ಮಾಜಿ ಶಾಸಕರ ಸಲಹೆ,NSUI ಘಟಕದಿಂದ ಸಂಚಾರಿ ಅಲೆಮಾರಿ ಜನಾಂಗಕ್ಕೆ ಅನ್ನ ದಾಸೋಹ

ಹೊನ್ನಾಳಿ ದಾವಣಗೆರೆ: ಕೋವಿಡ್ -19 ಕೊರೋನಾ ವೈರಸ್ 2ನೇ ಅಲೆ ತಡೆಗೆ ಲಾಕ್ ಡೌನ್ ಆಗಿರುವ ಕಾರಣಕ್ಕೆ ಆಹಾರದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಹೊನ್ನಾಳಿ ಪಟ್ಟಣದ ದೇವನಾಯಕನಹಳ್ಳಿಯಲ್ಲಿ ವಾಸವಾಗಿರುವ ಮಹಾರಾಷ್ಟ್ರ ಮೂಲದ ಸಾಯಿ ಬಾಬಾ ಸಂಚಾರದ ಅಲೆಮಾರಿ ಸಮುದಾಯ ಮತ್ತು ಆಂಧ್ರ ಮೂಲದ ಮತ್ತೊಂದು ಅಲೆಮಾರಿ ಸಮುದಾಯಕ್ಕೆ NSUI ಮತ್ತು ಯುವ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರ ಸಲಹೆ ಮೇರಿಗೆ NSUI ರಾಜ್ಯ ವಕ್ತಾರ ದರ್ಶನ ಬಳ್ಳೇಶ್ವರ ನೇತೃತ್ವದಲ್ಲಿ, ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ,NSUI ಅಧ್ಯಕ್ಷ ಮನೋಜ್ ರವರ ಮುಂದಾಳತ್ವದಲ್ಲಿ NSUI ಉಪಾಧ್ಯಕ್ಷ ಶ್ರೀಧರ ಗೌಡ,ಅಣ್ಣಪ್ಪ ,ಸುಜಯ್ , ಪ್ರದೀಪ್ ಬಡ್ಡಿ, ವಿನಯ್ ಬಳ್ಳೇಶ್ವರ, ಅಭಿಷೇಕ್ , ಅಬ್ದುಲ್ ಗನಿ ಸೇರಿದಂತೆ ಹಲವಾರು ಸ್ನೇಹಿತರ ಸಹಕಾರ ಮತ್ತು ಕೆಲ ದಾನಿಗಳ ಸಹಾಯದಿಂದ *ಫಲಾವ್ ಮತ್ತು ಮೋಸರು ಬಜ್ಜೆ * ವಿತರಿಸಲಾಯಿತು.ಈ ಕಾರ್ಯ ಮೇ 24 ವರೆಗೆ ನಡೆಯಲಿದ್ದು, ಅದರಂತೆ ಪ್ರತಿದಿನ 200 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ಶುಚಿರುಚಿಯಾದ ಗಣಮಟ್ಟದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.