ವಿದ್ಯಾರ್ಥಿಗಳ ಐಕ್ಯತೆ ಮುರಿಯಲು ಹಿಜಾಬ್ – ಕೇಸರಿ ಶಾಲು ವಿವಾದ: ರಾಷ್ಟ್ರಧ್ವಜ ಹಿಡಿದು ವಿವಾದ ಖಂಡಿಸಿ ಹಾವೇರಿ ಎಸ್ ಎಫ್ ಐ

ಹಾವೇರಿ: ವಿದ್ಯಾರ್ಥಿಗಳ ಐಕ್ಯತೆಯನ್ನು ಮುರಿಯಲು ಕಾಲೇಜು ಕ್ಯಾಂಪಸ್ ಗಳಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ಸೃಷ್ಟಿಸಿರುವುದನ್ನು ಖಂಡಿಸಿ ರಾಷ್ಟ್ರಧ್ವಜ ಹಿಡಿದು ಶಾಂತಿ ಸೌರ್ಹಾದತೆ ಉಳಿಯಬೇಕು, ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ಮೊದಲು ಶಿಕ್ಷಣ ಮುಖ್ಯ.ಹಿಜಾಬ್-ಕೇಸರಿ ಶಾಲ್ ವಿವಾದದ ಕುರಿತು ಉಚ್ಚನ್ಯಾಯಾಲಯದ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ, ವಿದ್ಯಾರ್ಥಿಗಳು ಈ ಅತಿರೇಕದ ವರ್ತನೆಗಳಿಗೆ ಬಲಿಯಾಗಬಾರದೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ಹಾವೇರಿಯ ಹೊರವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಮನವರಿಕೆ ಮಾಡಲಾಯಿತು.
ನೇತೃತ್ವ ವಹಿಸಿದ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ವಾತಾವರಣ ನಿರ್ಮಾಣ ಮಾಡವ ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಹೀಜಾಬ್ ಮತ್ತು ಕೇಸರಿ ಶಾಲುಗಳಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಶಕ್ತಿಗಳಿಗೆ ಒಳಗಾಗಿ ತಮ್ಮ ತನವನ್ನು ಕಳೆದುಕೊಂಡು ಶೈಕ್ಷಣಿಕ ವಾತಾವರಣ ಹದಗೆಡಲು ಬಿಡಬಾರದೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಿತಿ ವಿದ್ಯಾರ್ಥಿಗಳಿಗೆ ಕರೆ ನೀಡುತ್ತದೆ.
ವಿದ್ಯಾರ್ಥಿಗಳು ಕೋಮ ಪ್ರಚೋದನೆ ಶಕ್ತಿಗಳಿಗಾಗಿ ಒಳಗಾಗದೆ, ನಮ್ಮ ದೇಶದ ಹೆಮ್ಮೆಯ ಸಂಕೇತ ಐಕ್ಯತೆ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಿಡಿದು ನಾವೆಲ್ಲರೂ ಐಕ್ಯತೆಯಿಂದ ಹೋರಾಟ ಮಾಡವುದರ ಮೂಲಕ ಈ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬಾಯಿ ಬಾಯಿ ಎಂಬ ಸಂದೇಶವನ್ನು ಸಾರುಬೇಕು ಕುವೆಂಪು, ಭಗತ್ ಸಿಂಗ್, ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಕನಕದಾಸ, ಸಂತ ಶಿಶುನಾಳ ಶರೀಫರು, ಗುರು ಗೋವಿಂದ ಭಟ್ಟರ,ನಾರಯಣಗುರು, ಬಸವಣ್ಣ, ಅನೇಕ ಮಹಾನ್ ವ್ಯಕ್ತಿಗಳು ಸಾಧು-ಸಂತರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವುದರ ಮೂಲಕ ರಾಜ್ಯವನ್ನು ಐಕ್ಯತೆಯಿಂದ ಕಟ್ಟಿದ್ದಾರೆ ಅನೇಕ ಮಹಾನ್ ವ್ಯಕ್ತಿಗಳು ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಹಿಂದೂ-ಮುಸ್ಲಿಂ, ಸಿಖ್ಖ್, ಜೈನ್ ಬೌದ್ಧರು ಎಂದು ಈ ರೀತಿಯಲ್ಲಿ ಗಲಾಟೆ ಮಾಡಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ನಮ್ಮ ರಾಜ್ಯವನ್ನು ವಚನ ಸಾಹಿತ್ಯ, ಭಕ್ತಿ ಚಳುವಳಿಯಿಂದ ಅನೇಕ ವ್ಯಕ್ತಿಗಳ ಸಾಮಾಜಿಕ ಚಳವಳಿ ಮಾಡಿ ನಮ್ಮ ನಾಡನ್ನು ಕಟ್ಟಿದ್ದಾರೆ ಈ ನಾಡು ದೇಶದಲ್ಲಿ ಸುಂದರವಾದ, ಸಮೃದ್ಧವಾದ, ಭವ್ಯ ಕರ್ನಾಟಕ ರಾಜ್ಯವನ್ನು ನಾವು ಎಲ್ಲಾರು ಒಂದೇ ಎಂಬ ಐಕ್ಯತೆಯ ಮಂತ್ರದಿಂದ ಕಟ್ಟಿ ಬೆಳೆಸಬೇಕಾಗಿದೆ.
