ಹಿರಿಯ ರೈತ ಮುಖಂಡರ ಆಶೀರ್ವಾದ ಪಡೆದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ; ಹಿರಿಯ ರೈತ ಮುಖಂಡರಾದ ಪ್ರೊ.ನರಸಿಂಹಪ್ಪ ಅವರು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

ದಾವಣಗೆರೆಯಿಂದ ಪ್ರಥಮಬಾರಿಗೆ ಮಹಿಳಾ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಲೋಕಸಭೆಯಲ್ಲಿ ಘಂಟಾಘೋಷವಾಗಿ ದಾವಣಗೆರೆಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಧ್ವನಿ ಎತ್ತಿದ ಸಂಸದರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ಇದೇ ವೇಳೆ ನಮ್ಮ ಸಂಪ್ರದಾಯದಂತೆ ಹಿರಿಯ ರೈತ ಮುಖಂಡ ಆಶೀರ್ವಾದ ಪಡೆದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪ್ರೊ.ನರಸಿಂಹಪ್ಪ ಅವರು ತುಂಬು ಮನಸ್ಸಿನಿಂದ ಆಶೀರ್ವಾದ ಮಾಡಿದರು.ಈ ವೇಳೆ ರೈತಮುಖಂಡ ಶಾಮನೂರು ಲಿಂಗರಾಜ್ ಇದ್ದರು.

Leave a Reply

Your email address will not be published. Required fields are marked *

error: Content is protected !!