ವಾರ್ತಾಇಲಾಖೆಯ ಆಡಳಿತಾಧಿಕಾರಿ ಎ.ಸಿ ತಿಪ್ಪೇಸ್ವಾಮಿಗೆ ಬೀಳ್ಕೊಡುಗೆ

6

ದಾವಣಗೆರೆ: ಸುಧೀರ್ಘ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಸೇವಾ ವಯೋನಿವೃತ್ತಿ ಹೊಂದಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಡಳಿತಾಧಿಕಾರಿ ಎ.ಸಿ. ತಿಪ್ಪೇಸ್ವಾಮಿ ಮತ್ತು ಅವರ ಧರ್ಮಪತ್ನಿ ಎನ್. ಪ್ರೇಮ ಅವರನ್ನು ಇಲಾಖೆ ಹಾಗೂ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಪತ್ರಿಕೆಗಳ ಸಂಪಾದಕರ ಸಂಘ ಸೇರಿದಂತೆ ಪತ್ರಕರ್ತರು ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್. ಹರ್ಷ, ಜಂಟಿ ನಿರ್ದೇಶಕ ಡಿ.ಪಿ. ಮುರಳೀಧರ, ಉಪ ನಿರ್ದೇಶಕ ಕೆ.ಪಿ. ಪುಟ್ಟಸ್ವಾಮಯ್ಯ, ಸಂಘದ ಅಧ್ಯಕ್ಷ ಚಲುವರಾಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಭೀಮರಾಯ ಹದ್ದಿನಾಳ, ಅನೂಪ್, ಶಿವಶಂಕರ್, ಚಂದ್ರಕಾAತ ಪಾಟೀಲ್, ಮಲ್ಲೇಶ್‌ನಾಯ್ಕ ನಾಯಕನಟ್ಟಿ, ಚನ್ನಬಸವ, ರಾಮಕೃಷ್ಣ, ಮಂಜುಳಾ ಕಿರಗಾವಲು ಸೇರಿದಂತೆ, ಪತ್ರಕರ್ತರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಾಲತೇಶ್ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!