ವಚನ ಚಳುವಳಿ ,ಸೂಫಿಸಂತರ ಚಳುವಳಿ, ರಾಜಮಹಾರಾಜರು ಇದ್ದಾಗಲೂ ಈ ರೀತಿಯ ವಾತಾವರಣ ನಿರ್ಮಾಣ ಆಗಿರಲಿಲ್ಲ. ಕೋಮುವಾದಿ ಶಕ್ತಿಗಳು ತಮ್ಮ ಹಿಡನ್ ಅಜೆಂಡಾವನ್ನು ರಾಜಕೀಯವಾಗಿ ಪರಿವರ್ತನೆ ಮಾಡಿ ಏನು ಅರಿಯದ ಶಿಕ್ಷಣ ಕಲಿಯುವ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಮೂಲಕ ರಾಜ್ಯವನ್ನು ಒಡೆದು ಆಳುವ ಕೆಲಸ ಸರಕಾರವೇ ಮಾಡುತ್ತಿರುವುದು ದುರಂತ, ರಾಜ್ಯದ ಬಹುತೇಕ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶಿಕ್ಷಕ- ಉಪನ್ಯಾಸಕರು ಇಲ್ಲ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೊಠಡಿಗಳಿಲ್ಲ, ಶೌಚಾಲಯಗಳಿಲ್ಲ, ಕುಡಿಯಲು ಶುದ್ಧವಾದ ನೀರು ಇಲ್ಲ, ಗ್ರಂಥಾಲಯಗಳಿಲ್ಲ ಇವು ಯಾವ ಕೂಡ ಇವರಿಗೆ ವಿಷಯವೇ ಅಲ್ಲ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಮುದಾಯಕ್ಕೆ ಸಮರ್ಪಕವಾಗಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.
ಕಾಣದ ಕೈಗಳು ಕೆಲಸ ಮಾಡುತ್ತಿವೆ ಆದರಿಂದ ಇಂತಹ ಮನಸ್ಥಿತಿಯ ವ್ಯಕ್ತಿಗಳಿಂದ ಇಂದು ಶೈಕ್ಷಣಿಕ ವಾತಾವರಣ ಹದಗೆಡಲು ಕಾರಣವಾಗಿದೆ ಅಂತಹ ಯಾವುದೇ ಶಕ್ತಿಗಳಿಗೆ ವಿದ್ಯಾರ್ಥಿಗಳು ಕಿವಿ ಕೊಡಬಾರದು ಅವರನ್ನು ಹಿಮ್ಮೆಟ್ಟಿಸಬೇಕು ಅದಕ್ಕೆ ಯಾವುದೇ ರೀತಿಯಿಂದ ಪ್ರಚೋದನೆಗೆ ಒಳಗಾಗದೆ ಅವರನ್ನು ಹಿಮ್ಮೆಟ್ಟಿಸಬೇಕು ಅದಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯು ರಾಷ್ಟ್ರ ಧ್ವಜವನ್ನು ಹಿಡಿದು ಮನವರಿಕೆ ಮಾಡುವುದರ ಮೂಲಕ ಕೋಮು ಶಕ್ತಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೇವೆ ಈ ನಮ್ಮ ನಾಡಲ್ಲಿ ನಾವೆಲ್ಲರೂ ಒಂದು, ಕೂಡಿ ಬಾಳಿದರೆ ಸ್ವರ್ಗ ಸುಖ, ಹಿಂದೂ ಮುಸ್ಲಿಂ ಐಕ್ಯತೆ ಚಿರಾಯುವಾಗಲಿ ,ಇಂಕಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳೊಂದಿಗೆ ರಾಜ್ಯದ್ಯಂತ ಹೋರಾಟ ಮಾಡುತ್ತೇವೆ ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಐಕ್ಯತೆಯಿಂದ ಹೋರಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ
” ನಮ್ಮಲ್ಲಿಲ್ಲ ಹಿಂದೂ ರಕ್ತ..!
ನಮ್ಮಲ್ಲಿಲ್ಲ ಮುಸ್ಲಿಂ ರಕ್ತ..!!
ನಮ್ಮಲ್ಲಿಲ್ಲ ಕ್ರೈಸ್ತ ರಕ್ತ..!!
ನಮ್ಮಲಿರುವುದು ಒಂದೇ ರಕ್ತ.
ಅದುವೇ ಮಾನವ ಕೆಂಪು ರಕ್ತ.
ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡೋಣ
ಶಾಂತಿ, ಸೌಹಾರ್ದತೆಯನ್ನು ಉಳಿಸೋಣ.
ಸಂವಿಧಾನದ ಜಾತ್ಯಾತೀತತೆ ಚಿರಾಯುವಾಗಲಿ.
ನಮ್ಮ ದೇಹ ಛಿದ್ರವಾದರೂ.. ದೇಶ ಛಿಧ್ರವಾಗಲು ಬಿಡುವುದಿಲ್ಲ.
ವಿದ್ಯಾರ್ಥಿಗಳ ಐಕ್ಯತೆ ಚಿರಾಯುವಾಗಲಿ
ಎಂದು ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಯುವರಾಜ ಹಂಚಿನಮನಿ, ಹನುಮಂತ ಕೆಂಗೊಡ, ಪ್ರದೀಪ್ ಕುರಿಯವರ, ವಿರೂಪಾಕ್ಷಯ್ಯ ಹೀರೆಮಠ, ಶ್ರೀಕಾಂತ ತಳವಾರ, ಅನಿಲ ಹರಿಜನ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.