ಮತಕ್ಕಾಗಿ ಗಣೇಶ‌ ಪೆಂಡೆಂಟ್ ಹಂಚುತ್ತಿದ್ದ ವ್ಯಕ್ತಿಯನ್ನ ಪೊಲಿಸರಿಗೆ ಒಪ್ಪಿಸಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು.!

images - 2022-05-20T112356.159

ದಾವಣಗೆರೆ : ಮತ ಹಾಕುವುದಕ್ಕಾಗಿ ಬೆಳ್ಳಿ ಗಣೇಶನ ಪೆಂಡೆಂಟ್ ಹಂಚುತ್ತಿದ್ದ  DAVANAGERE CORPORATION WARD ELECTION  ಕೆ ಆರ್ ಎಸ್ KRS PARTY ಪಕ್ಷದ ಕಾರ್ಯಕರ್ತರು GANESHA PENDENT ಧಾಖಲೆ ಸಮೇತ ಹಿಡಿದು ಪೊಲೀಸ್ POLICE ವಶಕ್ಕೆ ಒಪ್ಪಿಸಿರುವ ಘಟನೆ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಚುನಾವಣೆ ನಡೆಯುತ್ತಿದ್ದು ಮತದಾರರಿಗೆ ವಿವಿಧ ರೀತಿಯ ಆಮಿಷ ಗಳನ್ನು ಒಡ್ಡಿ ಅನೀತಿಯ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಕೆ ಆರ್ ಎಸ್ ಪಕ್ಷ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವಿಡಿಯೋ ಹರಿಬಿಟ್ಟಿದೆ.
ಜೆಸಿಬಿ ಪಕ್ಷಗಳು ಅನೈತಿಕ ರಾಜಕಾರಣ ಮಾಡುತ್ತಿವೆ. ಹಣ, ಹೆಂಡ, ಬೆಳ್ಳಿ ಗಣಪತಿ ಹಂಚುವ ಮೂಲಕ ಅನ್ಯಾಯ ಮಾರ್ಗಗಳನ್ನು ಅನುಸರಿಸುತ್ತಿವೆ. ಹೀಗೆ ಅನೀತಿ ರಾಜಕಾರಣ ಮಾಡುವ ಬದಲಿಗೆ ನೀವೇ ರಾಜ್ಯ, ಜಿಲ್ಲೆಯ ಚುಕ್ಕಾಣಿ ಹಿಡಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಸಮಯದಲ್ಲಿ ಇಷ್ಟೆಲ್ಲಾ ಅನೀತಿ ನಡೆಯುತ್ತಿದ್ದರು ಚುನಾವಣಾಧಿಕಾರಿ, ಉಪ ಚುನಾವಣೆ ಅಧಿಕಾರಿ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿ ಖುದ್ದಾಗಿ ತನಗೆ ಬೆಳ್ಳಿ ಗಣಪನ ಪೆಂಡೆಂಟ್ ಹಂಚಲು 50 ಸಾವಿರ ರೂ. ನೀಡಲಾಗಿದೆ ಎಂದು ಹೇಳಿದ್ದಾರೆ.

ಇಷ್ಟೆಲ್ಲಾ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಲು ದೂರು ನೀಡಲು ಕರೆ ಮಾಡಿದರೆ ಯಾವೊಬ್ಬ ಅಧಿಕಾರಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲ. ಈ ರೀತಿ ಅನ್ಯಾಯ ಮಾರ್ಗದಲ್ಲಿ ಚುನಾವಣೆ ನಡೆಸಲು ಬಿಟ್ಟಿದ್ದ್ಯಾಕ್ಕೆ? ಜಿಲ್ಲಾಧಿಕಾರಿಗಳು ಚೆನ್ನಾಗಿ ಇದ್ದಿದ್ದರೆ ಸಮಾಜ ಯಾಕೆ ಈ ರೀತಿ ಇರುತ್ತಿತ್ತು. ಜಿಲ್ಲಾಧಿಕಾರಿಗಳ ವೈಫಲ್ಯವೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!