Matka: ಇಲ್ಲಿ ಮಟ್ಕಾ ದಂಧೆ (ಓಸಿ) ಬಲು ಜೋರು.! ಒಂದು‌ ಕಿಮೀ ದೂರದಲ್ಲಿ ಪೊಲೀಸ್ ಠಾಣೆ

Haveri Davanagere border matka dande

Exclusive Matka (OC) Part 1

ದಾವಣಗೆರೆ: ರಾಜ್ಯದ ಗೃಹ ಮಂತ್ರಿ ತವರು ಜಿಲ್ಲೆಯಾದ ಹಾವೇರಿ ಜಿಲ್ಲೆಯಲ್ಲಿ ಅನೇಕ ಕಡೆ ಹಲವು ದಿನಗಳಿಂದ ಎಗ್ಗಿಲ್ಲದೇ ಮಟ್ಕಾದಂಧೆ  (ಒಸಿ) ಜೋರಾಗಿ ನಡೆಯುತ್ತಿದ್ದರೂ, ಅಕ್ರಮ ಚಟುವಟಿಕೆ ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆ ಮಾತ್ರ ಮೌನ ವಹಿಸಿದೆ! ಇನ್ನೂ ಈ ದಂಧೆ ನಡೆಯುವ ಸ್ಥಳದಿಂದ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ ಹಾಗೂ ರಾಣೆಬೆನ್ನೂರು ಶಾಸಕರ ಮನೆ ಇದ್ದರೂ ಏನೂ ಪ್ರಯೋಜನವಿಲ್ಲ.

ಈಗಷ್ಟೆ ರಾಜ್ಯದಲ್ಲಿ ಕೊವಿಡ್ ಅನ್ ಲಾಕ್ ಘೋಷಣೆಯಾಗಿದ್ದು, ದುಡಿಯಲು ಹೋಗಬೇಕಾದ ಕೆಲವು ಕಾರ್ಮಿಕರು ಮಟ್ಕಾ ಅಟದಿಂದ ತಮ್ಮಲ್ಲಿರುವ ಹಣವನ್ನ ಕಳೆದುಕೊಂಡು ಕುಟುಂಬಸ್ಥರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುತ್ತಿದ್ದಾರೆ. ಇನ್ನೂ ಕೆಲವರು ಪತ್ನಿ ದುಡಿದ ಹಣದಿಂದ ಮಟ್ಕಾ ಅಟವಾಡಿ ಹಣ ಕಳೆಯುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗಡಿಭಾಗವಾದ  ತುಂಗಭದ್ರಾ ನದಿ ಪಕ್ಕದ‌ ಕೊಡಿಯಾಲ ಹೊಸಪೇಟೆ ಬಳಿಯ ಇಟ್ಟಿಗೆ ಬಟ್ಟಿಗಳ ಸಮೀಪದಲ್ಲಿ ಮಟ್ಕಾ ದಂಧೆಕರೋರರು ಜಾತ್ರೆಯ ಸ್ವರೂಪದಲ್ಲಿ ಮಟ್ಕಾ ಬರೆಯುತ್ತಿರುವುದು ಕಂಡು ಬಂದಿದ್ದು, ಆ ಸ್ಥಳದಿಂದ ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮಟ್ಕಾ ಆಡುತ್ತಿದ್ದರೂ ಇದನ್ನು ಸದೆ ಬಡಿಯಬೇಕಾದ ಪೊಲೀಸರು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ.

ಹರಿಹರ ಹಾಗೂ ರಾಣೆಬೆನ್ನೂರು ಗಡಿಭಾಗವಾದ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ  ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗ ಜಾತ್ರೆಯ ಮಾದರಿಯಲ್ಲಿ ಮಟ್ಕಾ ಬರೆಯುವವರ ಹಾಗೂ ಆಡುವವರ ಸಂಖ್ಯೆ ಹೆಚ್ಚುತ್ತಿದೆ. ಕೂಲಿ ಕೆಲಸ ಮಾಡಿದ್ದ ಹಣದಲ್ಲಿ ಇಲ್ಲಿಗೆ ಬಂದು ದುಡಿದ ಹಣವನ್ನೆಲ್ಲಾ ಜನರು ಕಳೆದುಕೊಳ್ಳುತ್ತಿದ್ದಾರೆ.

ಒಮ್ಮೆ ಕಟ್ಟಿದ ಹಣಕ್ಕೆ ದುಪ್ಪಟ್ಟು ಬಂದರೆ ಸಾಕು ಓಸಿಗೆ ದಾಸರಾಗುತ್ತಿರುವ ಅನಕ್ಷರಸ್ಥರು ಒಂದೆಡೆಯಾದರೆ, ಇಂತಹ ಜನರನ್ನೇ ಖೆಡ್ಡಾಕ್ಕೆ ತಳ್ಳಿ ಇದನ್ನೇ ಲಾಭವಾಗಿ ಪಡೆದುಕೊಳ್ಳುತ್ತಿರುವವರಿಗೇನೂ ಕಡಿಮೆಯಿಲ್ಲ. ಬೆಳಗ್ಗೆಯಿಂದ ಪ್ರಾರಂಭವಾಗುವ ಈ ದಂಧೆ ರಾತ್ರಿಯವರೆಗೂ ನಡೆಯುತ್ತಿರುತ್ತೆ, ಇನ್ನೂ ಮಧ್ಯಾಹ್ನದ ವೇಳೆಯಲ್ಲಿ ಜಾತ್ರೆಯ ಸನ್ನಿವೇಶದ ರಿತೀಯಲ್ಲಿ ಮಟ್ಕಾ ಚೀಟಿ ಬರೆಸಲು ಜನ ಬರ್ತಾರೆ. ದಾವಣಗೆರೆ ಜಿಲ್ಲೆಯ ಜನರು ಕೂಡ ಈ ಪ್ರದೇಶಕ್ಕೆ ಬಂದು ಓಸಿ ಚೀಟಿ ಬರೆಸ್ತಾರೆ.

ಹಾವೇರಿ ಜಿಲ್ಲೆ ಕೂಡ ಪೂರ್ವ ವಲಯ ಐಜಿಪಿ ವ್ಯಾಪ್ತಿಗೆ ಬರುತ್ತದೆ, ಇತ್ತಿಚೇಗೆ ದಾವಣಗೆರೆಯಲ್ಲಿ ಐಜಿಪಿ ತಂಡದವರು ಗಣಿಗಾರಿಕೆಯಲ್ಲಿ ಬಳಸುವ ಅಕ್ರಮ ಸ್ಫೊಟಕ ವಸ್ತುಗಳ ಸಾಗಾಟವನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಪೂರ್ವ ವಲಯ ಐಜಿಪಿ ತಂಡಕ್ಕೆ ಪಕ್ಕದ ಜಿಲ್ಲೆಯಲ್ಲಿ ಅದೂ ಹರಿಹರ ರಾಣೆಬೆನ್ನೂರು ಗಡಿಭಾಗದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ರಾಜಾರೋಷವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಂತೆ ಕಾಣಿಸುತ್ತಿಲ್ಲ ಅನ್ನಿಸುತ್ತೆ..! ಏನೇ ಆಗಲಿ ಇಂತಹ ಅಕ್ರಮವನ್ನ ಕೂಡಲೇ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಎಲ್ಲರ ಆಶಯ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!