ದೆಹಲಿ ಮಟ್ಟದಲ್ಲಿ ಆಕ್ಟೀವ್ ಆದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ದೆಹಲಿ: 2023 ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು ಎಲ್ಲಾ ಪಕ್ಷಗಳು ತಮ್ಮದೇ ಆದ ರಣತಂತ್ರಗಳ ಮೂಲಕ ಚುನಾವಣಾ ಸಿದ್ದತೆ ನಡೆಸುತ್ತಿದೆ.
ಜೆಡಿಎಸ್ ಪಕ್ಷ ಕೂಡ ಜನತಾ ಜಲಧಾರೆ,ಜನತಾ ಮಿತ್ರ,ಪಂಚರತ್ನ ಯೋಜನೆಗಳ ಮೂಲಕ ಫುಲ್ ಆಕ್ವೀವ್ ಆಗಿದ್ದು ಮಿಷನ್ 123 ಎಂಬ ಮಂತ್ರ ಜಪಿಸುತ್ತಿದೆ.ಇದರ ಬೆನ್ನಲ್ಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಫುಲ್ ಆಕ್ಟೀವ್ ಆಗಿದ್ದು ದೆಹಲಿ ಮಟ್ಡದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.ಹಲವು ಮಹತ್ವದ ಕಾರಣಗಳಿಗಾಗಿ ದೆಹಲಿಗೆ ಭೇಟಿ ನೀಡಿರುವ ಕುಮಾರಸ್ವಾಮಿ,ಪಕ್ಷ ಸಂಘಟನೆ ಸೇರಿದಂತೆ ಅನೇಕ ವಿಚಾರಗಳಿಗೆ ರಾಷ್ಟ್ರೀಯ ಮಟ್ಟದ ಜನತಾ ಪರಿವಾರದ ನಾಯಕರನ್ನು ಭೇಟಿಯಾಗಲಿದ್ದಾರೆ.
*ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಬಿಹಾರದ ಸಿಎಂ ನಿತೀಶ್ ಕುಮಾರ್*
ದೆಹಲಿಯಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾದ ಮಹಿಮಾ ಪಟೇಲ್ ಭೇಟಿಯಾಗಿದ್ದಾರೆ.
ಇತ್ತೀಚಿಗಷ್ಟೇ ಎನ್ ಡಿ ಎ ಜೊತೆಗಿನ ಮೈತ್ರಿಕೂಡ ಸರ್ಕಾರರವನ್ನು ವಿಸರ್ಜಿಸಿ ಹೊರ ಬಂದಿರುವ ನಿತೀಶ್ ಕುಮಾರ್ ಸದ್ಯ ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರುತ್ತಿದ್ದಾರೆ.ಮೋದಿ ಆಡಳಿತದ ಬಗ್ಗೆ ಟೀಕಿಸುತ್ತಿರುವ ನಿತೀಶ್ ಕುಮಾರ್ ತೃತೀಯ ರಂಗ ರಚನೆಗೆ ಸಂದೇಶ ನೀಡಿದ್ದಾರೆ.ಎಲ್ಲಾ ಜನತಾ ಒಕ್ಕೂಟದ ಪಕ್ಷಗಳು ಒಟ್ಟಾಗಿ ಸೇರಿ ತೃತೀಯ ರಂಗ ರಚಿಸಿದರೆ ಪ್ರಧಾನಿ ಮೋದಿಯನ್ನು ಸೋಲಿಸುವುದು ಬಹಳ ಎಂದು ಇತ್ತೀಚಿಗಷ್ಟೇ ಹೇಳಿಕೆ ನೀಡಿದ್ದರು.ಅಲ್ಲದೇ ಇಂದು ಬಿಹಾರದ ಪಾಟ್ನಾದಲ್ಲಿ ಜೆಡಿಯು ಪಕ್ಷದ ಕೌನ್ಸೆಲಿಂಗ್ ಸಭೆಯನ್ನು ಸಹ ಮಾಡಿದ್ದಾರೆ.
2024 ರ ಲೋಕಸಭಾ ಚುನಾವಣಾ ಕಣದ ಮೇಲೆ ಕಣ್ಣಿಟ್ಡಿರುವ ನಿತೀಶ್ ಕುಮಾರ್ ಮೋದಿ ವಿರುದ್ದ ಪ್ರಧಾನಿ ರೇಸ್ನಲ್ಲಿ ಓಡಬೇಕೆಂದುಕೊಂಡಿದ್ದಾರೆ.ಈ ಹಿನ್ನೆಲೆ ದೇಶದ ಎಲ್ಲಾ ಜನತಾ ಪರಿವಾರದ ನಾಯಕರನ್ನು ಭೇಡಿ ಮಾಡಿ ವಿಶ್ವಾಸಗಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.ಸದ್ಯ ಅನಾರೋಗ್ಯ ಹಿನ್ನೆಲೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್ ಡಿ ದೇವೆಗೌಡರು ದೆಹಲಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ.ಆದ್ದರಿಂದ ಕುಮಾರಸ್ವಾಮಿಯವರನ್ನೆ ಭೇಟಿ ಮಾಡಿ ಮುಂಬರುವ ಚುನಾವಣೆಯಲ್ಲಿ ಬೆಂಬಲ ಕೋರಿದ್ದಾರೆ.ದೆಹಲಿಯ ದೇವೆಗೌಡರ ನಿವಾಸದಲ್ಲಿ ಈ ಭೇಟಿ ನಡೆದಿದ್ದು ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಸಿ.ಎಂ.ಇಬ್ರಾಹಿಂ ಕೂಡ ಇದೇ ವೇಳೆ ಹಾಜರಿದ್ದರು.