ಜಿ.ಎಂ.ಐ.ಟಿ ಕಾಲೇಜಿನಲ್ಲಿ ಇ & ಸಿ ವಿಭಾಗದಲ್ಲಿ ‘ವಿಜಾನಿಕ್ಸ್ ಫೋರಂ’ ಉದ್ಘಾಟನೆ

ದಾವಣಗೆರೆ: ಇಲ್ಲಿನ ಜಿ.ಎಂ.ಐ.ಟಿ ಕಾಲೇಜಿನಲ್ಲಿಂದು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ವಿಜಾನಿಕ್ಸ್ ಫೋರಂ ನ ಉದ್ಘಾಟನಾ ಸಮಾರಂಭ ಜರುಗಿತು.
3 ನೇ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ವಿಭಾಗಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡರು. ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳ ಮೂಲಕ ಗಮನ ಸೆಳೆದಿದ್ದು, ಹಲವು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳ ಮೂಲಕ ಕಂಗೊಳಿಸುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ ಅವರು ಮಾತನಾಡಿ, ಈ ಫೋರಂ ಅಡಿಯಲ್ಲಿ ಆಯೋಜಿಸುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಮತ್ತು ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯತೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಾಬಲ್ಯಗೊಳ್ಳಬೇಕು ಮತ್ತು ಕಂಪನಿಗಳ ಸಂದರ್ಶನಕ್ಕೆ ಬೇಕಾದ ನೈಪುಣ್ಯತೆಯನ್ನು ಈಗಿನಿಂದಲೇ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ವಿಭಾಗದ ಮುಖ್ಯಸ್ಥರು ಹಾಗು ಫೋರಂ ಛೇರ್ಮನ್ ಆದ ಡಾ. ಪ್ರವೀಣ್ ಜೆ, ಫೋರಂನ ಸಂಯೋಜಕರಾದ ವಿಕಾಸ್ ಸಿ.ವೈ. ಅಕ್ಷತಾ ಚೌಹಾನ್, ಶರಣ ಬಸವೇಶ್ವರ ಹೆಚ್.ಬಿ., ವಿದ್ಯಾರ್ಥಿ ಫೋರಂ ಪ್ರತಿನಿಧಿಗಳಾದ ನೂತನ ಎಂ. ನಟರಾಜ್ ಎ.ವಿ. ನಿತಿನ್ ಪಿ.,ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.