‘ಪ್ರಕಾಶ್ ಎ ವೈ’ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿದ ಸರ್ಕಾರ

ದಾವಣಗೆರೆ: ದಾವಣಗೆರೆಯ ಪ್ರಕಾಶ್ ಎ ವೈ ಇವರನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯ 1987 ರ ಕಲಂ 3(3)(ಎ) ರನ್ವಯ ಹಾಗೂ 3(4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 03 ವರ್ಷದ ಅವಧಿಯವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ, ಯಾವುದು ಮೊದಲೋ ಅಲ್ಲಿಯವರೆಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ಪ್ರಕಾಶ್ ಮಾಜಿ ಮೇಯರ್ ಹಾಗೂ ಹಾಲಿ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಪತಿಯಾಗದ್ದಾರೆ. ಪ್ರಕಾಶ್ ಹಾಗೂ ಉಮಾ ಬಿಜೆಪಿಯ ಕಟ್ಟಾಳುಗಳಾಗಿದ್ದರು.
ದಾವಣಗೆರೆ ಮಹಾನಗರಪಾಲಿಕೆಯ 2019 ರಲ್ಲಿ ನಡೆದ ಚುನಾವಣೆಯಲ್ಲಿ 32 ನೇ ವಾರ್ಡ ನಿಂದ ಬಿಜೆಪಿಯಿಂದ ಸ್ಫರ್ದೆ ಮಾಡದೆ, ಉಮಾ ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು ನಂತರ ಪುನಃ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.