ದಾವಣಗೆರೆ: ಲವ್ ಜಿಹಾದ್ ತಡೆಗೆ ಶ್ರೀರಾಮಸೇನೆ ಸಂಘಟನೆಯಿಂದ ಸಹಾಯವಾಣಿ

ರಾಜ್ಯದಲ್ಲಿ ಲವ್​ ಜಿಹಾದ್​ ಸುದ್ದಿ ಅವಾಗವಾಗ ಕೇಳಿಬರುತ್ತಿರುತ್ತದೆ. ಈ ಹಿನ್ನಲೆ ಎಚ್ಚೆತ್ತ ಶ್ರೀರಾಮ ಸೇನೆ ಸಂಘಟನೆ ಇದನ್ನು ತಡೆಯಲು ಮುಂದಾಗಿದ್ದು, ಸಹಾಯವಾಣಿ ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಲವ್‌ ಜಿಹಾದ್‌ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರನ್ನು ಈ ಜಾಲದಿಂದ ಹೊರತರಲು ಈ ಹೊಸ ಪ್ರಯತ್ನ ಮಾಡಲಾಗಿದೆ. 9090443444 ಈ ನಂಬರ್ ಗೆ ಹಿಂದೂ ಯುವತಿಯರಿಗೆ ಕಿರುಕುಳ, ಲವ್ ಜಿಹಾದ್ ಗೆ ಬೀಳಿಸಿಕೊಳ್ಳಲು ಪ್ರಯತ್ನಿಸಿದರೆ ಸಂಪರ್ಕಿಸಬಹುದಾಗಿದೆ. ತೊಂದರೆಗೆ ಸಿಲುಕಿದ ಹಿಂದೂ ಸಹೋದರಿಯರ ರಕ್ಷಣೆಗೆ ಧಾವಿಸುತ್ತೇವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಜಿ. ಕುಲಕರ್ಣಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಲ್ಬುರ್ಗಿ ಯಲ್ಲಿ ಸಿದ್ದಲಿಂಗ ಶ್ರೀ, ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರು, ಮಂಗಳೂರು, ಬಾಗಲಕೋಟೆಯಲ್ಲಿಯೂ ಸಹಾಯವಾಣಿ ಉದ್ಘಾಟನೆ ಮಾಡಲಾಗಿದೆ. ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ ಹಿಂದೂ‌ಸಮಾಜದ‌ ಮೇಲೆ‌ ಕೆಟ್ಟ ಪ್ರಭಾವ ಬೀರುತ್ತಿದೆ. ಇದನ್ನು‌ ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುವುದು ಎಂದರು. ಜೊತೆಗೆ ಸಹಾಯವಾಣಿಗೆ ಕರೆ ಮಾಡಿದವರ ಹೆಸರು ಕೂಡ ಗೌಪ್ಯವಾಗಿರಿಸಲು ಸಂಘಟನೆ ತೀರ್ಮಾನ ಮಾಡಿದೆ.

Leave a Reply

Your email address will not be published. Required fields are marked *

error: Content is protected !!