“ ಆತಂಕ ಪಡಬೇಡಿ, ಲಸಿಕೆ ಪಡೆಯಿರಿ, ಆರೋಗ್ಯದಿಂದಿರಿ”- ಖಾಸಗಿ ಪಿಯು ಕಾಲೇಜಿನ ಸಂಘದವರಿಗೆ ಉಚಿತ ಲಸಿಕಾ ಶಿಬಿರದಲ್ಲಿ ಡಾ. ಎಸ್.ಎಸ್

ದಾವಣಗೆರೆ: ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕಾ ಅಭಿಯಾನ ನಡೆಯುತ್ತಿರುವ ಈ ಸಮಯದಲ್ಲಿ ದಾವಣಗೆರೆ ನಗರದ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದವರು ಉಚಿತ ಕೋವಿಡ್ ಲಸಿಕೆ ಒದಗಿಸಿಕೊಡುವಂತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಹಾಗೂ ಸಂಘದ ಮಹಾಪೋಷಕರಾದ ಶ್ರೀಯುತ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಶಾಸಕರು ಹಾಗೂ ಸಂಘದ ಗೌರವಾಧ್ಯಕ್ಷರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಇವರುಗಳಲ್ಲಿ ಕೋರಿಕೆಯೊಂದನ್ನು ಸಲ್ಲಿಸಿದ್ಧರು.ಅದಕ್ಕೆ ಸಹಮತ ಸೂಚಿಸಿˌ ಉದಾರ ಮನಸ್ಸಿನಿಂದ ಆಡಳಿತ ಮಂಡಳಿಯ ಸದಸ್ಯರುˌ ಕಾಲೇಜು ಸಿಬ್ಬಂದಿಗಳಿಗೆ ಅಲ್ಲದೇ ಅವರುಗಳ ಕುಟುಂಬದವರಿಗೂ ಕೂಡಾ ಉಚಿತ ಕೋವಿಡ್ ಲಸಿಕೆಯನ್ನು ಹಾಕಿಸುವ ಸದವಕಾಶವನ್ನು ಸನ್ಮಾನ್ಯರು ಒದಗಿಸಿಕೊಟ್ಟರು.
ಈ ನಿಟ್ಟಿನಲ್ಲಿ 04-07-2021 ರ ಶನಿವಾರದಂದು ಸಂಘದ ಕಛೇರಿಯಾದ ನಗರದ ದವನ್-ನೂತನ ಕಾಲೇಜು ಆವರಣದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಈ ಲಸಿಕಾ ಕಾರ್ಯಕ್ರಮಕ್ಕೆ ಶ್ರೀಯುತ ಡಾ. ಶಾಮನೂರು ಶಿವಶಂಕರಪ್ಪನವರು ಆಗಮಿಸಿ ಸರ್ವರಿಗೂ ಲಸಿಕೆ ಸಿಗುವುದು, ಆತಂಕ ಪಡಬೇಡಿ ಆರೋಗ್ಯವಾಗಿರಿ ಎಂದು ಆಶಿಸಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕೋವಿಡ್ ಲಸಿಕಾ ಕಾರ್ಯದಲ್ಲಿ ಎಸ್ ಎಸ್ ಆಸ್ಪತ್ರೆಯ ವೈದ್ಯರುˌ ಶುಶ್ರೂಷಕರು ಸಂಪೂರ್ಣ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಎನ್ ಪರಶುರಾಮನಗೌಡ್ರು, ಪ್ರಾಂಶುಪಾಲರಾದ ಪ್ರೋ. ಎಸ್ ಹಾಲಪ್ಪನವರು, ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಜಯಂತ್ (ಸಿದ್ಧಗಂಗಾ ಪಿಯು ಕಾಲೇಜು)ˌ ಜಂಟಿ ಕಾರ್ಯದರ್ಶಿಗಳಾದ ಶ್ರೀಯುತ ವೀರೇಶ್ ಪಾಟೀಲ್(ದವನ್ ಪಿಯು ಕಾಲೇಜು)ˌ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ವೈ ವಿ ವಿನಯ್ (ಸೈನ್ಸ್ ಅಕಾಡೆಮಿ ಪಿಯು ಕಾಲೇಜು)ˌ ಖಜಾಂಚಿಗಳಾದ ಶ್ರೀಯುತ ಮಂಜಪ್ಪ(ಸಿದ್ಧೇಶ್ವರ ಪಿಯು ಕಾಲೇಜು)ˌ ನಿರ್ದೇಶಕರುಗಳಾದ ಡಾ. ತಿಮ್ಮಾರೆಡ್ಡಿ, ಶ್ರೀಯುತ ಪ್ರಶಾಂತ್ ಎನ್ ಸಿ (ಸರ್ ಸಿ ವಿ ರಾಮನ್ ಪಿಯು ಕಾಲೇಜು), ಶ್ರೀ ವಿಜಯ್ ಕುಮಾರ್ (ಎಮ್ ಎಸ್ ಪಿಯು ಕಾಲೇಜು), ಹರ್ಷರಾಜ್ ಎ ಗುಜ್ಜರ್ (ದವನ್ ಪಿಯು ಕಾಲೇಜು ) ಶ್ರೀ ಪ್ರಸಾದ್ ಬಂಗೇರಾ (ಮಾಗನೂರು ಬಸಪ್ಪ ಪಿಯು ಕಾಲೇಜು) ಹಾಗೂ ಎಲ್ಲಾ ಪದಾಧಿಕಾರಿಗಳೂ ಉಪಸ್ಥಿತರಿದ್ದರು.
ಕಾಲೇಜು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರೆಲ್ಲಾ ಸೇರಿ ಒಟ್ಟು 400 ಜನ ಬಂದು ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.