ಜಿಎಂಎಸ್ ಅಕ್ಯಾಡೆಮಿ: ಐಐಟಿ ರೂರ್ಕೇ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಕಾರ್ಯಕ್ರಮ

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂಎಸ್ ಅಕ್ಯಾಡೆಮಿ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್ ವತಿಯಿಂದ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಕೌಶಲ್ಯತೆ ಗಳು ಮತ್ತು ಸಂದರ್ಶನ ಪ್ರಕ್ರಿಯೆಗಳ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಕಾರ್ಯಕ್ರಮವನ್ನು ಐಐಟಿ ರೂರ್ಕೇ ಸಹಯೋಗದಲ್ಲಿ ಆಯೋಜಿಸಲಾಗಿತ್ತು ಎಂದು ಪ್ರಾಂಶುಪಾಲರಾದ ಶ್ವೇತ ಮರಿಗೌಡರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸ್ವಭಾವ ಮತ್ತು ನಡತೆ ಉತ್ತಮವಾಗಿದ್ದಲ್ಲಿ ಏನನ್ನಾದರೂ ಸಾಧಿಸಬಹುದೆಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ತರಬೇತುದಾರರಾದ ಶ್ರೀಮತಿ ಮನಿಷಾ ಬೆಲಾನಿ ಆಗಮಿಸಿದ್ದರು.
ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿಆರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಂಡು ಸಂದರ್ಶನ ಪ್ರಕ್ರಿಯೆಯನ್ನು ಧೈರ್ಯವಾಗಿ ಎದುರಿಸುವ ಕಲೆಯನ್ನು ಮತ್ತು ಜ್ಞಾನವನ್ನು ಈಗಿನಿಂದಲೇ ಸಂಪಾದಿಸಬೇಕೆಂದು ಕರೆಕೊಟ್ಟರು.
ಪ್ರಾರ್ಥನೆಯನ್ನು ಕುಮಾರಿ ಪ್ರಿಯ ಆರ್ ವಿ ಮತ್ತು ಸಿಂಚನ ಟಿ ಆರ್, ಸ್ವಾಗತ ಭಾಷಣವನ್ನು ಕುಮಾರಿ ಕವಿತಾ, ವಂದನಾರ್ಪಣೆಯನ್ನು ಹರ್ಷ ಕುಮಾರಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸೌಜನ್ಯ ಕೆಎಂ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹ ಆಡಳಿತಗಾರರಾದ ಶ್ರೀ ಶಿವಕುಮಾರ್ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಕೋರಿದರು, ಪ್ರಾಂಶುಪಾಲರಾದ ಶ್ವೇತ ಮರಿಗೌಡರ್, ತೇಜಸ್ವಿ ಕಟ್ಟಿಮನಿ ಟಿ ಆರ್, ಸಂಪನ್ಮೂಲ ವ್ಯಕ್ತಿಯಾಗಿ ಮನಿಷಾ ಬೆಲಾನಿ, ವಿಭಾಗದ ಮುಖ್ಯಸ್ಥರ ಗಳು, ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.