ಗ್ರಾಮ ಪಂಚಾಯತಿಯಿಂದ ಗ್ರಾಮದ ಮನೆ ಮನೆಗೆ ಸ್ಯಾನಿಟೈಸರ್ ಸಿಂಪಡರಣೆ – ಗ್ರಾಮಸ್ಥರಿಂದ ಶ್ಲಾಘನೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಆಲೂರು ಮತ್ತು ಮಲ್ಲಾಪುರ ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಇಂದು ಆಲೂರು ಗ್ರಾಮ ಪಂಚಾಯತಿಯಿಂದ ಕರೋನ ವೈರಸ್ ಎರಡನೆಯ ಅಲೆಯ ವಿರುದ್ದ ಗ್ರಾಮದ ಪ್ರತಿಯೊಂದು ಮನೆಯ ಮುಂದೆ ಹಾಗೂ ರಸ್ತೆ ಚರಂಡಿಗಳಿಗೆ ಸಾನಿಟೈಜರ್ ಸಿಂಪಡಣೆ ಮಾಡಲಾಯಿತು. ಗ್ರಾಮ ಪಂಚಾಯತಿ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘಿಸಿದರು. ಈ ಸಂದರ್ಬದಲ್ಲಿ ಅಧ್ಯಕ್ಷರಾದ ನಾಗಮ್ಮ ಜೆ.ಸಿ.ಮಂಜುನಾಥ್. ಉಪಾಧ್ಯಕ್ಷರಾದ ಕರಿಬಸಪ್ಪ. ಪಿ.ಡಿ.ಓ. ಎಸ್.ಬಿ.ಲಿಂಗಣ್ಣ.ಗ್ರಾ.ಪಂ. ಸದಸ್ಯರಾದ ನಾಗರಾಜ.ಎ.ಸಿ. ಬಸವರಾಜ ಡಿ.ಜಿ. ಸಿದ್ದೇಶ್ ಕೆ.ಎಸ್. ಬಸವರಾಜ.ಡಿ. ಬಿಲ್ ಕಲೆಕ್ಟರ್ ಪುನೀತ್ ಎಲ್. ಗ್ರಾಮಸ್ಥರಾದ ಗೌಡ್ರು ಮಂಜಪ್ಪ. ಮಂಜಣ್ಣ. ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.