ಕೆ.ಎಲ್.ಹರೀಶ್ ಬಸಾಪುರ ನೇತೃತ್ವದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ರಚನೆ.

ದಾವಣಗೆರೆ: ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರ ಹಾಗೂ ಜಿಲ್ಲಾಧ್ಯಕ್ಷರಾದ ಎಚ್.ಬಿ. ಮಂಜಪ್ಪನವರ ಶಿಫಾರಸಿನಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅನುಮೋದನೆಯ ಮೇರೆಗೆ ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಬಿ.ಆರ್. ನಾಯ್ಡು ರವರು ಜಿಲ್ಲಾ ಸಾಮಾಜಿಕ ಜಾಲತಾಣದ ಸಮಿತಿಯನ್ನು ಆಯ್ಕೆ ಮಾಡಿರುತ್ತಾರೆ ಎಂದು ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಹನುಮಂತು, ಬಿ.ಎನ್. ರಂಗನಾಥಸ್ವಾಮಿ, ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಸಭಾ ಉಸ್ತುವಾರಿಗಳು ರಾಜು ಸಾದತ್, ಸುನಿಲ್ (ಜಗಳೂರು), ಬೊಮ್ಮಲಿಂಗಪ್ಪ (ಚನ್ನಗಿರಿ), ಬಸವರಾಜ್ ಮಾಳಗಿ (ಹರಿಹರ), ಮೊಹಮ್ಮದ್ ಜಿಕ್ರಿಯ (ದಾವಣಗೆರೆ ದಕ್ಷಿಣ), ರುದ್ರಮುನಿ (ಮಾಯಕೊಂಡ), ಅರುಣ್ ಡಿ ಈ (ದಾವಣಗೆರೆ ಉತ್ತರ) ಆಸಿಫ್ (ಹೊನ್ನಳ್ಳಿ), ಕಾರ್ಯದರ್ಶಿಗಳು ಹಾಗೂ ಬ್ಲಾಕ್ ಉಸ್ತುವಾರಿಗಳು ನಿರಂಜನ್ ಎಚ್.ಎಸ್. (ಜಗಳೂರು), ಮಲ್ಲಿಕಾರ್ಜುನ್ ವಂದಾಲಿ (ಬಿಳಿಚೋಡು ಅರಸೀಕೆರೆ), ಅವಿನಾಶ್ ಬಂದೊಳ್ (ಚನ್ನಗಿರಿ), ಬಬಾಜನ್ (ಸಂತೆಬೆನ್ನೂರು), ಗುರು ಪಾಟೀಲ್ (ಹರಿಹರ), ದರ್ಶನ್ ಕಂಸಾಗರ (ಮಲೆಬೆನ್ನೂರು), ವೀರಭದ್ರಪ್ಪ (ದಾವಣಗೆರೆ ದಕ್ಷಿಣ ಗ್ರಾಮಾಂತರ), ರೆಹಮತ್ (ದಾವಣಗೆರೆ ದಕ್ಷಿಣ ನಗರ), ಪರಶುರಾಮ್ ಕೆ.ಟಿ (ಮಾಯಕೊಂಡ), ಹಾಲೇಶ್ ಅರ್ (ಬಸವಪಟ್ಟಣ), ಹರೀಶ್ ಎನ್( ದಾವಣಗೆರೆ ಉತ್ತರ ಗ್ರಾಮಾಂತರ), ಕೆ.ಸಿ. ರೋಹಿತ್ (ದಾವಣಗೆರೆ ಉತ್ತರ ನಗರ), ನಾಗರಾಜ್ ಬಿ (ಹೊನ್ನಳ್ಳಿ), ತುಷಾರ್ ಗೌಡ (ನ್ಯಾಮತಿ).
ನೂತನ ಸಮಿತಿಯ ಉಸ್ತುವಾರಿಗಳು ತಮಗೆ ನೀಡಿದ ಕೆಲಸವನ್ನು ತಮಗೆ ಸಂಬಂಧಪಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿಯ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ತಿಳಿಸಿದರು.