ಇಂದು ಉಚಿತ ನೇತ್ರ ತಪಾಸಣಾ ಶಿಬಿರ

ದಾವಣಗೆರೆ: ತಂಜೀಮುಲ್-ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಇವರ ವತಿಯಿಂದ ಜ.೩೦ರ ಇಂದು ಬೆಳಿಗ್ಗೆ ೧೦ರಿಂದ ಇಲ್ಲಿನ ಜೆ. ಇಮಾಂ ನಗರದಲ್ಲಿರುವ ನೂರಾನಿ ಶಾದಿಮಹಲ್ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಸಂಸ್ಥೆಯ ಅಧ್ಯಕ್ಷ ಶೇಖ್ ದಾದಾಪೀರ್ ಸಾಹೇಬ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಶಿಬಿರದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಲೋಕೇಶ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ನಾಗರಾಜ್, ಆಜಾದ್ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಮುಖ್ಯ ಕಾನೂನು ನೆರವು ಅಭಿರಕ್ಷಕ ಶೌಕತ್ ಅಲಿ, ವೃತ್ತ ಪೊಲೀಸ್ ನಿರೀಕ್ಷಕ ಗಜೇಂದ್ರಪ್ಪ, ಕ್ಯಾನ್ಸರ್ ತಜ್ಞವೈದ್ಯ ಇಬ್ರಾಹೀಂ ನಾಗನೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಹನವಾಜ್ ಖಾನ್ ತಿಳಿಸಿದ್ದಾರೆ