ದಂಡ ಹಾಕುವ ಬದಲು ಹೆಲ್ಮೆಟ್ ಖರೀದಿಸಿ ಕೊಡುವ ಮೂಲಕ ಮಾನವೀಯತೆ ಮೆರೆದ ಡಿವೈಎಸ್ಪಿ ತಾಮ್ರಧ್ವಜ.

ದಾವಣಗೆರೆ :ಪೊಲೀಸರು ಎಂದರೆ ಕೇವಲ ಹೆಲ್ಮೆಟ್, ಇನ್ಶೂರೆನ್ಸ್ ಇಲ್ಲ ಎಂದು ಕಂಡ ಕಂಡ ಕಡೆ ದಂಡ ವಸೂಲಿ ಮಾಡುತ್ತಾರೆ ಎಂದು ನಾವುಗಳು ಅವರನ್ನು ನಿಂದಿಸುತ್ತಿದ್ದೇವು, ಇದಕ್ಕೆ ಅಪವಾದ ಎಂಬಂತೆ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ರವರು ದಂಡ ಹಾಕುವ ಬದಲು ಹೆಲ್ಮೆಟ್ ಹಾಕದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಹೆಲ್ಮೆಟ್ ಹಾಕುವುದರಿಂದ ಆಗುವ ಅನುಕೂಲದ ಬಗ್ಗೆ ತಿಳಿಹೇಳಿ ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸುವ ವ್ಯವಸ್ಥೆ ಮಾಡುವ ಮೂಲಕ ಜಿಲ್ಲೆಯ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಇದೇ ರೀತಿ ಜಿಲ್ಲೆಯ ಎಲ್ಲಾ ಕಡೆಯಲ್ಲೂ ಸಹ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಬದಲು ಈ ರೀತಿಯ ಹೆಲ್ಮೆಟ್ ಖರೀದಿ ವ್ಯವಸ್ಥೆ ಮಾಡುವ ಮೂಲಕ ಪೊಲೀಸರು ಎಂದರೆ ಕೇವಲ ದಂಡ ವಸೂಲಿ ಮಾಡಲು ಹಾಗೂ ಶಿಕ್ಷೆ ನೀಡಲು ಮಾತ್ರ ಸೀಮಿತವಲ್ಲ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಿ ಎಂಬುದೇ ನಮ್ಮ ಬಯಕೆ.
ಕೆ.ಎಲ್.ಹರೀಶ್ ಬಸಾಪುರ.