಂಬಿಸಿ ಬದುಕುವ ಜೀವಿಸಂಕುಲವೇ ನಮ್ಮಲ್ಲಿವೆ. ಈ ಕೆಳಗಿನ ಚಿತ್ರ ಅದನ್ನೇ ತೋರಿಸುತ್ತಿದೆ. ಈ ಚಿತ್ರ ನೋಡಿ ಅನಿಸಿದ್ದನ್ನು ಹಾಗೆಯೇ ಕಾಣಿಸಿದ್ದೇನೆ.

ಮರದ ಕೊರಡು ನಿರ್ಜೀವಿ ಎನ್ನುವುದೇ ತಪ್ಪು. ಉರುಳಿದ ಮರ ಅಥವಾ ಗಿಡ/ಮರಗಳ ಕೊಂಬೆಗಳು ಕೂಡಾ ವಿವಿಧ ಬಗೆಯ ಜೀವಿಜಂತುಗಳಿಗೆ ಆಶ್ರಯ ನೀಡಿ ಜೀವಿಸುತ್ತವೆ .

ಆದ್ದರಿಂದ ಇನ್ನು ಮುಂದೆ ಗಿಡ/ಮರಗಳ ಕೊಂಬೆಗಳನ್ನು ಕಡಿದು ಜೈವಿಕ ಇದ್ದಲಾಗಿ (Biochar) ಉರುವಲಾಗಿ ಅಥವಾ ಇನ್ನಿತರ ರೀತಿಯಲ್ಲಿ ಬಳಸುವ ಮೊದಲು ಒಮ್ಮೆ ಯೋಚಿಸಬೇಕಿದೆ.

ಉದುರಿದ ಕೊಂಬೆ ಅಥವಾ ಮರದ ಕಾಂಡವೊಂದು ಸಂಪೂರ್ಣವಾಗಿ ಕೊಳೆತು ಕಳಿಯಲು ವರ್ಷವೇ ಬೇಕೇನೋ. ಕೊಳೆಯುವಿಕೆಯ ಕಾಲಾವಧಿ ಆ ಪ್ರದೇಶದಲ್ಲಿನ ಹವಾಮಾನದ ಮೇಲೆ ಅವಲಂಬಿಸಿದೆ.

ನಿಧಾನಗತಿಯ ಕೊಳೆಯುವಿಕೆ ಕಾಲಘಟ್ಟದಲ್ಲಿ ಆ ಮರದ ಕೊರಡಿನಲ್ಲಿರುವ ಸಾರಜನಕ, ರಂಜಕ, ಪೊಟಾಷ್, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶಗಳು ಬಿಡುಗಡೆಯಾಗಿ ಅಲ್ಲಿ ಬೆಳೆಯುತ್ತಿರುವ ಇನ್ನಿತರ ಗಿಡಗಳ ಬೆಳವಣಿಗೆಗೆ ನೆರವಾಗುತ್ತವೆ. ಅಲ್ಲಿಗೆ ಮರದ ಕೊರಡಿನಲ್ಲಿದ್ದ ಪೋಷಕಾಂಶಗಳು ಮರುಬಳೆಕೆಯಾಗುತ್ತಿದೆ ಎಂದಾಯ್ತು.

ಮರದ ಕೊರಡು ಉರುಳಿದ ಹೊಲ / ತೋಟಗಳಲ್ಲಿನ ಮಣ್ಣು ಈ ಪೋಷಕಾಂಶಗಳಿಂದ ಕ್ರಮೇಣ ಫಲವತ್ತತೆ ಪಡೆದುಕೊಳ್ಳುತ್ತವೆ. ಹಾಗೆಯೇ ಆ ಮಣ್ಣಿನ ರಚನೆ ಸುಧಾರಿಸುತ್ತದೆ. ಮನ್ನಲ್ಲಿನ ರಂಧ್ರಗಳ ಸಂಖ್ಯೆ ಹೆಚ್ಚಾಗುತ್ತದೆ.

ಜೊತೆಗೆ ಮರದ ಕೊರಡು ಬಹುತೇಕ ಜೀವಿಜಂತುಗಳಿಗೆ, ವಿಶೇಷವಾಗಿ ಗೆದ್ದಲು, ಫಂಗಿ ಹಾಗೂ ಕೆಲಬಗೆಯ ಕೀಟಗಳಿಗೆ ಆಹಾರದ ಮೂಲವೂ ಆಗುತ್ತದೆ.

ಈ ರೀತಿಯಲ್ಲಿ ಮರದ ಕೊರಡೊಂದು ಅನೇಕ ಬಗೆಯ ಕ್ರಿಮಿಕೀಟಗಳಿಗೆ ಹಾಗೂ ಜೀವಿಜಂತುಗಳಿಗೆ ಆಶ್ರಯತಾಣವಾಗಿಯೂ ಮತ್ತು ಆಹಾರದ ಮೂಲವಾಗಿಯೂ ಪ್ರಯೋಜನಕಾರಿಯಾಗಿದೆ. ಜೊತೆಗೆ ಉರುಳಿದ ಮರದ ಭಾಗಗಳು ಸ್ವಲ್ಪ ಮಟ್ಟಿಗೆ ಅಲ್ಲಿನ ಪರಿಸರದ ಸ್ಥಿತಿಗತಿಯನ್ನೂ ಸಹ ತಹಬದಿಗೆ ತರುತ್ತವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!