ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ 5 ಆರೋಪಿಗಳ ಬಂಧನ 3 ಕೆ ಜಿ 422 ಗ್ರಾಂ ನಕಲಿ ಬಂಗಾರ ವಶ

ದಾವಣಗೆರೆ: ದಾವಣಗೆರೆ ಹೊರ ವಲಯದ ಜೆಎಚ್ ಪಟೇಲ್ ಬಡಾವಣೆಯ ಕ್ರೀಡಾಂಗಣದ ಬಳಿ ನಕಲಿ ಚಿನ್ನ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಅಕ್ರಮ ಜಾಲದ ಮೇಲೆ ಬಿಎಸ್ ಬಸವರಾಜ್ ಪೊಲೀಸ್ ಉಪಾಧೀಕ್ಷಕರು ಡಿ ಸಿ ಆರ್ ಬಿ ಮಾರ್ಗದರ್ಶನದಲ್ಲಿ ಸಿ ಇ ಎನ್ ಪೊಲೀಸ್ ಠಾಣೆ ನಿರೀಕ್ಷಕರಾದ ಬಿವಿ ಗಿರೀಶ್ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ನಾಗರಾಜ್ ಗೋವಿಂದರಾಜು,ತಂಡವು ದಾಳಿ ಮಾಡಿ 5 ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ
ಆರೋಪಿಗಳಿಂದ 3ಕೆಜಿ 422 ಗ್ರಾಂ ನಕಲಿ ಬಂಗಾರ ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ 800 ಕಾರು,ಒಂದು ಬೈಕು, ಅಮಾನತು ಮಾಡಲಾಗಿದೆ.
ಉಳಿದ ಆರೋಪಿಗಳ ಬಂಧನದ ಕಾರ್ಯ ನಡೆದಿದ್ದು.
ಸಿ ಇ ಎನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