ಜ್ಞಾನಕ್ಕೆ ಓದಿನ ಹಸಿವಿರಲಿ- ಪ್ರೊ. ಬಾಬು

ಓದಿನ ಹಸಿವು ಇದ್ದರೆ ಜ್ಞಾನ ಸಂಪಾದಿಸಲು ಸಾಧ್ಯ ನಿರಂತರ ಓದಿನಿಂದ ವಿದ್ಯಾರ್ಥಿಗಳು ಜ್ಞಾನ ಪಡೆದು ಜ್ಞಾನಿ ಗಳಾಗಿ ಜೀವಿಸಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ವೆಂಕಟೇಶ್ ಬಾಬು ಅವರು ಹೇಳಿದರು. ಅವರು ಇಂದು ನಗರದ ಸಮೃದ್ಧಿ ಕೆರಿಯರ್ ಅಕಾಡಮಿಯಲ್ಲಿ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಆಸಕ್ತಿ ಕಡೆ ಗಮನವಹಿಸಬೆಕು. ಓದುವ ವಯಸ್ಸಿನಲ್ಲಿ ಚೆನ್ನಾಗಿ ಓದಿಕೊಂಡರೆ ಮುಂದೆ ಏನಾದ್ರೂ ಸಾಧನೆ ಮಾಡಲು ಸಾಧ್ಯ ಈ ಹಂತದಲ್ಲೇ ವಿದ್ಯಾರ್ಥಿಗಳು ಇತರೆ ಆಸಕ್ತಿಗಳ ಕಡೆ ಗಮನ ಹರಿಸಿದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿರುತ್ತದೆ ಆದರೆ ಅವಕಾಶಗಳು ಬಂದಾಗ ಅದಕ್ಕೆ ಬೇಕಾದ ಕೌಶಲಗಳನ್ನು ಬಳಸಿಕೊಂಡು ಅದನ್ನು ಆಲಂಗಿಸಿಕೊಂಡು ಅದರಲ್ಲಿ ಸಾಧನೆ ಮಾಡುವಂತೆ ಯೊಚಿಸಬೇಕೆ ಹೊರತು ಅವಕಾಶ ಸಿಗಲಿಲ್ಲವೆಂದು ಕೊರಗಬಾರದು ಎಂದು ಹೇಳಿದರು. ನಿರಂತರವಾಗಿ ಓದಿದರೆ ಎಲ್ಲರಿಗೂ ಅವಕಾಶ ಸಿಗುತ್ತದೆ .
ಅಂಬೇಡ್ಕರ್ ಅಬ್ದುಲ್ ಕಲಾಂ ವಿವೇಕಾನಂದ ಕುವೆಂಪುರವರನ್ನು ನಾವು ಇಂದಿಗೂ ನೆನೆಸಿಕೊಳ್ಳುವುದು ಅವರಲ್ಲಿರುವ ಜ್ಞಾನಕ್ಕೆ . ಜ್ಞಾನಕ್ಕೆ ಎಂದಿಗೂ ಬೆಲೆ ಇದ್ದೇ ಇರತ್ತೆ ಹಾಗೂ ಅದರಿಂದ ಮನುಷ್ಯನಿಗೆ ಗೌರವ ಸಿಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಕೂಡ ಜ್ಞಾನಿಗಳಾಗಿ ತಮ್ಮ ಹೆತ್ತವರಿಗೂ ಸಮಾಜಕ್ಕೂ ಒಳ್ಳೆಯ ಹೆಸರನ್ನು ತಂದುಕೊಡುವಲ್ಲಿ ಯೊಚಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಉಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ಸಾಧಿಸಬೇಕು ಅವರ ಮಾರ್ಗದರ್ಶನದಂತೆ ನಡೆದು ಕೊಳ್ಳಬೇಕೆಂದು ಹೇಳಿದರು .
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ವೇತಾ ವಸಂತ ಕುಮಾರಿ ಮತ್ತಿತರರು ಭಾಗವಹಿಸಿದ್ದರು . ಕಾರ್ಯಕ್ರಮವನ್ನು ಕುಮಾರಿ ಸಹನಾ ನಿರೂಪಿಸಿದರೆ ವರ್ಷಿಣಿ ವಂದಿಸಿದರು . ಸಂಸ್ಥೆಯ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.