ಕೊವಿಡ್ ವಿಚಾರದಲ್ಲಿ ಕೇಂದ್ರದ ದೋರಣೆ ಪ್ರಶ್ನಿಸದೆ, ರಾಜ್ಯದ ಬಿ.ಜೆ.ಪಿ.ಯ 25 ಸಂಸದರು ಜಾಣ ಮೌನಕ್ಕೆ ಶರಣಾಗಿರುವುದು ಆತ್ಮ ವಂಚನೆಯಾಗಿದೆ: ಚಿತ್ರದುರ್ಗ ಮಾಜಿ ಸಂಸದ ಬಿ ಎನ್ ಚಂದ್ರಪ್ಪ

-
ಕೊವಿಡ್ ವಿಚಾರದಲ್ಲಿ ಕೇಂದ್ರದ ದೋರಣೆ ಪ್ರಶ್ನಿಸದೆ, ರಾಜ್ಯದ ಬಿ.ಜೆ.ಪಿ.ಯ 25 ಸಂಸದರು ಜಾಣ ಮೌನಕ್ಕೆ ಶರಣಾಗಿರುವುದು ಆತ್ಮ ವಂಚನೆಯಾಗಿದೆ.
- ಚಿತ್ರದುರ್ಗ ಮಾಜಿ ಸಂಸದ ಬಿ ಎನ್ ಚಂದ್ರಪ್ಪ
ಚಿತ್ರದುರ್ಗ: ರಾಜ್ಯದಲ್ಲಿ ಕೊರೋನ ಎರಡನೇ ಅಲೆ ವಿಜೃಂಬಿಸುತ್ತಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜನರ ಜೀವ ಉಳಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಔಷಧಿ, ಆಕ್ಸಿಜನ್ ಹಾಗೂ ರೆಮಿಡಿಸಿವಿಯರ್ ಇಂಜೆಕ್ಷನ್ ಸೇರಿದಂತೆ ಎಲ್ಲಾದಕ್ಕೂ ವೈದ್ಯರು ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಸರ್ಕಾರವನ್ನು ಬೇಡುವಂತಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಔಷಧಿಗಳು, ಆಮ್ಲಜನಕ ಒದಗಿಸಲು ಮಲತಾಯಿ ದೋರಣೆ ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ. ನ್ಯಾಯಾಲಯ ಮದ್ಯೆ ಪ್ರವೇಶಿಸಿ ರಾಜ್ಯದ ಪಾಲಿನ ಆಕ್ಸಿಜನ್ ಕೊಡಿಸಬೇಕಾದ ಸ್ಥಿತಿ ಉಂಟುಮಾಡಿದ ಕೇಂದ್ರದ ನಡೆ ಅತ್ಯಂತ ಆಕ್ಷೇಪಾರ್ಹ.
ದೇಶದ ಕೆಲವು ರಾಜ್ಯಗಳಲ್ಲಿ ಕೊರೊನ ಪೀಡಿತರು ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಅಂತಹ ರಾಜ್ಯಗಳಿಗೆ ಹೆಚ್ಚು ರೆಮಿಡಿಸಿವಿಯರ್, ಇಂಜೆಕ್ಷನ್, ಸರಬರಾಜು ಮಾಡುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತುರ್ತು ಹಾಗೂ ಅಗತ್ಯವಿರುವಷ್ಟು ರೆಮಿಡಿಸಿವಿಯರ್, ಇಂಜೆಕ್ಷನ್ ನೀಡುತ್ತಿಲ್ಲ. ಈ ವಿಷಯ ವನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹೀಗೆ ಪ್ರತಿ ವಿಷಯದಲ್ಲಿಯೂ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ.ಸರ್ಕಾರದ ಈ ರೀತಿಯ ದೋರಣೆಯನ್ನು ಪ್ರಶ್ನಿಸದೇ ರಾಜ್ಯದ ಬಿ.ಜೆ.ಪಿ.ಯ 25 ಸಂಸದರು ಜಾಣ ಮೌನಕ್ಕೆ ಶರಣಾಗಿರುವುದು ಆತ್ಮ ವಂಚನೆಯಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ನಿತ್ಯ 200ಕ್ಕೂ ಹೆಚ್ಚು ಅಧಿಕ ಪಾಸಿಟಿವ್ ಕೇಸ್ಗಳು ವರದಿಯಾಗುತ್ತಿದ್ದು, ಪ್ರತಿನಿತ್ಯ ಆಸ್ಪತ್ರೆಗಳಿಗೆ ಬರುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ. ಹೆಚ್ಚುವರಿ ಸೌಲ್ಯಭ್ಯಗಳನ್ನು ಒದಗಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ನಾಮಕಾವಸ್ಥೆಗೆ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಸರ್ಕಾರದ ಮೇಲೆ ಒತ್ತಡ ಏರಿ ಅಗತ್ಯವಾಗಿರುವ ಔಷಧ, ಆಮ್ಲಜನಕವನ್ನು ತುರ್ತಾಗಿ ಒದಗಿಸಬೇಕು. ಆಸ್ಪತ್ರೆಗಳಲ್ಲಿ ಹಾಸಿಗೆಯ ಸಾಮರ್ಥ್ಯವನ್ನು ಹೆಚ್ಚಿಸು ವುದು, ವ್ಯಾಕ್ಸಿನ್ ಗಾಗಿ ಉಂಟಾಗಿರುವ ಹಾಹಾಕಾರ ನೀಗಿಸಿ ತಮಗೆ ಅಧಿಕಾರ ನೀಡಿದ ಜನರ ಋಣ ತೀರಿಸುವ ಬದಲು ಪಲಾಯಾನವಾದ ಅನುಸರಿಸುತ್ತಿರುವುದು ಸರಿಯಲ್ಲ. ಕೇವಲ ಕಣ್ಣೋರೆಸುವ ತಂತ್ರ ಅನುಸರಿಸುತ್ತಿರುವ ಬಿಜೆಪಿ ಯ ಸಚಿವರು, ಸಂಸದರು, ಶಾಸಕರು, ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ.
ಬಡವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಲಾಕ್ಡೌನ್ ನಿಂದಾಗಿ ಜನತೆ ತೀವ್ರ ಆರ್ಥಿಕ ಸಂಕಷ್ಠಕ್ಕೆ ಸಿಲುಕಿದ್ದಾರೆ. ಇವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ನರೇಗ ಯೋಜನೆಯಡಿ ಹೆಚ್ಚಿನ ಪ್ರಮಾಣದ ಉದ್ಯೋಗ ಅವಕಾಶ ಒದಗಿಸಬೇಕು ಎಂದು ಕೆ ಪಿ.ಸಿ.ಸಿ ವಕ್ತಾರರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ
ಬಿ.ಎನ್ ಚಂದ್ರಪ್ಪ ಆಗ್ರಹಿಸಿದರು.