Hoardings: ದಾವಣಗೆರೆ ನಗರದಲ್ಲಿ ತಲೆ ಎತ್ತಿದ ಹೋರ್ಡಿಂಗ್ಸ್; ಕಣ್ಣುಮುಚ್ಚಿ ಕುಳಿತ ಪಾಲಿಕೆ.!

ದಾವಣಗೆರೆ: (Hoardings) ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ನೂತನವಾಗಿ ಯಾವುದೇ ಪರವಾನಿಗೆ ಪಡೆಯದೇ ಕಾನೂನು ಬಾಹಿರವಾಗಿ ಬೃಹತ್ ಗಾತ್ರದ ಜಾಹಿರಾತು ಹೋರ್ಡಿಂಗ್ಸ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ದಾವಣಗೆರೆಯ ಡಿಸಿ ಮನೆಯ ಬಳಿಯಿರುವ ಕರ್ನಲ್ ಎಂ.ಬಿ.ರವೀಂದ್ರನಾಥ್ ವೃತ್ತದಲ್ಲಿ ಹೋರ್ಡಿಂಗ್ಗಳು ಮತ್ತು ಫ್ಲೆಕ್ಸ್ ಬ್ಯಾನರ್ ಸ್ಥಾಪಿಸಲು ಉದ್ದೇಶಿಸಿರುವ ಬಗ್ಗೆ ಪರಿಸರ ಪ್ರೇಮಿಗಳು ಕನ್ನಡ ಪರ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆದ ಅಯವ್ಯಯ ಪೂರ್ವಭಾವಿ ಸಭೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಜಿ ಯಲ್ಲಪ್ಪನವರು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಮೇಯರ್ ಅವರ ಗಮನಕ್ಕೆ ತಂದಿದ್ದರು.
ಈ ವಿಚಾರವಾಗಿ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಂಘಟನೆಯ ಪ್ರಮುಖರು, ಈ ವೃತ್ತಕ್ಕೆ ಕಾರ್ಗಿಲ್ ಯುದ್ಧ ವೀರ ಮತ್ತು ದಿವಂಗತ ಎಂ.ಬಿ.ರವೀಂದ್ರನಾಥ್
ವೀರ ಚಕ್ರ ಪ್ರಶಸ್ತಿ ಪುರಸ್ಕೃತರು ದಾವಣಗೆರೆ ನಿವಾಸಿಗಳು ಇವರ ಹೆಸರನ್ನು ಇಡಲಾಗಿದೆ.
ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ಗುಂಡಿ ವೃತ್ತ, ಗ್ರಾಮಾಂತರ ಪೋಲಿಸ್ ಠಾಣೆ ಬಳಿ, ವಿದ್ಯಾರ್ಥಿ ಭವನ, ಶಾಮನೂರು ವೃತ್ತ, ಶಿರಮಗೊಂಡನಹಳ್ಳಿ ಬ್ರಿಡ್ಜ್ ಬಳಿ, ಡಿಸಿ ವೃತ್ತದ ಬಳಿಯ ಕರ್ನಲ್ ಶ್ರೀ.ಎಂ.ಬಿ.ರವೀಂದ್ರನಾಥ್ VIC ವೃತ್ತದಲ್ಲಿ ದೊಡ್ಡ ಹೋರ್ಡಿಂಗ್ಗಳನ್ನು ಹಾಕಲು ಅನುಮತಿ ನೀಡಲು ಮಹಾನಗರ ಪಾಲಿಕೆಯಲ್ಲಿ ಪ್ರಸ್ತಾವನೆ ಇರುವುದು ನಮ್ಮ ಗಮನಕ್ಕೆ ಬಂದಿದೆ.
ಈ ಸ್ಥಳದಲ್ಲಿ ಹೋರ್ಡಿಂಗ್ಗಳು ಮತ್ತು ಫ್ರೆಕ್ಸ್ ಬ್ಯಾನರ್ಗಳನ್ನು ಹಾಕುವುದರಿಂದ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ವೃತ್ತಕ್ಕೆ ಅಡ್ಡಿ, ಅಡಚಣೆ ಉಂಟುಮಾಡುತ್ತದೆ. ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಇಲ್ಲಸಲ್ಲದ ತೊಂದರೆಯಾಗುತ್ತದೆ.
ಇದಲ್ಲದೆ, ಇದು ನಮ್ಮ ರಾಷ್ಟ್ರೀಯ ದೇಶಪ್ರೇಮಿಗಳು ಮತ್ತು ಯುದ್ಧ ವೀರರಿಗೆ ಅವಮಾನ ಮಾಡಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಲ್ ಎಂ.ಬಿ.ರವೀಂದ್ರನಾಥ್ ಸೇರಿದಂತೆ ದಾವಣಗೆರೆಯ ವಿವಿಧ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಹೋರ್ಡಿಂಗ್ಗಳು ಮತ್ತು ಪ್ಲೆಕ್ಸ್ ಬ್ಯಾನರ್ಗಳ ಅಳವಡಿಕೆಗೆ ಅನುಮತಿ ನೀಡದಂತೆ ತಡೆಯಲು ನೀವು ಮಧ್ಯಪ್ರವೇಶಿಸಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಗೌರವಪೂರ್ವಕವಾಗಿ ವಿನಂತಿಸುತ್ತೇವೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.