ನಾಳೆಯಿಂದ ದೇಶದಲ್ಲೆ ಮೊದಲ ಖಾಸಗಿ ಲಸಿಕೆಗೆ ಚಾಲನೆ: ದಾವಣಗೆರೆ ಧಣಿಗಳಿಂದ ಸ್ವಂತ ವೆಚ್ಚದಲ್ಲಿ ಉಚಿತ ಕೊವಿಡ್ ಲಸಿಕೆ

ದಾವಣಗೆರೆ: ಕೋವಿಡ್ ಎರಡನೇ ಅಲೆಯಿಂದ ಸಾಕಷ್ಟು ಜನರಿಗೆ ಲಸಿಕೆ ಸಿಗದ ಕಾರಣ ಉಚಿತವಾಗಿ ಲಸಿಕೆ ನೀಡುವುದಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಶಾಸಕರಾದ ಡಾ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವರ ಎಸ್ ಎಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಗೆ ನೀಡುವ ಲಸಿಕೆಯಲ್ಲಿ ನಾನು ಅರ್ಧದಷ್ಟು ಹಣ ಪಾವತಿಸುವುದಾಗಿ ಮನವಿ ಮಾಡಿದ್ದೆವು ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರ ವಿಫಲವಾಗಿದೆ.
ನಾವೇ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಲಸಿಕೆ ವಿತರಿಸುವ ಕಾರ್ಯಕ್ರಮ ಆರಂಭಿಸಿದ್ದೇವೆ ನಾಳೆ ನಗರ ದೇವತೆ ದುಗ್ಗಮ್ಮನ ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ಆರಂಭಿಸುತ್ತಿದ್ದೇವೆ ಶೀಘ್ರವೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಲಸಿಕೆ ಕಾರ್ಯಕ್ರಮ ಆರಂಭಿಸುತ್ತೇವೆ
ಕ್ಷೇತ್ರದ ಜನರಿಗೆ ಕೊಟ್ಟಮಾತಿನಂತೆ ಉಚಿತ ಲಸಿಕೆ ನೀಡಲಾಗುವುದು ಈಗಾಗಲೇ 10 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. 50 ಸಾವಿರ ಡೋಸ್ ಲಸಿಕೆ ಕೆಲವೇ ದಿನಗಳಲ್ಲಿ ಬರಲಿದೆ. 60 ಸಾವಿರ ಲಸಿಕೆಗೆ ರೂ. 4ಕೋಟಿಗೂ ಹೆಚ್ಚು ಹಣ ಪಾವತಿಸಿದ್ದೇವೆ.
-ಎಸ್ ಎಸ್ ಮಲ್ಲಿಕಾರ್ಜುನ, ಮಾಜಿ ಸಚಿವ
ಪಕ್ಷಭೇದ ಮರೆತು ಎಲ್ಲರಿಗೂ ಲಸಿಕೆ ನೀಡಲಾಗುವುದು ಎಷ್ಟೇ ಲಸಿಕೆ ಅಗತ್ಯ ಬಂದರೂ, ಲಭ್ಯತೆಯ ಮೇರೆಗೆ ಪೂರೈಸಲು ಸಿದ್ಧವಿದ್ದೇವೆ ರಾಜ್ಯದಲ್ಲಿ ಮೊದಲ ಹಾಗೂ ಮಾದರಿ ಪ್ರಯತ್ನ ಇದಾಗಿದೆ ಇದೇ ಮಾದರಿಯಲ್ಲಿ ಎಲ್ಲರೂ ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಮುಂದೆ ಬರಬೇಕು ಎಂದು ತಿಳಿಸಿದರು