ಬೆಂಕಿಯಿಂದ ಅರಣ್ಯ ರಕ್ಷಿಸಲು ಫೈರ್ ವಾಚರ್ – ಡಿಎಫ್ಒ ಜಗನ್ನಾಥ್

ದಾವಣಗೆರೆ : ಬೇಸಿಗೆಯಲ್ಲಿ ಬೆಂಕಿಯಿಂದ ರಕ್ಷಿಸುವುದು ಎಲ್ಲರ ಜವಾಬ್ದಾರಿ ಆಗಿದ್ದು, ಅರಣ್ಯ ರಕ್ಷಿಸುವುದಕ್ಕಾಗಿ ಫೈರ್ ವಾಚರ್ಗಳನ್ನು ನೇಮಕ ಮಾಡಲಾಗುವುದು ಎಂದು ಡಿಎಫ್ಒ ಜಗನ್ನಾಥ್ ಹೇಳಿದರು.
ಕೊಂಡಜ್ಜಿಯಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಸಲುವಾಗಿ ಅರಣ್ಯ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು. ಇನ್ನೇನೂ ಬೇಸಿಗೆ ಕಾಲ ಬರುತ್ತಿದ್ದು, ಈಗಿನಿಂದಲೇ ಸಿಬ್ಬಂದಿಗಳಿಗೆ ಟ್ರೈನಿಂಗ್ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ ನಮ್ಮೆಲ್ಲರ ಸ್ವತ್ತಾಗಿದ್ದು, ಅದನ್ನು ಕಾಪಾಡುವುದು ಇಲಾಖಾಧಿಕಾರಿಗಳ ಕರ್ತವ್ಯವಾಗಿದೆ ಎಂದರು. ಮೂರು ತಿಂಗಳುಗಳ ಕಾಲ ಇವರನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಲಾಗುವುದು. ದಿನಕ್ಕೆ 530 ರೂ.ವೇತನ ನೀಡಲಾಗುವುದು. ಕಾಡಿನಂಚಿನಲ್ಲಿರುವ ರೈತರು, ಮಕ್ಕಳು ಆಸಕ್ತಿ ಇರುವ ವ್ಯಕ್ತಿಗಳು ಬರಬಹುದು. ಇವರು ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದು. ಸ್ಥಳೀಯವಾಗಿ ಜಾಗತಿ ಮೂಡಿಸುವುದು ಇವರ ಕೆಲಸವಾಗುತ್ತದೆ. ಇದರಿಂದ ಅರಣ್ಯ ರಕ್ಷಣೆ ಮಾಡಬಹುದು ಎಂದರು. ಸುಮಾರು 850 ಕಿ.ಮೀ ಬೆಂಕಿ ತಡೆಗಟ್ಟುವ ಬೆಂಕಿ ರೇಖೆಗಳನ್ನು ಹಾಕವುದು, ಹಳೆ ಫೈರ್ ಲೈನ್ಗಳ ನಿರ್ವಹಣೆ ಸೇರಿದಂತೆ ಫೈರ್ ತಡೆಗಟ್ಟಲು ಅಗತ್ಯ ಸಾಮಾಗ್ರಿಗಳನ್ನು ಹೇಗೆ ಬಳಸಬೇಕೆಂದು ಹೇಳಿಕೊಡಲಾಗುತ್ತದೆ. ಇನ್ನು ನೆಲಬೆಂಕಿ, ಮೇಲ್ ಬೆಂಕಿ, ಮಾನವ ನಿರ್ಮಿತ ಬೆಂಕಿಗಳು ಕಾಡುಗಳಿಗೆ ಹತ್ತಿದ್ದು, ದಾವಣಗೆರೆಯಲ್ಲಿ ಸಾಮಾನ್ಯವಾಗಿ ನೆಲಬೆಂಕಿ ಹತ್ತಿಕೊಳ್ಳುತ್ತದೆ. ಅದನ್ನು ತಡೆಗಟ್ಟುವುದು ಸಿಬ್ಬಂದಿಗಳ ಕರ್ತವ್ಯ ಎಂದು ಡಿಎಫ್ಒ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಆರ್ಟಿಒ ಅಧಿಕಾರಿ ಶ್ರೀಧರ್ ಮಲ್ನಾಡ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಅರಣ್ಯಕ್ಕೆ ಬೆಂಕಿ ಬೀಳದಂತೆ ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಭಾಗಿತ್ವ ಅರಣ್ಯ ರಕ್ಷೃಣೆಗೆ ತುಂಬಾ ಅಗತ್ಯ. ಚಿಕ್ಕಮಗಳೂರಿನಲ್ಲಿದ್ದಾಗ ಬೇಸಿಗೆ ಕಾಲದಲ್ಲಿ ಚರಣ ಹೋಗಬೇಕಾದ ವೇಳೆ ಅರಣ್ಯಇಲಾಖೆ ಅಧಿಕಾರಿಗಳು