ಜಾತಿ-ಧರ್ಮ, ಹಣದ ಆಮಿಷಗಳಿಗೆ ಬಲಿ ಆಗಬೇಡಿ – ಎಸ್ ಎಸ್

Don't fall victim to caste-religion, money lures - SS

ದಾವಣಗೆರೆ: ಸಾರ್ವಜನಿಕರನ್ನು ದಾರಿ ತಪ್ಪಿಸಲು ಜಾತಿ-ಧರ್ಮ, ಹಣದ ಆಮಿಷಗಳಿಗೆ ಬಲಿ ಆಗಿ ಮತ ನೀಡದೇ ಅಭಿವೃದ್ಧಿ ಪರವಾಗಿರುವವರಿಗೆ ಮತ ಚಲಾಯಿಸಿ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.

 

ದಾವಣಗೆರೆ ನಗರದ 20ನೇ ವಾರ್ಡ್‍ನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಹೆಚ್.ಕೆ.ಆರ್.ನಗರದ ವಿವಿಧ ಕ್ರಾಸ್ ಗಳಲ್ಲಿ ಸಿ.ಸಿ.ಚರಂಡಿ, ಉದ್ಯಾನವನ ಅಭಿವೃದ್ಧಿ ಮತ್ತು ಗ್ರಂಥಾಲಯ ನಿರ್ಮಾಣ ಕಾಮಗಾರಿ ಹಾಗೂ 21ನೇ ವಾರ್ಡ್‍ನಲ್ಲಿ ಲೋಕೋಪಯೋಗಿ ಇಲಾಖೆಯಡಿ ಅಣ್ಣಾನಗರದ 1ನೇ ಕ್ರಾಸ್‍ನಲ್ಲಿ ಸಿ.ಸಿ.ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬರುವ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ಸಂದರ್ಭದಲ್ಲಿ ಕೆಲವರು ಅಪಪ್ರಚಾರ ನಡೆಸಿ ಓಟು ಗಿಟ್ಟಿಸುವ ಕೆಲಸ ಮಾಡಲಿದ್ದಾರೆ. ಅಂತಹವರಿಗೆ ಮಾನ್ಯತೆ ನೀಡದಂತೆ ಎಚ್ಚರಿಕೆಯಿಂದ ಇದ್ದು, ಅಭಿವೃದ್ಧಿ ಪರ ಇರುವವರಿಗೆ…

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!