ಕೈಗೆ ಸಿಗುತ್ತಲೇ ಇರಲಿಲ್ಲ. ಈ ಕಾರಣದಿಂದ ಕಾಡು, ಪ್ರಾಣಿಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಅವರಿಗೆ ಮಳೆ ಬಂದ್ರೆ ಸಾಕಷ್ಟು ಖುಷಿಯಾಗುತ್ತಿದ್ದರು. ಮಳೆ ಬಂದರೆ ಕಾಡ್ಗಿಚ್ಚು ಹತ್ತಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಳೆ ಬರಲಿ ಎಂದು ಅರಣ್ಯ ಸಿಬ್ಬಂದಿಗಳು ಹೇಳುತ್ತಿದ್ದರು ಎಂದರು,
ದಾವಣಗೆರೆ ವಲಯ ಅರಣ್ಯಾಧಿಕಾರಿ ದೇವರಾಜ್ ಮಾತನಾಡಿ, ಅರಣ್ಯಕ್ಕೆ ಬೆಂಕಿ ಬೀಳದಂತೆ ತಡೆಯಲು ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಫೈರ್ಲೈನ್ ಮಾಡಲಾಗಿದೆ ಮಾಡಿದೆ. ಜಾಗತಿಕ ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಅರಣ್ಯ ಪರಿಸರ ಸಂರಕ್ಷೃಣೆ ತುರ್ತು ಅಗತ್ಯವಾಗಿದೆ. ಅರಣ್ಯ ನಾಶದಿಂದಾಗಿ ಪ್ರಾಕೃತಿಕ ವಿಕೋಪ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿವೆ. ನೈಸರ್ಗಿಕ ಅರಣ್ಯ ಉಳಿವಿನಿಂದ ಜೀವ ಸಂತತಿ ಉಳಿಯಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಆರ್ ಎಫ್ ಓ ಶ್ರೀನಿವಾಸ, ಹೀದಾಯತ್, ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್.ರಾಘವೇಂದ್ರರಾವ್ ಇದ್ದರು. ಚಿಕ್ಕಮಗಳೂರಿನ ಒನ್ ಅರ್ಥ್ ಆರ್ಗನೈಜೇಶನ್ ಎಂಡಿ ಭರತ್ ಅರಣ್ಯವನ್ನು ಬೆಂಕಿಯಿಂದ ತಡೆಗಟ್ಟುವ ಬಗ್ಗೆ ಉಪನ್ಯಾಸ ನೀಡಲಾಯಿತು. ಅಗ್ನಿ ಶಾಮಕದಳದ ಸಂತೋಷ್ ಅರಣ್ಯವನ್ನು ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದರು. ವಲಯ ಅರಣ್ಯಾಧಿಕಾರಿ ಬಿ.ಟಿ.ಶ್ರೀನಿವಾಸ ವಂದನಾರ್ಪಣೆ ಮಾಡಿದರು.
ಪ್ರಾತ್ಯಕ್ಷಿಕೆ : ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಪ್ರಾತ್ಯಕ್ಷಿಕೆ ಕೊಂಡಜ್ಜಿಯಲ್ಲಿ ತೋರಿಸಲಾಯಿತು. ಅರಣ್ಯಕ್ಕೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದರೆ ಕೂಡಲೇ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಅಧಿಕಾರಿಗಳು ತಕ್ಷ ಣ ಸ್ಪಂದಿಸಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಕ್ರಮ ಕೆಗೊಳ್ಳುತ್ತಾರೆ. ಈಗಾಗಲೇ ಸ್ಥಳೀಯ ರೇಂಜ್ ಕಚೇರಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಈ ಕುರಿತು ಮಾರ್ಗದರ್ಶನ ನೀಡಲಾಗಿದೆ ಎಂದು ಡಿಎಫ್ಒ ಹೇಳಿದರು.